<p>‘ಸೊಸೆ ಮುನಿಸಿಕೊಂಡು ತವರಿಗೆ ಹೋಗುವಂತೆ ರೆಬೆಲ್ ಶಾಸಕರು ಸಿಟ್ಟು ಮಾಡಿಕೊಂಡು ರೆಸಾರ್ಟ್ಗೆ ಹೋಗುವುದು ನಿಲ್ಲಬೇಕು?’ ಸುಮಿ ಹೇಳಿದಳು.</p>.<p>‘ತವರು, ರೆಸಾರ್ಟ್ ಇರೋವರೆಗೂ ಈ ಸಮಸ್ಯೆ ಇದ್ದೇ ಇರುತ್ತದೆ, ಸಹಿಸಿಕೊಂಡು ಹೋಗಬೇಕಷ್ಟೇ. ಎಲೆಕ್ಷನ್ ಟೈಮ್ನಲ್ಲಿ ಜನನಾಯಕರು ಉದ್ರಿಕ್ತರಾಗಿರುತ್ತಾರೆ, ಅವರನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು’ ಅಂದ ಶಂಕ್ರಿ.</p>.<p>‘ರೆಬೆಲ್ ಖ್ಯಾತಿಯ ಮಹಾರಾಷ್ಟ್ರದ ಮಾದರಿ ಆಡಳಿತ ಇತರ ರಾಜ್ಯಗಳಿಗೆ ಪಠ್ಯವಾಗಬೇಕು. ರೆಬೆಲ್ಗಳ ನಿಯಂತ್ರಣ ಸರ್ಕಾರಗಳಿಗೆ ಎಚ್ಚರಿಕೆಯ ಪಾಠವಾಗಬೇಕು’.</p>.<p>‘ಪರರಾಜ್ಯದಿಂದ ಪಾಠ ಕಲಿಯುವಷ್ಟು ನಾವು ಹಿಂದುಳಿದಿಲ್ಲ. ನಮ್ಮ ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ ಸಾಕಷ್ಟು ರೆಬೆಲ್ ರಾದ್ಧಾಂತಗಳು ಸಿಗುತ್ತವೆ’.</p>.<p>‘ಹೌದೂರೀ, ಹಳ್ಳಿ ಹಕ್ಕಿ ವಿಶ್ವಣ್ಣ ರಚಿಸಿರುವ ‘ಬಾಂಬೆ ಫೈಲ್ಸ್’ ಪುಸ್ತಕ ರಾಜಕಾರಣದ ದೊಡ್ಡ ಚರಿತ್ರೆಯಾಗಲಿದೆಯಂತೆ, ಈ ಪುಸ್ತಕವನ್ನು ಸರ್ಕಾರಿ ಸಿಲೆಬಸ್ಗೆ ಅಳವಡಿಸಿಕೊಂಡರೆ ಆಡಳಿ ತದ ಅಧ್ವಾನಗಳನ್ನು ನಿಯಂತ್ರಿಸಬಹುದೇನೋ’.</p>.<p>‘ಬಹುತಾರಾಗಣದ ಬಾಂಬೆ ಫೈಲ್ಸ್ ಶೀಘ್ರದಲ್ಲೇ ತೆರೆ ಕಾಣಲಿದೆಯಂತೆ, ಆಮೇಲೆ ಅದರ ಸಾಧಕಬಾಧಕಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬಹುದು’.</p>.<p>‘ಸಿಎಂ ಸರ್ವಾಧಿಕಾರಿಯಾದಾಗ, ಶಾಸಕರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರೆಬೆಲ್ ರೋಗ ಕಾಣಿಸಿಕೊಳ್ಳುವುದಂತೆ. ಅತೃಪ್ತ ಶಾಸಕರಿಗೆ ಯೋಗ್ಯ ಅಧಿಕಾರ, ಅನುದಾನ ನೀಡುತ್ತಿದ್ದರೆ ಅವರೇಕೆ ರೆಬೆಲ್ಗಳಾಗುತ್ತಾರೆ? ರೇಷನ್ ಕೊರತೆಯಾದಾಗ ಆಪರೇಷನ್ಗೆ ಮನಸ್ಸು ಮಾಡುತ್ತಾರೆ ಎಂಬೆಲ್ಲಾ ವಿಚಾರಗಳು ಬಾಂಬೆ ಫೈಲ್ಸ್ನಲ್ಲಿ ಇರಬಹುದು’.</p>.<p>‘ಹೌದು, ಶಾಸಕರ ಬೇಕುಬೇಡಗಳನ್ನು ಅರ್ಥ ಮಾಡಿಕೊಂಡು ಅವರ ಆರೈಕೆ, ಪೂರೈಕೆಗಳನ್ನು ಪೂರೈಸಿಕೊಂಡಿದ್ದರೆ ಅವರೇಕೆ ಹೊಸಿಲು ದಾಟಿ ರೆಸಾರ್ಟ್ ದಾರಿ ಹಿಡಿಯುತ್ತಾರೆ?’</p>.<p>‘ನಿಜ, ಪ್ರಜೆಗಳ ಕ್ಷೇಮ ಸೈಡಿಗಿರಲಿ, ಹೇಗೋ ಸರ್ಕಾರ ಕ್ಷೇಮವಾಗಿದ್ದರೆ ಸಾಕು...’ ಎಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸೊಸೆ ಮುನಿಸಿಕೊಂಡು ತವರಿಗೆ ಹೋಗುವಂತೆ ರೆಬೆಲ್ ಶಾಸಕರು ಸಿಟ್ಟು ಮಾಡಿಕೊಂಡು ರೆಸಾರ್ಟ್ಗೆ ಹೋಗುವುದು ನಿಲ್ಲಬೇಕು?’ ಸುಮಿ ಹೇಳಿದಳು.</p>.<p>‘ತವರು, ರೆಸಾರ್ಟ್ ಇರೋವರೆಗೂ ಈ ಸಮಸ್ಯೆ ಇದ್ದೇ ಇರುತ್ತದೆ, ಸಹಿಸಿಕೊಂಡು ಹೋಗಬೇಕಷ್ಟೇ. ಎಲೆಕ್ಷನ್ ಟೈಮ್ನಲ್ಲಿ ಜನನಾಯಕರು ಉದ್ರಿಕ್ತರಾಗಿರುತ್ತಾರೆ, ಅವರನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು’ ಅಂದ ಶಂಕ್ರಿ.</p>.<p>‘ರೆಬೆಲ್ ಖ್ಯಾತಿಯ ಮಹಾರಾಷ್ಟ್ರದ ಮಾದರಿ ಆಡಳಿತ ಇತರ ರಾಜ್ಯಗಳಿಗೆ ಪಠ್ಯವಾಗಬೇಕು. ರೆಬೆಲ್ಗಳ ನಿಯಂತ್ರಣ ಸರ್ಕಾರಗಳಿಗೆ ಎಚ್ಚರಿಕೆಯ ಪಾಠವಾಗಬೇಕು’.</p>.<p>‘ಪರರಾಜ್ಯದಿಂದ ಪಾಠ ಕಲಿಯುವಷ್ಟು ನಾವು ಹಿಂದುಳಿದಿಲ್ಲ. ನಮ್ಮ ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ ಸಾಕಷ್ಟು ರೆಬೆಲ್ ರಾದ್ಧಾಂತಗಳು ಸಿಗುತ್ತವೆ’.</p>.<p>‘ಹೌದೂರೀ, ಹಳ್ಳಿ ಹಕ್ಕಿ ವಿಶ್ವಣ್ಣ ರಚಿಸಿರುವ ‘ಬಾಂಬೆ ಫೈಲ್ಸ್’ ಪುಸ್ತಕ ರಾಜಕಾರಣದ ದೊಡ್ಡ ಚರಿತ್ರೆಯಾಗಲಿದೆಯಂತೆ, ಈ ಪುಸ್ತಕವನ್ನು ಸರ್ಕಾರಿ ಸಿಲೆಬಸ್ಗೆ ಅಳವಡಿಸಿಕೊಂಡರೆ ಆಡಳಿ ತದ ಅಧ್ವಾನಗಳನ್ನು ನಿಯಂತ್ರಿಸಬಹುದೇನೋ’.</p>.<p>‘ಬಹುತಾರಾಗಣದ ಬಾಂಬೆ ಫೈಲ್ಸ್ ಶೀಘ್ರದಲ್ಲೇ ತೆರೆ ಕಾಣಲಿದೆಯಂತೆ, ಆಮೇಲೆ ಅದರ ಸಾಧಕಬಾಧಕಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಬಹುದು’.</p>.<p>‘ಸಿಎಂ ಸರ್ವಾಧಿಕಾರಿಯಾದಾಗ, ಶಾಸಕರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರೆಬೆಲ್ ರೋಗ ಕಾಣಿಸಿಕೊಳ್ಳುವುದಂತೆ. ಅತೃಪ್ತ ಶಾಸಕರಿಗೆ ಯೋಗ್ಯ ಅಧಿಕಾರ, ಅನುದಾನ ನೀಡುತ್ತಿದ್ದರೆ ಅವರೇಕೆ ರೆಬೆಲ್ಗಳಾಗುತ್ತಾರೆ? ರೇಷನ್ ಕೊರತೆಯಾದಾಗ ಆಪರೇಷನ್ಗೆ ಮನಸ್ಸು ಮಾಡುತ್ತಾರೆ ಎಂಬೆಲ್ಲಾ ವಿಚಾರಗಳು ಬಾಂಬೆ ಫೈಲ್ಸ್ನಲ್ಲಿ ಇರಬಹುದು’.</p>.<p>‘ಹೌದು, ಶಾಸಕರ ಬೇಕುಬೇಡಗಳನ್ನು ಅರ್ಥ ಮಾಡಿಕೊಂಡು ಅವರ ಆರೈಕೆ, ಪೂರೈಕೆಗಳನ್ನು ಪೂರೈಸಿಕೊಂಡಿದ್ದರೆ ಅವರೇಕೆ ಹೊಸಿಲು ದಾಟಿ ರೆಸಾರ್ಟ್ ದಾರಿ ಹಿಡಿಯುತ್ತಾರೆ?’</p>.<p>‘ನಿಜ, ಪ್ರಜೆಗಳ ಕ್ಷೇಮ ಸೈಡಿಗಿರಲಿ, ಹೇಗೋ ಸರ್ಕಾರ ಕ್ಷೇಮವಾಗಿದ್ದರೆ ಸಾಕು...’ ಎಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>