‘ಅಣೈ, ಕರ್ನಾಟಕ ಭ್ರಷ್ಟಾಚಾರದ ಹೆಡ್ಡಾಪೀಸ್ ಆಗ್ಯದೆ. ಲೈಂಗಿಕ ದೌರ್ಜನ್ಯ, ಅಕ್ರಮ ಗಣಿಗಾರಿಕೆ, ಆತ್ಮಹತ್ಯೆ, ರಸ್ತೆ ಕೊಲ್ಲಾಟ, ಧರ್ಮ ದಂಗಲ್, ಟೆಂಡರ್ ಬ್ಲಂಡರ್, ಕೊರೋನಾ ಕರಾಮತ್, ಫೈಲು ವಿಲೇವಾರಿ, ಆರೋಗ್ಯ ಕ್ಷೇತ್ರ, ರಾಜಕಾಲುವೆ ಒತ್ತುವರಿ, ಆಸ್ಪತ್ರೆ, ಫ್ಲೆಕ್ಸ್ ಪಿಡುಗು ಒಂದಾ ಎರಡಾ. ಎಲ್ಲಾ ಗ್ವಾಮಾಳೆಗಂಟಾ ಬಂದವೆ’ ವಿವರಣೆ ಕೊಟ್ಟರು ತುರೇಮಣೆ.