‘ಸಮುದ್ರದ ನಂಟಸ್ತನ, ಹೆಣ್ಣಿಗೆ ಬಡತನ’ ಪೇಪರ್ ಹಿಡಿದು ಗೊಣಗಿದ ಪರ್ಮೇಶಿ.
‘ಏನಾಯ್ತ್ರೀ?’ ಕೇಳಿದ್ರು ಪದ್ದಮ್ಮ.
‘ಒಡಿಶಾದಲ್ಲಿ ಸಮುದ್ರದ ಉಬ್ಬರಕ್ಕೆ ಹೆದರಿ ಒಂದು ಊರಿನ ಯುವಕರಿಗೆ ಹೆಣ್ಣೇ ಕೊಡ್ತಿಲ್ಲವಂತೆ’.
‘ಹೇಗ್ರೀ ಕೊಡ್ತಾರೆ? ಸಮುದ್ರದ ಅಬ್ಬರಕ್ಕೆ ಮನೇನೂ ಕೊಚ್ಕೊಂಡ್ ಹೋದ್ರೆ ಆ ಹೆಣ್ಣು ಮಕ್ಕಳ ಗತಿ ಏನು?’
‘ಸಮುದ್ರದ ಮಧ್ಯನೇ ಇರೋರಿಗೆ ಈಜಿ ಅಭ್ಯಾಸ ಇರುತ್ತೆ. ಸಂಸಾರ ಸಾಗರನ ಸುಲಭವಾಗಿ ಈಜ್ತಾರೆ. ಸಮಸ್ಯೆ ಇರೋದಿಲ್ಲ’.
‘ಇವರು ಸಮುದ್ರಜೀವಿಗಳು, ಉಪ್ಪುನೀರಿಗೆ ಹೆಂಡ್ತಿ ಅನ್ನೋ ಚಿನ್ನ ಬಣ್ಣ ಕಳ್ಕೊಳಲ್ವಾ?’
‘ಅದಕ್ಕೇನು? ಅವಾಗವಾಗ ಪಾಲಿಶ್ ಮಾಡಿದ್ರಾಯ್ತು. ಅವರು ದುಡ್ಡು, ಕಾಸು ಇಟ್ಕೊಂಡು ಅನುಕೂಲವಾಗೇ ಇದಾರೆ. ಸಮುದ್ರ ದಿಂದ ಮುತ್ತು, ಹವಳ ಹೊತ್ತು ತಂದು ಹೆಂಡ್ತಿ ಅನ್ನೋ ಚಿನ್ನಕ್ಕೆ ಪೋಣಿಸ್ತಾರಲ್ಲ, ಇನ್ನೇನು?’