‘ಅಲ್ಲಾ ಕನ್ರೋ, ಮೋದಕ ವಸ್ತು ಪ್ರಕರಣಕ್ಕೆ ಸಂಬಂಧಪಟ್ಟಂಗೆ ಯಾರನ್ನೂ ಬುಡೀಕಿಲ್ಲಾ ಅಂತ ಗ್ರಹಸಚಿವ ಗುರುಗುಟ್ಟ್ಯದೆ!’ ಯಂಟಪ್ಪಣ್ಣನ ಮಾತು ಕೇಳಿ ನಮಗೆ ಗಾಬರಿಯಾಯ್ತು.
‘ಅಂದ್ರೆ ಗಣೇಶನ ಮುಂದೆ ಮೋದಕ ಮಡಗಂಗಿಲ್ಲ ಅಂದದಾ?’ ವಿಚಾರಿಸಿದೆ.
‘ಬಡ್ಡೆತ್ತುದೇ, ಯಂಟಪ್ಪಣ್ಣಗೆ ಕಣ್ಣು ಸರಿಯಾಗಿ ಕಾಣದೆ ಮಾದಕ ವಸ್ತು ಪ್ರಕರಣ ಅನ್ನದ್ನ ಮೋದಕ ವಸ್ತು ಅಂತ ಓದಿಕ್ಯಂಡದೆ ಕನೋ’ ಅಂತ ವಿವರಣೆ ಕೊಟ್ಟರು. ‘ಯಾಸೆಟ್ಗ ಬುಡಿ ಅತ್ತಗೆ. ಹಬ್ಬದ ಸೀಜನ್ನಗೆ 6ರಿಂದ 8ನೇ ಕ್ಲಾಸು ಮಕ್ಕಳಿಸ್ಕೂಲು ಸುರು ಮಾಡ್ಯದಲ್ಲಾ ನಾಗಣ್ಣ ಸರಿ ಅಂತೀರಾ?’ ಅಂದು ತುರೇಮಣೆಗೆ ಕೇಳಿದೆ.