‘ಭ್ರಷ್ಟಾಚಾರ ಬಿಟ್ಟು, ಆಲಸ್ಯ ತೊರೆದು, ನಿಯತ್ತಿನಿಂದ ಐದು ವರ್ಷ ಕೆಲಸ ಮಾಡಿಬಿಟ್ಟರೆ ಅದಕ್ಕಿಂತ ದೊಡ್ಡ ಭಾಗ್ಯ ಇನ್ಯಾವುದಿದೇರಿ? ಈ ತರಹ ಆಮಿಷ, ಖರೀದಿ... ಇದಕ್ಕೇನೂ ನೀತಿ ನಿಯಮ ಇಲ್ವಾ?’
‘ಇದೆ, ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಜಾರಿಯಾಗಿಬಿಟ್ಟರೆ ಕಷ್ಟ, ಅದಕ್ ಮುಂಚೇನೆ ಬೇಳೆ ಬೇಯಿಸಿಕೊಂಡು ಬಿಡಬೇಕೂಂತ ಆಕಾಂಕ್ಷಿಗಳು, ಪಕ್ಷಗಳು ಭಾಗ್ಯಾಸ್ತ್ರ ಪ್ರಯೋಗಿಸ್ತಾಯಿರೋದು’.
‘ಎಲ್ಲ ಖರೀದಿ, ಹರಾಜು... ಕ್ರಿಕೆಟ್ ಆಟಗಾರರು, ಜನಪ್ರತಿನಿಧಿಗಳು, ಪಕ್ಷಗಳು ಎಲ್ಲ... ಈಗ ಮತದಾರರ ಮೂಗಿಗೆ ತುಪ್ಪ!’
‘ಮೂಗಿಗೆ ತುಪ್ಪ ಮಾತ್ರವಲ್ಲ, ಚಿನ್ನದ ಮೂಗುತೀನೆ ಸಿಗುತ್ತಂತೆ. ಎದುರಾಳಿಗಳ ಜೊತೆ ಪೈಪೋಟಿಗೆ ಬಿದ್ದು ‘ಅವರು ಮೂರು ಸಾವಿರ ಕೊಟ್ಟರೆ, ನಾವು ಆರು ಸಾವಿರ ಕೊಡ್ತೀವಿ ಅಂತ, ಅಷ್ಟೇ ಅಲ್ಲ, ಮೊಬೈಲ್ಗೆ ಒ.ಟಿ.ಪಿ ಬರುತ್ತಂತೆ, ಅದನ್ನ ತೋರಿಸಿದರೆ ಒಂದು ‘ಗಿಫ್ಟ್’ ಪ್ರತ್ಯಕ್ಷ!’
‘ಗಿಫ್ಟ್ ತಗೊಂಡವರು ತಮ್ಮ ನಿರ್ಧಾರ ಶಿಫ್ಟ್ ಮಾಡಿದರೆ?’
‘ಯಾತ್ರಾ ಸ್ಥಳ ಪ್ರವಾಸ ಇರೋದೇ ಅದಕ್ಕೆ. ದೇವರೆದುರು ಪ್ರಮಾಣಾನೂ ಮಾಡಿಸ್ಕೊತಾರಂತೆ’.