<p>ಲಕ್ಕಿಗಳು ಗೂಟದ ಕಾರು ಹತ್ತಿದ್ದರು. ಸಚಿವರಾಗದ ದುಃಖಿಗಳು ಶೋಕಸಭೆಯಲ್ಲಿ ನೋವು ತೋಡಿಕೊಂಡರು.</p>.<p>‘ಮನೆ ದೇವರಿಗೆ ಕಾಯಿ ಒಡೆದೆ, ಫ್ಯಾಮಿಲಿ ಸ್ವಾಮೀಜಿಯ ಪಾದ ಹಿಡಿದೆ. ಫಲ ಸಿಗಲಿಲ್ಲ...’ ಒಬ್ಬರು ಕಣ್ಣು ಒರೆಸಿಕೊಂಡರು.</p>.<p>‘ಮಂತ್ರಿಯಾಗೇ ಕ್ಷೇತ್ರಕ್ಕೆ ಬರ್ತೀನಿ ಅಂತ ಮಾತು ಕೊಟ್ಟಿದ್ದೆ. ಈಗ ಹೇಗೆ ಹೋಗಲಿ?...’ ಇನ್ನೊಬ್ಬರ ಸಂಕಟ.</p>.<p>‘ಸೂಟ್ಕೇಸು, ಸಿ.ಡಿ ಕೇಸು ಯಾವುದೂ ಇಲ್ಲದೆ ಪರಿಶುದ್ಧನಾಗಿದ್ದ ನನಗೆ ಮಂತ್ರಿ ಸ್ಥಾನ ಕೊಡದೆ ಮಾನ ಕಳೆದುಬಿಟ್ರು’ ಎಂದರು ಮತ್ತೊಬ್ಬರು.</p>.<p>‘ಹಿಂದಿನ ಸಂಪುಟದಲ್ಲಿ ಉನ್ನತ ಖಾತೆ ಹಿಡಿದು ಕ್ಷೇತ್ರದ ತುಂಬಾ ಫುಡ್ಕಿಟ್ ಹಂಚಿ ಜನಪ್ರಿಯ ಕೆಲಸ ಮಾಡಿದ್ದೆ, ನನ್ನ ಸೇವೆ ಪರಿಗಣಿಸಲಿಲ್ಲ...’ ನಿಟ್ಟುಸಿರುಬಿಟ್ಟರು ಹಿರಿಯರು.</p>.<p>‘ಮಕ್ಕಳನ್ನೆಲ್ಲಾ ಪಾಸ್ ಮಾಡಿದ ಮಂತ್ರಿಯೇ ಫೇಲ್ ಆಗಿಬಿಟ್ಟರು, ನಿಮ್ಮದೇನು ಮಹಾ ಬಿಡಿ...’ ಸಮಾಧಾನ ಹೇಳಿದ್ರು ಪಕ್ಕದವರು.</p>.<p>‘ನಿಮ್ಮೂರಿನ ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷರಾಗಿದ್ದ ನೀವು ಎಮ್ಮೆಲ್ಸಿಯಾಗಿ ಸರ್ಕಾರದ ಮಂಡಳಿ ಅಧ್ಯಕ್ಷರಾದರೂ ಆಗಿದ್ರಿ, ನಮಗೆ ಆ ಭಾಗ್ಯವೂ ಇಲ್ವಲ್ಲಾರೀ...’ ಮಗದೊಬ್ಬರು<br />ಅಲವತ್ತುಕೊಂಡರು.</p>.<p>‘ನೀವು ಪರಾಕ್ರಮಿ ಥರಾ ಮೈಕ್ ಸಿಕ್ಕಿದಾಗಲೆಲ್ಲಾ ನಾಯಕರನ್ನು ಹೀನಾಮಾನವಾಗಿ ಬೈದು ವೈರಲ್ ಆಗಿ ರೈವಲ್ ಆದ್ರಿ, ನಾನು ನಾಯಕರಿಗೆ ನಿಷ್ಠನಾಗಿ, ವಿಧೇಯನಾಗಿದ್ರೂ ಸಚಿವ ಸ್ಥಾನ ದಕ್ಕಲಿಲ್ಲ...’ ಮತ್ತೊಬ್ಬರ ದುಃಖ.</p>.<p>‘ಅತೃಪ್ತ ಶಾಸಕರು ಬಂಡೆದ್ದು ಪ್ರತ್ಯೇಕ ಸಭೆ ಮಾಡ್ತಿದ್ದಾರೆ ಅಂತ ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರ್ತಿದೆ...’ ಎಂದು ಶಾಸಕರು ಟಿ.ವಿ. ನೋಡಿ ಗಾಬರಿಯಾದರು.</p>.<p>‘ಚಾನೆಲ್ನವರು ಹೊರಗೆ ಕಾಯ್ತಾ ಇರಬಹುದು. ಕೇಳಿದ್ರೆ ಊಟಕ್ಕೆ ಸೇರಿದ್ವಿ, ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಹೇಳೋಣ. ಇಲ್ಲಾಂದ್ರೆ ಇದನ್ನೇ ಗುಲ್ಲೆಬ್ಬಿಸಿ, ಗಬ್ಬೆಬ್ಬಿಸಿ ಮುಂದಿನ ಚುನಾವಣೆಗೆ ನಮಗೆ ಟಿಕೆಟ್ ಇಲ್ಲದಂತೆ ಮಾಡಿಬಿಡ್ತಾರೆ...’ ಎಂದು ಎಲ್ಲರೂ ಲಗುಬಗೆಯಲ್ಲಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಕ್ಕಿಗಳು ಗೂಟದ ಕಾರು ಹತ್ತಿದ್ದರು. ಸಚಿವರಾಗದ ದುಃಖಿಗಳು ಶೋಕಸಭೆಯಲ್ಲಿ ನೋವು ತೋಡಿಕೊಂಡರು.</p>.<p>‘ಮನೆ ದೇವರಿಗೆ ಕಾಯಿ ಒಡೆದೆ, ಫ್ಯಾಮಿಲಿ ಸ್ವಾಮೀಜಿಯ ಪಾದ ಹಿಡಿದೆ. ಫಲ ಸಿಗಲಿಲ್ಲ...’ ಒಬ್ಬರು ಕಣ್ಣು ಒರೆಸಿಕೊಂಡರು.</p>.<p>‘ಮಂತ್ರಿಯಾಗೇ ಕ್ಷೇತ್ರಕ್ಕೆ ಬರ್ತೀನಿ ಅಂತ ಮಾತು ಕೊಟ್ಟಿದ್ದೆ. ಈಗ ಹೇಗೆ ಹೋಗಲಿ?...’ ಇನ್ನೊಬ್ಬರ ಸಂಕಟ.</p>.<p>‘ಸೂಟ್ಕೇಸು, ಸಿ.ಡಿ ಕೇಸು ಯಾವುದೂ ಇಲ್ಲದೆ ಪರಿಶುದ್ಧನಾಗಿದ್ದ ನನಗೆ ಮಂತ್ರಿ ಸ್ಥಾನ ಕೊಡದೆ ಮಾನ ಕಳೆದುಬಿಟ್ರು’ ಎಂದರು ಮತ್ತೊಬ್ಬರು.</p>.<p>‘ಹಿಂದಿನ ಸಂಪುಟದಲ್ಲಿ ಉನ್ನತ ಖಾತೆ ಹಿಡಿದು ಕ್ಷೇತ್ರದ ತುಂಬಾ ಫುಡ್ಕಿಟ್ ಹಂಚಿ ಜನಪ್ರಿಯ ಕೆಲಸ ಮಾಡಿದ್ದೆ, ನನ್ನ ಸೇವೆ ಪರಿಗಣಿಸಲಿಲ್ಲ...’ ನಿಟ್ಟುಸಿರುಬಿಟ್ಟರು ಹಿರಿಯರು.</p>.<p>‘ಮಕ್ಕಳನ್ನೆಲ್ಲಾ ಪಾಸ್ ಮಾಡಿದ ಮಂತ್ರಿಯೇ ಫೇಲ್ ಆಗಿಬಿಟ್ಟರು, ನಿಮ್ಮದೇನು ಮಹಾ ಬಿಡಿ...’ ಸಮಾಧಾನ ಹೇಳಿದ್ರು ಪಕ್ಕದವರು.</p>.<p>‘ನಿಮ್ಮೂರಿನ ಸಿದ್ಧಿವಿನಾಯಕ ಸೇವಾ ಮಂಡಳಿ ಅಧ್ಯಕ್ಷರಾಗಿದ್ದ ನೀವು ಎಮ್ಮೆಲ್ಸಿಯಾಗಿ ಸರ್ಕಾರದ ಮಂಡಳಿ ಅಧ್ಯಕ್ಷರಾದರೂ ಆಗಿದ್ರಿ, ನಮಗೆ ಆ ಭಾಗ್ಯವೂ ಇಲ್ವಲ್ಲಾರೀ...’ ಮಗದೊಬ್ಬರು<br />ಅಲವತ್ತುಕೊಂಡರು.</p>.<p>‘ನೀವು ಪರಾಕ್ರಮಿ ಥರಾ ಮೈಕ್ ಸಿಕ್ಕಿದಾಗಲೆಲ್ಲಾ ನಾಯಕರನ್ನು ಹೀನಾಮಾನವಾಗಿ ಬೈದು ವೈರಲ್ ಆಗಿ ರೈವಲ್ ಆದ್ರಿ, ನಾನು ನಾಯಕರಿಗೆ ನಿಷ್ಠನಾಗಿ, ವಿಧೇಯನಾಗಿದ್ರೂ ಸಚಿವ ಸ್ಥಾನ ದಕ್ಕಲಿಲ್ಲ...’ ಮತ್ತೊಬ್ಬರ ದುಃಖ.</p>.<p>‘ಅತೃಪ್ತ ಶಾಸಕರು ಬಂಡೆದ್ದು ಪ್ರತ್ಯೇಕ ಸಭೆ ಮಾಡ್ತಿದ್ದಾರೆ ಅಂತ ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರ್ತಿದೆ...’ ಎಂದು ಶಾಸಕರು ಟಿ.ವಿ. ನೋಡಿ ಗಾಬರಿಯಾದರು.</p>.<p>‘ಚಾನೆಲ್ನವರು ಹೊರಗೆ ಕಾಯ್ತಾ ಇರಬಹುದು. ಕೇಳಿದ್ರೆ ಊಟಕ್ಕೆ ಸೇರಿದ್ವಿ, ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಹೇಳೋಣ. ಇಲ್ಲಾಂದ್ರೆ ಇದನ್ನೇ ಗುಲ್ಲೆಬ್ಬಿಸಿ, ಗಬ್ಬೆಬ್ಬಿಸಿ ಮುಂದಿನ ಚುನಾವಣೆಗೆ ನಮಗೆ ಟಿಕೆಟ್ ಇಲ್ಲದಂತೆ ಮಾಡಿಬಿಡ್ತಾರೆ...’ ಎಂದು ಎಲ್ಲರೂ ಲಗುಬಗೆಯಲ್ಲಿ ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>