<p>‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೀನಿ’ ಹೆಂಡ್ತಿಗೆ ಹೇಳಿದ ಶಂಕ್ರಿ.</p>.<p>‘ಬೇಡರೀ, ಹೋದ ಎಲೆಕ್ಷನ್ ಖರ್ಚಿಗೆ ನನ್ನ ಒಡವೆ ಮಾರಿದ್ರಿ, ಈಗ ಉಳಿದಿರೋ ನನ್ನನ್ನೂ ಮಾರಿಬಿಡ್ತಿರೇನು...?’ ಸುಮಿಗೆ ಸಿಟ್ಟು ಬಂತು.</p>.<p>‘ಹೆಂಡ್ತಿ ಮಾರಿ ಸತ್ಯ ಹರಿಶ್ಚಂದ್ರನಾಗೊಲ್ಲ, ಗೆದ್ದು ಮೆಂಬರ್ ಆಗ್ತೀನಿ, ಆಮೇಲೆ ಪ್ರೆಸಿಡೆಂಟ್ ಆಗ್ತೀನಿ’.</p>.<p>ಅಷ್ಟೊತ್ತಿಗೆ ಗುಂಪು ಬಂದಿತು, ‘ಆ್ಯನ್ಯುಯಲ್ ಪರೀಕ್ಷೆ ಫೇಲಾದ್ರೆ ಸಪ್ಲಿಮೆಂಟರಿ ಕಟ್ಟಬೇಕು, ಶಂಕ್ರಿ ಅಣ್ಣನ್ನ ನಾವು ಎಲೆಕ್ಷನ್ನಲ್ಲಿ ಗೆಲ್ಲಿಸ್ತೀವಿ’ ಅಂದರು.</p>.<p>‘ಹಾಗಂತ, ಬರೀ ಕೈಯಲ್ಲಿ ಎಲೆಕ್ಷನ್ ಮಾಡಕ್ಕಾಗುತ್ತಾ?’ ಅಂದಳು ಸುಮಿ.</p>.<p>‘ಅಸೆಂಬ್ಲಿ ಎಲೆಕ್ಷನ್ನಲ್ಲಿ ಕ್ಯಾಂಡಿಡೇಟ್ಗಳು ಕೈ ತುಂಬಾ ಕೊಟ್ಟು ಜನರ ಮನಸು ಕೆಡಿಸಿ, ವ್ಯವಸ್ಥೆ ಹಾಳು ಮಾಡಿದ್ದಾರೆ. ನಾವು ಮತ ಕೇಳಲು ಹೋದ್ರೆ ಜನ ಕೈ-ಬಾಯಿ ನೋಡ್ತಾರೆ’ ಅಂದ ಒಬ್ಬ.</p>.<p>‘ಎದುರಾಳಿ ಕ್ಯಾಂಡಿಡೇಟು ತಿಪ್ಪೇಶಿ ಹೋದ ತಿಂಗಳು ಮಕ್ಕಳ ಬರ್ತ್ಡೇ ನೆಪದಲ್ಲಿ ಊರವರಿಗೆ ಬಾಡೂಟ ಹಾಕಿಸಿ, ಗಂಡಸರಿಗೆ ರೇಷ್ಮೆ ಷರ್ಟು, ಪಂಚೆ, ಹೆಂಗಸರಿಗೆ ರೇಷ್ಮೆ ಸೀರೆ ಹಂಚಿದ್ದ. ನೀವು ಬೆಳ್ಳಿ ನಾಣ್ಯನೋ ಚಿನ್ನದ ಚೂರನ್ನೋ ಕೊಡಬೇಕಾಗುತ್ತದೆ’ ಅಂದ ಮತ್ತೊಬ್ಬ.</p>.<p>‘ಎಲೆಕ್ಷನ್ ಅಧಿಕಾರಿಗಳಿಗೆ ಗೊತ್ತಾದ್ರೆ ಬಂದು ಎಲ್ಲಾ ಬಾಚಿಕೊಂಡುಹೋಗಿ, ಕೇಸ್ ಹಾಕ್ತಾರೆ’ ಎಂದ ಇನ್ನೊಬ್ಬ.</p>.<p>‘ಆದ್ರೂ ಎಲೆಕ್ಷನ್ ಖರ್ಚಿಗೆ ದುಡ್ಡು ಬೇಕಲ್ಲ, ದುಡ್ಡಿಗೆ ಏನು ಮಾಡೋದು?’ ಶಂಕ್ರಿಗೆ ಚಿಂತೆಯಾಯ್ತು.</p>.<p>‘ಒಳ್ಳೆ ರೇಟ್ ಕೊಡುಸ್ತೀನಿ ಹೊಲ ಮಾರಿಬಿಡಿ. ಗೆದ್ದು ಮೆಂಬರ್ ಆಗಿ, ದೇವರು ಕಣ್ಣುಬಿಟ್ರೆ ಹತ್ತಾರು ಎಕರೆ ಕೊಳ್ಳಬಹುದು’ ಎಂದು ಆಸೆ ಚಿಗುರಿಸಿ ಹೋದರು.</p>.<p>ನಂತರ, ಪಕ್ಕದ ಮನೆ ಪದ್ಮಾ ಬಂದು, ‘ಈಗ ಬಂದಿದ್ದವರು ಏನು ಹೇಳಿದ್ರು? ಮನೆಹಾಳರು, ಕಮಿಷನ್ ಆಸೆಗೆ ಈಗಾಗಲೇ ನಾಲ್ಕು ಜನರ ಹೊಲ ಮಾರಿಸಿಬಿಟ್ಟಿದ್ದಾರೆ, ನೀವು ಹುಷಾರು’ ಎಂದು ಎಚ್ಚರಿಸಿದಾಗ, ಶಂಕ್ರಿ, ಸುಮಿ ದಂಗಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೀನಿ’ ಹೆಂಡ್ತಿಗೆ ಹೇಳಿದ ಶಂಕ್ರಿ.</p>.<p>‘ಬೇಡರೀ, ಹೋದ ಎಲೆಕ್ಷನ್ ಖರ್ಚಿಗೆ ನನ್ನ ಒಡವೆ ಮಾರಿದ್ರಿ, ಈಗ ಉಳಿದಿರೋ ನನ್ನನ್ನೂ ಮಾರಿಬಿಡ್ತಿರೇನು...?’ ಸುಮಿಗೆ ಸಿಟ್ಟು ಬಂತು.</p>.<p>‘ಹೆಂಡ್ತಿ ಮಾರಿ ಸತ್ಯ ಹರಿಶ್ಚಂದ್ರನಾಗೊಲ್ಲ, ಗೆದ್ದು ಮೆಂಬರ್ ಆಗ್ತೀನಿ, ಆಮೇಲೆ ಪ್ರೆಸಿಡೆಂಟ್ ಆಗ್ತೀನಿ’.</p>.<p>ಅಷ್ಟೊತ್ತಿಗೆ ಗುಂಪು ಬಂದಿತು, ‘ಆ್ಯನ್ಯುಯಲ್ ಪರೀಕ್ಷೆ ಫೇಲಾದ್ರೆ ಸಪ್ಲಿಮೆಂಟರಿ ಕಟ್ಟಬೇಕು, ಶಂಕ್ರಿ ಅಣ್ಣನ್ನ ನಾವು ಎಲೆಕ್ಷನ್ನಲ್ಲಿ ಗೆಲ್ಲಿಸ್ತೀವಿ’ ಅಂದರು.</p>.<p>‘ಹಾಗಂತ, ಬರೀ ಕೈಯಲ್ಲಿ ಎಲೆಕ್ಷನ್ ಮಾಡಕ್ಕಾಗುತ್ತಾ?’ ಅಂದಳು ಸುಮಿ.</p>.<p>‘ಅಸೆಂಬ್ಲಿ ಎಲೆಕ್ಷನ್ನಲ್ಲಿ ಕ್ಯಾಂಡಿಡೇಟ್ಗಳು ಕೈ ತುಂಬಾ ಕೊಟ್ಟು ಜನರ ಮನಸು ಕೆಡಿಸಿ, ವ್ಯವಸ್ಥೆ ಹಾಳು ಮಾಡಿದ್ದಾರೆ. ನಾವು ಮತ ಕೇಳಲು ಹೋದ್ರೆ ಜನ ಕೈ-ಬಾಯಿ ನೋಡ್ತಾರೆ’ ಅಂದ ಒಬ್ಬ.</p>.<p>‘ಎದುರಾಳಿ ಕ್ಯಾಂಡಿಡೇಟು ತಿಪ್ಪೇಶಿ ಹೋದ ತಿಂಗಳು ಮಕ್ಕಳ ಬರ್ತ್ಡೇ ನೆಪದಲ್ಲಿ ಊರವರಿಗೆ ಬಾಡೂಟ ಹಾಕಿಸಿ, ಗಂಡಸರಿಗೆ ರೇಷ್ಮೆ ಷರ್ಟು, ಪಂಚೆ, ಹೆಂಗಸರಿಗೆ ರೇಷ್ಮೆ ಸೀರೆ ಹಂಚಿದ್ದ. ನೀವು ಬೆಳ್ಳಿ ನಾಣ್ಯನೋ ಚಿನ್ನದ ಚೂರನ್ನೋ ಕೊಡಬೇಕಾಗುತ್ತದೆ’ ಅಂದ ಮತ್ತೊಬ್ಬ.</p>.<p>‘ಎಲೆಕ್ಷನ್ ಅಧಿಕಾರಿಗಳಿಗೆ ಗೊತ್ತಾದ್ರೆ ಬಂದು ಎಲ್ಲಾ ಬಾಚಿಕೊಂಡುಹೋಗಿ, ಕೇಸ್ ಹಾಕ್ತಾರೆ’ ಎಂದ ಇನ್ನೊಬ್ಬ.</p>.<p>‘ಆದ್ರೂ ಎಲೆಕ್ಷನ್ ಖರ್ಚಿಗೆ ದುಡ್ಡು ಬೇಕಲ್ಲ, ದುಡ್ಡಿಗೆ ಏನು ಮಾಡೋದು?’ ಶಂಕ್ರಿಗೆ ಚಿಂತೆಯಾಯ್ತು.</p>.<p>‘ಒಳ್ಳೆ ರೇಟ್ ಕೊಡುಸ್ತೀನಿ ಹೊಲ ಮಾರಿಬಿಡಿ. ಗೆದ್ದು ಮೆಂಬರ್ ಆಗಿ, ದೇವರು ಕಣ್ಣುಬಿಟ್ರೆ ಹತ್ತಾರು ಎಕರೆ ಕೊಳ್ಳಬಹುದು’ ಎಂದು ಆಸೆ ಚಿಗುರಿಸಿ ಹೋದರು.</p>.<p>ನಂತರ, ಪಕ್ಕದ ಮನೆ ಪದ್ಮಾ ಬಂದು, ‘ಈಗ ಬಂದಿದ್ದವರು ಏನು ಹೇಳಿದ್ರು? ಮನೆಹಾಳರು, ಕಮಿಷನ್ ಆಸೆಗೆ ಈಗಾಗಲೇ ನಾಲ್ಕು ಜನರ ಹೊಲ ಮಾರಿಸಿಬಿಟ್ಟಿದ್ದಾರೆ, ನೀವು ಹುಷಾರು’ ಎಂದು ಎಚ್ಚರಿಸಿದಾಗ, ಶಂಕ್ರಿ, ಸುಮಿ ದಂಗಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>