<p>‘ಜೈ ಹಿಂದ್...’ ಟಿ.ವಿ. ನೋಡುತ್ತಾ ಕೂಗಿದಳು ಹೆಂಡತಿ. ಇನ್ನೂ ನಿದ್ದೆಗಣ್ಣಲ್ಲಿ ಇದ್ದ ನಾನೂ ‘ಜೈ ಹಿಂದ್’ ಎಂದು ಅರಿವಿಲ್ಲದೆ ಕೂಗುತ್ತಾ, ‘ಏನಾಯ್ತೆ ನಿನಗೆ ಹೀಗೆ ಕೂಗ್ತಿದ್ದೀಯ’ ಎಂದೆ.</p>.<p>‘ಆಪರೇಷನ್ ಸಿಂಧೂರ...’</p>.<p>‘ಅಂದ್ರೆ?’</p>.<p>‘ನಮ್ಮ ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನೆಲ್ಲ ಉಡೀಸ್ ಮಾಡಿದೆ’ ಯುದ್ಧ ಗೆದ್ದ ಸಂಭ್ರಮದಲ್ಲಿ ಹೇಳಿದಳು ಹೆಂಡತಿ.</p>.<p>‘ಹೇಗೆ ದಾಳಿ ಮಾಡಿದ್ದಾರೆ?’</p>.<p>‘ಮಧ್ಯರಾತ್ರಿ ಏರ್ಸ್ಟ್ರೈಕ್, ಕ್ಷಿಪಣಿ ದಾಳಿ’ ಉತ್ಸಾಹದಿಂದ ಹೇಳಿದಳು.</p>.<p>‘ಅಯ್ಯೋ ಪಾಪ?’ ಎಂದೆ ಬೇಸರದಲ್ಲಿ.</p>.<p>‘ಪಾಪ! ಯಾರಿಗೆ ರೀ ಪಾಪ ಅಂತಿದ್ದೀರಿ, ಅಮಾಯಕರನ್ನು ಸಾಯಿಸಿದವರ ಮೇಲೆ ನಿಮಗೇನಿಷ್ಟು ಅನುಕಂಪ?’</p>.<p>‘ಏನೇ ಆಗಲಿ, ಯುದ್ಧಕ್ಕಿಂತ ಶಾಂತಿ ಮುಖ್ಯ. ನಮ್ಮದು ಶಾಂತಿಪ್ರಿಯ ದೇಶ’.</p>.<p>‘ಅದಕ್ಕೇ ಟೆರರಿಸ್ಟ್ಗಳ ಮೇಲಷ್ಟೇ ಅಟ್ಯಾಕ್ ಮಾಡಿರೋದು, ಪಾಕಿಸ್ತಾನದ ಜನಗಳ ಮೇಲೆ ಮಾಡಿಲ್ಲ’.</p>.<p>‘ಆದರೂ ಅವರು ಮಲಗಿರುವಾಗ ದಾಳಿ ಮಾಡಿದ್ದು ಸರಿ ಕಾಣಿಸ್ತಿಲ್ಲ’ ಶಾಂತಿಪ್ರಿಯನಂತೆ ಹೇಳಿದೆ.</p>.<p>‘ಅವರು ಎದ್ದ ಮೇಲೆ ಅವರಿಗೆ ಊಟ-ತಿಂಡಿ ಎಲ್ಲ ಕೊಡಿಸಿ, ಹೊಸ ಬಟ್ಟೆ ತೊಡಿಸಿ ಆಮೇಲೆ ಅಟ್ಯಾಕ್ ಮಾಡಬೇಕಿತ್ತಾ?’ ವ್ಯಂಗ್ಯವಾಡಿದಳು.</p>.<p>‘ಆದರೂ, ದೇಶದಲ್ಲಿ ಅಣಕು ಸಮರಾಭ್ಯಾಸ ಮಾಡ್ತೀವಿ ಅಂತ ಹೇಳಿ, ಉಗ್ರರ ಮೇಲೆ ರಿಯಲ್ ಅಟ್ಯಾಕ್ ಮಾಡಬಾರದಿತ್ತು’ ಕರುಣಾರಸದಲ್ಲಿ ಹೇಳಿದೆ.</p>.<p>‘ಅವನ್ಯಾರೋ ಉಗ್ರ, ಹೋಗಿ ಮೋದಿಗೆ ಹೇಳು ಅಂದಿದ್ದನಂತಲ್ಲ, ಅದಕ್ಕೇ ಮೋದಿ ಬೆಳಗಾಗೋದರೊಳಗೆ ದೀಪಾವಳಿ ಮಾಡಿ ತೋರಿಸಿದ್ದಾರೆ’ ಹೆಮ್ಮೆಯಿಂದ ಹೇಳಿದಳು.</p>.<p>‘ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡ್ತೀರಿ ಓಕೆ, ದೇಶದಲ್ಲಿನ ಭ್ರಷ್ಟರ ಮೇಲೆ ದಾಳಿ ಯಾವಾಗ?’</p>.<p>‘ಅದು ಸೇನೆ ಕೆಲಸ ಅಲ್ಲ, ಜನರ ಕೆಲಸ. ಎಲೆಕ್ಷನ್ ಬಂದಾಗ ಜನರೇ ಆ ಕೆಲಸ ಮಾಡಬೇಕು’ ಎನ್ನುತ್ತಾ ಟಿ.ವಿ. ಕಡೆ ಮುಖ ಮಾಡಿದಳು ಹೆಂಡತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಜೈ ಹಿಂದ್...’ ಟಿ.ವಿ. ನೋಡುತ್ತಾ ಕೂಗಿದಳು ಹೆಂಡತಿ. ಇನ್ನೂ ನಿದ್ದೆಗಣ್ಣಲ್ಲಿ ಇದ್ದ ನಾನೂ ‘ಜೈ ಹಿಂದ್’ ಎಂದು ಅರಿವಿಲ್ಲದೆ ಕೂಗುತ್ತಾ, ‘ಏನಾಯ್ತೆ ನಿನಗೆ ಹೀಗೆ ಕೂಗ್ತಿದ್ದೀಯ’ ಎಂದೆ.</p>.<p>‘ಆಪರೇಷನ್ ಸಿಂಧೂರ...’</p>.<p>‘ಅಂದ್ರೆ?’</p>.<p>‘ನಮ್ಮ ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನೆಲ್ಲ ಉಡೀಸ್ ಮಾಡಿದೆ’ ಯುದ್ಧ ಗೆದ್ದ ಸಂಭ್ರಮದಲ್ಲಿ ಹೇಳಿದಳು ಹೆಂಡತಿ.</p>.<p>‘ಹೇಗೆ ದಾಳಿ ಮಾಡಿದ್ದಾರೆ?’</p>.<p>‘ಮಧ್ಯರಾತ್ರಿ ಏರ್ಸ್ಟ್ರೈಕ್, ಕ್ಷಿಪಣಿ ದಾಳಿ’ ಉತ್ಸಾಹದಿಂದ ಹೇಳಿದಳು.</p>.<p>‘ಅಯ್ಯೋ ಪಾಪ?’ ಎಂದೆ ಬೇಸರದಲ್ಲಿ.</p>.<p>‘ಪಾಪ! ಯಾರಿಗೆ ರೀ ಪಾಪ ಅಂತಿದ್ದೀರಿ, ಅಮಾಯಕರನ್ನು ಸಾಯಿಸಿದವರ ಮೇಲೆ ನಿಮಗೇನಿಷ್ಟು ಅನುಕಂಪ?’</p>.<p>‘ಏನೇ ಆಗಲಿ, ಯುದ್ಧಕ್ಕಿಂತ ಶಾಂತಿ ಮುಖ್ಯ. ನಮ್ಮದು ಶಾಂತಿಪ್ರಿಯ ದೇಶ’.</p>.<p>‘ಅದಕ್ಕೇ ಟೆರರಿಸ್ಟ್ಗಳ ಮೇಲಷ್ಟೇ ಅಟ್ಯಾಕ್ ಮಾಡಿರೋದು, ಪಾಕಿಸ್ತಾನದ ಜನಗಳ ಮೇಲೆ ಮಾಡಿಲ್ಲ’.</p>.<p>‘ಆದರೂ ಅವರು ಮಲಗಿರುವಾಗ ದಾಳಿ ಮಾಡಿದ್ದು ಸರಿ ಕಾಣಿಸ್ತಿಲ್ಲ’ ಶಾಂತಿಪ್ರಿಯನಂತೆ ಹೇಳಿದೆ.</p>.<p>‘ಅವರು ಎದ್ದ ಮೇಲೆ ಅವರಿಗೆ ಊಟ-ತಿಂಡಿ ಎಲ್ಲ ಕೊಡಿಸಿ, ಹೊಸ ಬಟ್ಟೆ ತೊಡಿಸಿ ಆಮೇಲೆ ಅಟ್ಯಾಕ್ ಮಾಡಬೇಕಿತ್ತಾ?’ ವ್ಯಂಗ್ಯವಾಡಿದಳು.</p>.<p>‘ಆದರೂ, ದೇಶದಲ್ಲಿ ಅಣಕು ಸಮರಾಭ್ಯಾಸ ಮಾಡ್ತೀವಿ ಅಂತ ಹೇಳಿ, ಉಗ್ರರ ಮೇಲೆ ರಿಯಲ್ ಅಟ್ಯಾಕ್ ಮಾಡಬಾರದಿತ್ತು’ ಕರುಣಾರಸದಲ್ಲಿ ಹೇಳಿದೆ.</p>.<p>‘ಅವನ್ಯಾರೋ ಉಗ್ರ, ಹೋಗಿ ಮೋದಿಗೆ ಹೇಳು ಅಂದಿದ್ದನಂತಲ್ಲ, ಅದಕ್ಕೇ ಮೋದಿ ಬೆಳಗಾಗೋದರೊಳಗೆ ದೀಪಾವಳಿ ಮಾಡಿ ತೋರಿಸಿದ್ದಾರೆ’ ಹೆಮ್ಮೆಯಿಂದ ಹೇಳಿದಳು.</p>.<p>‘ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡ್ತೀರಿ ಓಕೆ, ದೇಶದಲ್ಲಿನ ಭ್ರಷ್ಟರ ಮೇಲೆ ದಾಳಿ ಯಾವಾಗ?’</p>.<p>‘ಅದು ಸೇನೆ ಕೆಲಸ ಅಲ್ಲ, ಜನರ ಕೆಲಸ. ಎಲೆಕ್ಷನ್ ಬಂದಾಗ ಜನರೇ ಆ ಕೆಲಸ ಮಾಡಬೇಕು’ ಎನ್ನುತ್ತಾ ಟಿ.ವಿ. ಕಡೆ ಮುಖ ಮಾಡಿದಳು ಹೆಂಡತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>