<p>ಮಹಾರಾಜರು ಚಿಂತಾಕ್ರಾಂತರಾಗಿ ಕುಳಿತಿದ್ದರು. ಸಚಿವರು ಬಂದು, ‘ಪ್ರಭು, ತಾವು ಪದವಿ ತ್ಯಾಗದ ಪ್ರಕಟಣೆ ನೀಡಿದ್ದು ಜನರ ಸಿಂಪಥಿಗೋ, ವಿರೋಧಿಗಳ ಕಿತಾಪತಿಗೋ...?’ ಕೇಳಿದರು.</p>.<p>ಹುಸಿನಗೆ ನಕ್ಕ ಪ್ರಭುಗಳು, ‘ಅಧಿಕಾರಕ್ಕೆ ಜೋತು ಬೀಳುವ ಜಾಯಮಾನ ನಮ್ಮದಲ್ಲ ಎನ್ನುವ ಸಂದೇಶ ಸಾರಲು’.</p>.<p>‘ರೆಬೆಲ್ಗಳು ಡಬಲ್ ಆಗುತ್ತಿದ್ದಾರೆ, ತಮ್ಮ ವಿರುದ್ಧ ತುತ್ತೂರಿ ಊದುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಪ್ರಭು...’</p>.<p>‘ತುತ್ತೂರಿಗಳ ಹಿಂದೆ ದಿಲ್ಲಿ ದೊರೆಗಳ ಪಿತೂರಿಯೂ ಇದೆ ಎಂಬ ಅರಿವು ನಮಗೂ ಇದೆ’.</p>.<p>‘ತುತ್ತೂರಿ, ಕಿವಿ ಊದುವವರ ಪಟ್ಟಿ ಸಿದ್ಧ ಮಾಡಿದ್ದೇನೆ ಪ್ರಭು. ಸಮಯ ಬಂದಾಗ ಅವರಿಗೆ ತಮಟೆ, ಜಾಗಟೆ ಬಾರಿಸಿಬಿಡೋಣ...’ ಎಂದರು ಮಂತ್ರಿ. ಪ್ರಭುಗಳು ಮತ್ತೊಮ್ಮೆ ನಕ್ಕರು.</p>.<p>‘ತಮ್ಮ ಆಡಳಿತ ಉತ್ತಮವಾಗಿದೆ, ರಾಜ್ಯದಲ್ಲಿ ಕೊರೊನಾ ಕಂಟ್ರೋಲಿಗೆ ಬರುತ್ತಿದೆ’ ಓಲೈಸಿದರು.</p>.<p>‘ನಾಯಕತ್ವ ಬದಲಾವಣೆ ಅಂತ ಪದೇಪದೇ ದಿಲ್ಲಿಗೆ ಹೋಗಿ ದೂರುವವರನ್ನು ಮೊದಲು ಕಂಟ್ರೋಲ್ ಮಾಡಬೇಕು...’</p>.<p>‘ಪ್ರಭು ಕೊರೊನಾ ನೆಪ ಮಾಡಿ, ದೆಹಲಿ ವಿಮಾನಗಳನ್ನು ರದ್ದು ಮಾಡಿ, ಆಗ ದೂರುದಾರರು ಕಂಟ್ರೋಲಿಗೆ ಬರುತ್ತಾರೆ’.</p>.<p>ಇನ್ನೊಮ್ಮೆ ನಕ್ಕ ಪ್ರಭುಗಳು, ‘ನಮಗೆ ಏಜು ಜಾಸ್ತಿಯಾಗಿದೆ, ಆಡಳಿತದ ಕ್ರೇಜು ಕಮ್ಮಿಯಾಗಿದೆ ಎಂದು ನೀವೇ ಅಪಪ್ರಚಾರ ಮಾಡುತ್ತಿರುವಿರಿ...’</p>.<p>‘ಹೆಹ್ಹೆಹ್ಹೆ... ಅದು ಹಾಗಲ್ಲ ಪ್ರಭು, ಈ ಇಳಿವಯಸ್ಸಿನಲ್ಲಿ ತಮಗೆ ರಾಜ್ಯಭಾರದ ಭಾರ ಹೆಚ್ಚಾಗಿದೆ. ಈ ಸಮಯದಲ್ಲಿ ತಾವು ಆರೋಗ್ಯ, ವೈರಾಗ್ಯದ ಕಡೆ ಗಮನಹರಿಸಲಿ ಅನ್ನೋ ಕಾಳಜಿಯಿಂದ ಹಾಗೆ ಹೇಳಿದೆ...’</p>.<p>ಅಂತಿಮ ನಗೆ ಬೀರಿದ ಪ್ರಭುಗಳು ತಕ್ಷಣ ಸಿಟ್ಟಿಗೆದ್ದು, ‘ವಿರೋಧಿ ಗುಂಪು ಕಟ್ಟಿಕೊಂಡು ನಮ್ಮನ್ನು ಕೆಳಗಿಳಿಸಿ ರಾಜಪದವಿಗೇರಬೇಕೆಂಬ ನಿಮ್ಮ ಒಳಸಂಚು ನಮಗೂ ಗೊತ್ತು, ಈ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಇರುವ<br />ಮಂತ್ರಿ ಪದವಿಯನ್ನೂ ಕಳೆದುಕೊಳ್ಳುವಿರಿ...’ ಎಂದು ಗುಡುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾರಾಜರು ಚಿಂತಾಕ್ರಾಂತರಾಗಿ ಕುಳಿತಿದ್ದರು. ಸಚಿವರು ಬಂದು, ‘ಪ್ರಭು, ತಾವು ಪದವಿ ತ್ಯಾಗದ ಪ್ರಕಟಣೆ ನೀಡಿದ್ದು ಜನರ ಸಿಂಪಥಿಗೋ, ವಿರೋಧಿಗಳ ಕಿತಾಪತಿಗೋ...?’ ಕೇಳಿದರು.</p>.<p>ಹುಸಿನಗೆ ನಕ್ಕ ಪ್ರಭುಗಳು, ‘ಅಧಿಕಾರಕ್ಕೆ ಜೋತು ಬೀಳುವ ಜಾಯಮಾನ ನಮ್ಮದಲ್ಲ ಎನ್ನುವ ಸಂದೇಶ ಸಾರಲು’.</p>.<p>‘ರೆಬೆಲ್ಗಳು ಡಬಲ್ ಆಗುತ್ತಿದ್ದಾರೆ, ತಮ್ಮ ವಿರುದ್ಧ ತುತ್ತೂರಿ ಊದುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಪ್ರಭು...’</p>.<p>‘ತುತ್ತೂರಿಗಳ ಹಿಂದೆ ದಿಲ್ಲಿ ದೊರೆಗಳ ಪಿತೂರಿಯೂ ಇದೆ ಎಂಬ ಅರಿವು ನಮಗೂ ಇದೆ’.</p>.<p>‘ತುತ್ತೂರಿ, ಕಿವಿ ಊದುವವರ ಪಟ್ಟಿ ಸಿದ್ಧ ಮಾಡಿದ್ದೇನೆ ಪ್ರಭು. ಸಮಯ ಬಂದಾಗ ಅವರಿಗೆ ತಮಟೆ, ಜಾಗಟೆ ಬಾರಿಸಿಬಿಡೋಣ...’ ಎಂದರು ಮಂತ್ರಿ. ಪ್ರಭುಗಳು ಮತ್ತೊಮ್ಮೆ ನಕ್ಕರು.</p>.<p>‘ತಮ್ಮ ಆಡಳಿತ ಉತ್ತಮವಾಗಿದೆ, ರಾಜ್ಯದಲ್ಲಿ ಕೊರೊನಾ ಕಂಟ್ರೋಲಿಗೆ ಬರುತ್ತಿದೆ’ ಓಲೈಸಿದರು.</p>.<p>‘ನಾಯಕತ್ವ ಬದಲಾವಣೆ ಅಂತ ಪದೇಪದೇ ದಿಲ್ಲಿಗೆ ಹೋಗಿ ದೂರುವವರನ್ನು ಮೊದಲು ಕಂಟ್ರೋಲ್ ಮಾಡಬೇಕು...’</p>.<p>‘ಪ್ರಭು ಕೊರೊನಾ ನೆಪ ಮಾಡಿ, ದೆಹಲಿ ವಿಮಾನಗಳನ್ನು ರದ್ದು ಮಾಡಿ, ಆಗ ದೂರುದಾರರು ಕಂಟ್ರೋಲಿಗೆ ಬರುತ್ತಾರೆ’.</p>.<p>ಇನ್ನೊಮ್ಮೆ ನಕ್ಕ ಪ್ರಭುಗಳು, ‘ನಮಗೆ ಏಜು ಜಾಸ್ತಿಯಾಗಿದೆ, ಆಡಳಿತದ ಕ್ರೇಜು ಕಮ್ಮಿಯಾಗಿದೆ ಎಂದು ನೀವೇ ಅಪಪ್ರಚಾರ ಮಾಡುತ್ತಿರುವಿರಿ...’</p>.<p>‘ಹೆಹ್ಹೆಹ್ಹೆ... ಅದು ಹಾಗಲ್ಲ ಪ್ರಭು, ಈ ಇಳಿವಯಸ್ಸಿನಲ್ಲಿ ತಮಗೆ ರಾಜ್ಯಭಾರದ ಭಾರ ಹೆಚ್ಚಾಗಿದೆ. ಈ ಸಮಯದಲ್ಲಿ ತಾವು ಆರೋಗ್ಯ, ವೈರಾಗ್ಯದ ಕಡೆ ಗಮನಹರಿಸಲಿ ಅನ್ನೋ ಕಾಳಜಿಯಿಂದ ಹಾಗೆ ಹೇಳಿದೆ...’</p>.<p>ಅಂತಿಮ ನಗೆ ಬೀರಿದ ಪ್ರಭುಗಳು ತಕ್ಷಣ ಸಿಟ್ಟಿಗೆದ್ದು, ‘ವಿರೋಧಿ ಗುಂಪು ಕಟ್ಟಿಕೊಂಡು ನಮ್ಮನ್ನು ಕೆಳಗಿಳಿಸಿ ರಾಜಪದವಿಗೇರಬೇಕೆಂಬ ನಿಮ್ಮ ಒಳಸಂಚು ನಮಗೂ ಗೊತ್ತು, ಈ ನಡವಳಿಕೆ ಬದಲಿಸಿಕೊಳ್ಳದಿದ್ದರೆ ಇರುವ<br />ಮಂತ್ರಿ ಪದವಿಯನ್ನೂ ಕಳೆದುಕೊಳ್ಳುವಿರಿ...’ ಎಂದು ಗುಡುಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>