‘ತ್ರಿಮೂರ್ತಿಗುಳನ್ನ ಭಕ್ತಿಯಿಂದ ನೆನಕಬೇಕು. ತೊಡೆ ತಟ್ಟಕೋದ್ರೆ ಊರುಭಂಗಾಯ್ತದೆ. ಮಂತ್ರವ ಸರಿಯಾಗಿ ಕೇಳಿಸ್ಕೊ ‘ನಮೋ ನಮೋ ನರೇಂದ್ರ ದಾಮೋದರ ಕಮಲಬಾಹುವೇ, ಜಂಬೂದ್ವೀಪ ಪಾಲಾ ಪಾಹಿಮಾಂ, ಅಮಿತ ಶಾರ್ದೂಲ ರೂಪ ಪಾಹಿಮಾಂ, ಜಗತ್ ಪ್ರಕಾಶ ನಡ್ಡ ಪ್ರಭೂ ಸರ್ವ ವಿಘ್ನ ಪರಿಹಾರಕಾ ಪದವಿ ಪ್ರದಾಯಕಾ ದೇಹಿ ದೇಹಿ’ ಅಂತ ಸಾವಿರದ ಒಂದು ಸಾರಿ ಜಪ ಮಾಡಿ, ಮಂತ್ರವ ತಾಮ್ರದ ತಗಡಲ್ಲಿ ಬರೆದು, ತಾತಿಮಣಿ ಮಾಡಿ ಗ್ವಾಮಾಳೆಗೆ ಕಟ್ಟಿಕ್ಯಂಡರೆ ಮಂತ್ರ ಶಕ್ತಿಯಿಂದ ಮಂತ್ರಿ ಸ್ಥಾನೋತ್ಪತ್ತಿಯಾಯ್ತದೆ, ರಾಜಾವುಲಿ ಸ್ಥಾನ ಭದ್ರಾಯ್ತದೆ ಅಂತ ನಮ್ಮ ಆಲಿಂಗನ ಮಠದ ಸ್ವಾಮಿಗೋಳು ಅಪ್ಪಣೆ ಕೊಡಿಸವ್ರೆ’ ಅಂದ್ರು.