<p>‘ಮಂತ್ರಿಗಳ ಫೈನಲ್ ಪಟ್ಟಿ ರೆಡಿ ಆಯ್ತೇನ್ರೀ?...’ ಸುಮಿಗೆ ಕುತೂಹಲ.</p>.<p>‘ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮುಗಿದು ಈಗ ಫೈನಲ್ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನೇಚರ್ ಹಾಕಿದೆಯಂತೆ’ ಅಂದ ಶಂಕ್ರಿ.</p>.<p>‘ಸಿಎಂ ಆಯ್ಕೆ ಅವಿರೋಧವಾದರೂ ಮಂತ್ರಿಗಳ ಆಯ್ಕೆ ಅವಿರತ ಆಗೋಯ್ತಲ್ಲ. ಪಾಪ! ಆಕಾಂಕ್ಷಿಗಳು ವಾರದಿಂದ ನಿದ್ರೆ-<br />ನೆಮ್ಮದಿಯಿಲ್ಲದೆ, ಊಟ-ತಿಂಡಿ, ಕೆಲಸಕಾರ್ಯ ಬಿಟ್ಟು ದಿಲ್ಲಿ ಧ್ಯಾನ ಮಾಡಿಕೊಂಡಿದ್ದರು’.</p>.<p>‘ಶಾಸಕರ ಗಾತ್ರ, ಘನತೆ, ನಿಷ್ಠೆ-ಪ್ರತಿಷ್ಠೆಯನ್ನು ಅಳೆದು ತೂಗಿ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆಯಂತೆ’.</p>.<p>‘ಯಾರಿಗೆ ಯಾವ ಖಾತೆ ಅನ್ನುವುದೂ ತೀರ್ಮಾನವಾಗಿದೆಯೆ? ಇಲ್ಲಾಂದ್ರೆ ಖಾತೆಯ ಪಟ್ಟಿ ಹಿಡಿದು ಸಿಎಂ ಮತ್ತೆ ದೆಹಲಿಯಾನ ಮಾಡಬೇಕಾಗುತ್ತದೆ. ರಾಜ್ಯದ ಗಡಿಗೆ ಬಂದು ಕುಳಿತಿರುವ ಕೊರೊನಾ 3ನೇ ಅಲೆ ಒಳ ನುಗ್ಗುವುದರೊಳಗೆ ಮಂತ್ರಿಗಳಿಗೆ ಪದವಿ ಹಂಚಿ ಪಟ್ಟಾಭಿಷೇಕ ಮಾಡಬೇಕು’.</p>.<p>‘3ನೇ ಅಲೆಗಿಂತ ಬಂಡಾಯದ ಅಲೆ ಅಪಾಯಕಾರಿಯಂತೆ. ರಾಜ್ಯಭಾರ ವ್ಯಾಜ್ಯಭಾರ ಆಗಬಾರದು ಅಂತ ಬಂಡಾಯದ ಅಲೆ ನಿಯಂತ್ರಣಕ್ಕೆ ಲಸಿಕೆ, ಚಿಕಿತ್ಸೆ ಸಿದ್ಧಮಾಡಿಕೊಳ್ಳಲಾಗಿದೆಯಂತೆ’.</p>.<p>‘ಬಂಡಾಯಗಾರರಿಗೆ ಕಾಂಗ್ರೆಸ್ನವರು ಕಾಳು ಹಾಕಿ ಕಷ್ಟ ತಂದೊಡ್ಡುತ್ತಾರೆ ಅಂತನಾ?’</p>.<p>‘ಅಂಥಾ ಸಂಕಷ್ಟ ಕಾಲದಲ್ಲಿ ನಾವು ಕೈ ಹಿಡಿಯುತ್ತೇವೆ ಅಂತ ದೇವೇಗೌಡರು ಸಿಎಂಗೆ ವರ ನೀಡಿದ್ದಾರಂತೆ’.</p>.<p>‘ತಾವು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಅಂತ ಕೆಲ ನಾಯಕರು ಅಧಿಕಾರ ವೈರಾಗ್ಯ ಪ್ರಕಟಿಸಿದ್ದಾರಲ್ಲ’.</p>.<p>‘ಅವರಿಗೆ ಮಂತ್ರಿ ಸ್ಥಾನ ಸಿಗೋದು ಅನುಮಾನವಾಗಿ ಅವಮಾನದಿಂದ ತಪ್ಪಿಸಿ<br />ಕೊಳ್ಳಲು ಹೀಗೆ ಹೇಳಿರಬಹುದು’ ಅಂದ ಶಂಕ್ರಿ.</p>.<p>‘ಅದಲ್ಲದೆ, 3ನೇ ಅಲೆ ವಕ್ಕರಿಸುತ್ತಿದೆ. ಸರ್ಕಾರದ ದುಡ್ಡೆಲ್ಲಾ ಕೊರೊನಾ ಪಾಲಾಗುತ್ತದೆ. ಅನುದಾನ, ಅಭಿವೃದ್ಧಿ ಇಲ್ಲದೆ ಫುಡ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ಹಂಚುವ, ಕಿಮ್ಮತ್ತಿಲ್ಲದ ಮಂತ್ರಿಗಿರಿ ಯಾಕೆ ಬೇಕು ಅಂತ ಸುಮ್ಮನಿ<br />ದ್ದಾರಂತೆ ಕಣ್ರೀ...’ ಅಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮಂತ್ರಿಗಳ ಫೈನಲ್ ಪಟ್ಟಿ ರೆಡಿ ಆಯ್ತೇನ್ರೀ?...’ ಸುಮಿಗೆ ಕುತೂಹಲ.</p>.<p>‘ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮುಗಿದು ಈಗ ಫೈನಲ್ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನೇಚರ್ ಹಾಕಿದೆಯಂತೆ’ ಅಂದ ಶಂಕ್ರಿ.</p>.<p>‘ಸಿಎಂ ಆಯ್ಕೆ ಅವಿರೋಧವಾದರೂ ಮಂತ್ರಿಗಳ ಆಯ್ಕೆ ಅವಿರತ ಆಗೋಯ್ತಲ್ಲ. ಪಾಪ! ಆಕಾಂಕ್ಷಿಗಳು ವಾರದಿಂದ ನಿದ್ರೆ-<br />ನೆಮ್ಮದಿಯಿಲ್ಲದೆ, ಊಟ-ತಿಂಡಿ, ಕೆಲಸಕಾರ್ಯ ಬಿಟ್ಟು ದಿಲ್ಲಿ ಧ್ಯಾನ ಮಾಡಿಕೊಂಡಿದ್ದರು’.</p>.<p>‘ಶಾಸಕರ ಗಾತ್ರ, ಘನತೆ, ನಿಷ್ಠೆ-ಪ್ರತಿಷ್ಠೆಯನ್ನು ಅಳೆದು ತೂಗಿ ಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆಯಂತೆ’.</p>.<p>‘ಯಾರಿಗೆ ಯಾವ ಖಾತೆ ಅನ್ನುವುದೂ ತೀರ್ಮಾನವಾಗಿದೆಯೆ? ಇಲ್ಲಾಂದ್ರೆ ಖಾತೆಯ ಪಟ್ಟಿ ಹಿಡಿದು ಸಿಎಂ ಮತ್ತೆ ದೆಹಲಿಯಾನ ಮಾಡಬೇಕಾಗುತ್ತದೆ. ರಾಜ್ಯದ ಗಡಿಗೆ ಬಂದು ಕುಳಿತಿರುವ ಕೊರೊನಾ 3ನೇ ಅಲೆ ಒಳ ನುಗ್ಗುವುದರೊಳಗೆ ಮಂತ್ರಿಗಳಿಗೆ ಪದವಿ ಹಂಚಿ ಪಟ್ಟಾಭಿಷೇಕ ಮಾಡಬೇಕು’.</p>.<p>‘3ನೇ ಅಲೆಗಿಂತ ಬಂಡಾಯದ ಅಲೆ ಅಪಾಯಕಾರಿಯಂತೆ. ರಾಜ್ಯಭಾರ ವ್ಯಾಜ್ಯಭಾರ ಆಗಬಾರದು ಅಂತ ಬಂಡಾಯದ ಅಲೆ ನಿಯಂತ್ರಣಕ್ಕೆ ಲಸಿಕೆ, ಚಿಕಿತ್ಸೆ ಸಿದ್ಧಮಾಡಿಕೊಳ್ಳಲಾಗಿದೆಯಂತೆ’.</p>.<p>‘ಬಂಡಾಯಗಾರರಿಗೆ ಕಾಂಗ್ರೆಸ್ನವರು ಕಾಳು ಹಾಕಿ ಕಷ್ಟ ತಂದೊಡ್ಡುತ್ತಾರೆ ಅಂತನಾ?’</p>.<p>‘ಅಂಥಾ ಸಂಕಷ್ಟ ಕಾಲದಲ್ಲಿ ನಾವು ಕೈ ಹಿಡಿಯುತ್ತೇವೆ ಅಂತ ದೇವೇಗೌಡರು ಸಿಎಂಗೆ ವರ ನೀಡಿದ್ದಾರಂತೆ’.</p>.<p>‘ತಾವು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಅಂತ ಕೆಲ ನಾಯಕರು ಅಧಿಕಾರ ವೈರಾಗ್ಯ ಪ್ರಕಟಿಸಿದ್ದಾರಲ್ಲ’.</p>.<p>‘ಅವರಿಗೆ ಮಂತ್ರಿ ಸ್ಥಾನ ಸಿಗೋದು ಅನುಮಾನವಾಗಿ ಅವಮಾನದಿಂದ ತಪ್ಪಿಸಿ<br />ಕೊಳ್ಳಲು ಹೀಗೆ ಹೇಳಿರಬಹುದು’ ಅಂದ ಶಂಕ್ರಿ.</p>.<p>‘ಅದಲ್ಲದೆ, 3ನೇ ಅಲೆ ವಕ್ಕರಿಸುತ್ತಿದೆ. ಸರ್ಕಾರದ ದುಡ್ಡೆಲ್ಲಾ ಕೊರೊನಾ ಪಾಲಾಗುತ್ತದೆ. ಅನುದಾನ, ಅಭಿವೃದ್ಧಿ ಇಲ್ಲದೆ ಫುಡ್ ಕಿಟ್, ಮಾಸ್ಕ್, ಸ್ಯಾನಿಟೈಸರ್ ಹಂಚುವ, ಕಿಮ್ಮತ್ತಿಲ್ಲದ ಮಂತ್ರಿಗಿರಿ ಯಾಕೆ ಬೇಕು ಅಂತ ಸುಮ್ಮನಿ<br />ದ್ದಾರಂತೆ ಕಣ್ರೀ...’ ಅಂದಳು ಸುಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>