‘ಅದ್ಯಾವ್ದೂ ಅಲ್ಲ. ಎರಡು ಪಕ್ಷದೋರೂ ಸಮ ಇದೀವಿ. ಎದುರು ಪಕ್ಷದೋರು ತಮ್ಮ ಕಡೆ ಬಂದ್ರೆ ನನ್ನ ಪಂಚಾಯಿತಿ ಚೇರ್ಮನ್ ಮಾಡ್ತೀವೀಂತಿದಾರೆ. ನಮ್ಮೋರಂತಾರೆ, ಹಂಗ್ಮಾಡಿದ್ರೆ ಕಿಡ್ನಾಪ್ ಆಗ್ತೀಯಾಂತ. ಏನ್ ಮಾಡೋಕೂ ತೋಚ್ತಿಲ್ಲ’.
‘ಇದು ನಮ್ಮ ಕರುನಾಡ ರಾಜಕೀಯದ ಮಿನಿ ರೂಪ ಕಣಯ್ಯ. (ಏ)ಕಾಂಗಿ, ಕಮಲವ್ವ, ರೈತ ಮಹಿಳೆ ಮಕ್ಕಳು ಮಾಡ್ತಿರೋದು ಇದನ್ನೇ ತಾನೇ? ಅವ್ರ ಕರಿಬಂಟನ ಕುರ್ಚಿ ಕಾಳಗ ನಿಂಗಿನ್ನೂ ಅರ್ಥವಾಗಿಲ್ಲ. ಹೋಗಿ, ನಿನ್ನ ಸಮಸ್ಯೆಗೆ ಭಾಜಪ್ಪನೋರ ಸಲಹೆ ತಗೋ’.
‘ಅವ್ರಿಗೆಲ್ಲೈತಪ್ಪಾ ಪುರಸತ್ತು? ಸಂಕ್ರಾಂತಿಯಿಂದ ‘ಸಿಡಿ’ಮಿಡಿಗೊಂಡಿರೋ ಮನೆ ಮಕ್ಳನ್ನ ಸಂಭಾಳಿಸೋದ್ರಲ್ಲೇ ಹೈರಾಣಾಗಿದಾರಲ್ಲ’.
‘ಹಾಗಾದ್ರೆ ಪದ್ಮನಾಭನಗರ ಯಾತ್ರೆ ಮಾಡಿ ದೊಡ್ಡೋ(ಗೌಡ)ರನ್ನ ಕೇಳೋ. ಇಂಥ ಸಮಸ್ಯೆ ಬಗೆಹರಿಸೋದ್ರಲ್ಲಿ ಅವ್ರು ಎತ್ತಿದ ಕೈ’.
‘ಆಗ್ಲಯ್ಯ, ಧನ್ಯವಾದ. ನಮ್ಮ ಥ್ಯಾಂಕ್ಸ್ ಗಿವಿಂಗ್ ಪಾರ್ಟಿಗೆ ಬರಬೇಕು’ ಎಂದ ಗೆಳೆಯ ಕಣ್ಣು ಹೊಡೆದ!