‘ನೀ ಗಾಯದ ಮ್ಯಾಗೆ ಉಪ್ಪು ಎರಚಬ್ಯಾಡ. ನಮ್ ಕುಮಾರಣ್ಣಂಗಾಗಿ ಉಪಪ್ರಧಾನಿ ಕುರ್ಚಿ ಹೊಸದಾಗಿ ಮಾಡಿಸ್ತಾರೆ, ಕುಮಾರಣ್ಣ ಮಂಡ್ಯದಿಂದ ಗೆದ್ದವನೇ ಸೀದಾ ಹೋಗಿ ಮೋದಿಮಾಮನ ಪಕ್ಕ ಕೂರತಾನೆ ಅಂತ ಕನಸು ಕಂಡಿದ್ದೆ. ಅಂವಾ ಗೆದ್ದು, ಕೇಂದ್ರದಾಗೆ ಕೃಷಿ ಮಂತ್ರಿಯಾಗತೀನಿ ಅಂತ ಕೃಷಿ ಕುರ್ಚಿಗೆ ಕರ್ಚೀಪು ಹಾಸ್ಯಾನೆ’ ಎಂದು ನಿಟ್ಟುಸಿರಿಟ್ಟಿತು.