‘ಬರೋಬ್ಬರಿ ಅದ. ಅತೃಪ್ತರನ್ನು ಅನರ್ಹರು ಅಂತ ಸ್ಪೀಕರಣ್ಣ ಹೇಳಿ ‘ಶಾ’ಣ್ಯಾನ ಕೆಲಸ ಹಗುರ ಮಾಡಿದ ನೋಡು. ಇಲ್ಲಕ್ಕಂದ್ರ ರೆಸಾರ್ಟಿನಾಗಿದ್ದವರಲ್ಲಿ ಯಾರಿಗಿ ಕುರ್ಚಿ ಕೊಡೂದು, ಯಾರಿಗಿಲ್ಲ ಅಂತ ಬಲು ಚಿಂತೆಯಾಗ್ತಿತ್ತು. ಪಾಪ... ಕುಮಾರಣ್ಣ, ಲಿಂಬೆಯಣ್ಣ ಎಷ್ಟ್ ದೇವಸ್ಥಾನ ಸುತ್ತಿದ್ರು, ಎಷ್ಟ್ ಹರಕೆ ಹೊತ್ರು... ಎಲ್ಲ ದೇವರೂ ಹೀಂಗ ‘ಕೈ’ ಕೊಡೂದ. ಶಾಸಕರಂಗೆ ದೇವರುಗಳೂ ಪಕ್ಷಾಂತರ ಮಾಡಿದಂಗೆ ಆತಿಲ್ಲೋ... ಅದೆಷ್ಟೋ ಕೋಟಿ ರೊಕ್ಕದಾಗ ಕುಕ್ಕೆ ಸುಬ್ರಹ್ಮಣ್ಯಂಗೆ ಚಿನ್ನದ ರಥ ಮಾಡಿಸಕ್ಕೆ ಕುಮಾರಣ್ಣ ಕಟ್ಟಪ್ಪಣೆ ಮಾಡಿದ್ದರಲ್ಲ. ಆ ಸುಬ್ರಹ್ಮಣ್ಯ ಅತ್ತಾಗಿ ನಿಖಿಲನನ್ನೂ ಗೆಲ್ಲಿಸಲಿಲ್ಲ, ಇತ್ತಾಗಿ ಸಿಎಂ ಕುರ್ಚಿನೂ ಉಳಿಸಲಿಲ್ಲ’ ಬೆಕ್ಕಣ್ಣ ಲೊಚಗುಟ್ಟಿತು.