‘ಸರಿಯಾಗೇ ಹೇಳ್ಯಾರ ಅವರು... ಸಾವಿಲ್ಲದ ಮನೆ ಯಾವುದೈತಿ? ಹಂಗೇ ಹೊಂಡಗುಂಡಿ ಗಳಿಲ್ಲದ ನಗರ ಈ ಜಗತ್ತು ಮಾತ್ರವಲ್ಲ, ಮ್ಯಾಗೆ ಇಂದ್ರಲೋಕದೊಳಗೂ ಇರಲಿಕ್ಕಿಲ್ಲ. ರಸ್ತೆಗಳಿರೋವರೆಗೆ ಹೊಂಡಾಗುಂಡಿಗಳು ಇರತಾವು, ಅವು ಇರೋವರೆಗೆ ರಿಪೇರಿ ಹೆಸರಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಸುಖಿನೋಭವಂತು!’ ಬೆಕ್ಕಣ್ಣ ಹೆಹ್ಹೆ ಗುಟ್ಟಿತು.