<p>ಶುಭ್ರ ಬಿಳಿ ಬಣ್ಣದ ಜುಬ್ಬಾ, ಪ್ಯಾಂಟ್ ಹಾಕಿಕೊಂಡು, ಹಣೆಗೆ ಕುಂಕುಮ ಧರಿಸಿ ಅತೀವ ಶ್ರದ್ಧೆ, ವಿನಯದಿಂದ ಬಂದು ಎದುರು ಕುಳಿತ ಮುದ್ದಣ್ಣ. </p><p>‘ಅಪಾರ ವಿಶ್ವಾಸದಿಂದ ನಿನ್ನ ಮೊಗ ಪ್ರಜ್ವಲಿಸುತ್ತಿದೆ. ಸಂಕಷ್ಟದಲ್ಲಿಯೂ ಇಷ್ಟು ಸಂತಸದಿಂದ ಇರಲು ಹೇಗೆ ಸಾಧ್ಯ ಅಣ್ಣ?’ ಕೇಳಿದ ವಿಜಿ. </p><p>‘ಮೇಲಿನವನು ಹೇಳಿದಂತೆ ನಡೆದರೆ ಎಲ್ಲವೂ ಸಾಧ್ಯ’ ಸಮಾಧಾನದಿಂದ ಹೇಳಿದ ಮುದ್ದಣ್ಣ. </p><p>‘ಮೇಲಿನವನು ಎಂದರೆ ದೇವರಾ?’ </p><p>‘ಅಲ್ಲ. ನಮ್ಮ ಜ್ಯೋತಿಷಿ’.</p><p>‘ಜ್ಯೋತಿಷಿ ಮಾತು ಅಷ್ಟು ಮುಖ್ಯವೇ?’ </p><p>‘ನಂಬಿಕೆ ಮುಖ್ಯ ವಿಜಿ. ನಂಬಿಕೆ ಇದ್ದರೆ ಯಾವುದೂ ಅಸಾಧ್ಯವಲ್ಲ’. </p><p>‘ಜ್ಯೋತಿಷಿಗಳೇ ಮಾರ್ಗದರ್ಶನ ನೀಡಿದ್ದಾರೆ ಎಂದರೆ, ನೀವು ಯಾವುದೋ ಮಹಾ ಕಾರ್ಯಕ್ಕೆ ತೆರಳುತ್ತಿದ್ದೀರಿ ಅನಿಸುತ್ತೆ. ಅಲ್ವಾ ಅಣ್ಣ?’ </p><p>‘ಪೊಲೀಸರ ಬಳಿಗೆ’ ತಣ್ಣಗೆ ಹೇಳಿದ ಮುದ್ದಣ್ಣ. </p><p>‘ಅದ್ಯಾಕಣ್ಣ’ ಅಚ್ಚರಿಯಿಂದ ಕೇಳಿದ ವಿಜಿ. </p><p>‘ಕೇಸ್ ಹಾಕಿದ್ದಾರೆ. ಅದಕ್ಕೆ ಹೋಗಬೇಕು?’ </p><p>‘ತಿಂಗಳಿಂದಲೂ ಪೊಲೀಸರು ನಿಮಗಾಗಿ ಕಾಯುತ್ತಿದ್ದರೂ ಇವತ್ತೇ ಏಕೆ ಹೋಗ್ತಿದ್ದೀರಣ್ಣ?’ </p><p>‘ಶುಕ್ರವಾರ ಪೊಲೀಸರ ಮುಂದೆ ಹೋದರೆ ನಿಮಗೆ ಏನೂ ತೊಂದರೆಯಾಗದು ಅಂತ ನಮ್ಮ ಜ್ಯೋತಿಷಿ ಹೇಳಿದ್ದಾರೆ. ಅದಕ್ಕೆ ಇವತ್ತೇ ಹೋಗ್ತಿದ್ದೀನಿ. ಆ ದೇವರಿದ್ದಾನೆ’.</p><p>‘ಕೆಟ್ಟ ಕೆಲಸ ಮಾಡಿ ದೇವರಿದ್ದಾನೆ ಅಂದರೆ ಹೇಗೆ’ ಅಂತ ಗುನುಗಿಕೊಂಡ ವಿಜಿ, ‘ಹೌದಣ್ಣ, ಆ ದೇವರೇ ನೋಡಿಕೊಳ್ತಾನೆ ಬಿಡಿ’ ಎಂದ ಜೋರಾಗಿ. </p><p>ಮುದ್ದಣ್ಣನ ಬಂಧನವಾಯಿತು. ‘ಅಯ್ಯೋ, ಜ್ಯೋತಿಷಿ ಹೇಳಿದ್ದಾರೆ ಅಂತ ಶುಕ್ರವಾರ ಪೊಲೀಸರ ಬಳಿ ಹೋಗಿದ್ದರು ನಮ್ಮಣ್ಣ. ಆದರೂ ಅರೆಸ್ಟ್ ಆಗಿಬಿಡ್ತು’ ಟಿ.ವಿ ನೋಡುತ್ತಾ ಹೇಳಿದ ವಿಜಿ. </p><p>‘ಪೊಲೀಸಿನವರೂ ಜ್ಯೋತಿಷಿ ಬಳಿ ಹೋಗಿದ್ದರಂತೆ. ಮಹಿಳೆಯರು ದುರ್ಗೆಯ ರೂಪ. ಐವರು ಮಹಿಳೆಯರೇ ಅರೆಸ್ಟ್ ಮಾಡಿದರೆ ಗ್ಯಾರಂಟಿ ಶಿಕ್ಷೆಯಾಗುತ್ತೆ ಅಂತ ಅವರಿಗೆ ಹೇಳಿದರಂತೆ. ಅದಕ್ಕೆ ಲೇಡಿ ಆಫೀಸರ್ಸ್ ಬಂಧಿಸಿದ್ದಾರೆ. ಯಾವ ಜ್ಯೋತಿಷಿ ಭವಿಷ್ಯ ನಿಜವಾಗುತ್ತೋ ನೋಡೋಣ’ ಎಂದು ನಕ್ಕಳು ವಿಜಿಯ ಪತ್ನಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶುಭ್ರ ಬಿಳಿ ಬಣ್ಣದ ಜುಬ್ಬಾ, ಪ್ಯಾಂಟ್ ಹಾಕಿಕೊಂಡು, ಹಣೆಗೆ ಕುಂಕುಮ ಧರಿಸಿ ಅತೀವ ಶ್ರದ್ಧೆ, ವಿನಯದಿಂದ ಬಂದು ಎದುರು ಕುಳಿತ ಮುದ್ದಣ್ಣ. </p><p>‘ಅಪಾರ ವಿಶ್ವಾಸದಿಂದ ನಿನ್ನ ಮೊಗ ಪ್ರಜ್ವಲಿಸುತ್ತಿದೆ. ಸಂಕಷ್ಟದಲ್ಲಿಯೂ ಇಷ್ಟು ಸಂತಸದಿಂದ ಇರಲು ಹೇಗೆ ಸಾಧ್ಯ ಅಣ್ಣ?’ ಕೇಳಿದ ವಿಜಿ. </p><p>‘ಮೇಲಿನವನು ಹೇಳಿದಂತೆ ನಡೆದರೆ ಎಲ್ಲವೂ ಸಾಧ್ಯ’ ಸಮಾಧಾನದಿಂದ ಹೇಳಿದ ಮುದ್ದಣ್ಣ. </p><p>‘ಮೇಲಿನವನು ಎಂದರೆ ದೇವರಾ?’ </p><p>‘ಅಲ್ಲ. ನಮ್ಮ ಜ್ಯೋತಿಷಿ’.</p><p>‘ಜ್ಯೋತಿಷಿ ಮಾತು ಅಷ್ಟು ಮುಖ್ಯವೇ?’ </p><p>‘ನಂಬಿಕೆ ಮುಖ್ಯ ವಿಜಿ. ನಂಬಿಕೆ ಇದ್ದರೆ ಯಾವುದೂ ಅಸಾಧ್ಯವಲ್ಲ’. </p><p>‘ಜ್ಯೋತಿಷಿಗಳೇ ಮಾರ್ಗದರ್ಶನ ನೀಡಿದ್ದಾರೆ ಎಂದರೆ, ನೀವು ಯಾವುದೋ ಮಹಾ ಕಾರ್ಯಕ್ಕೆ ತೆರಳುತ್ತಿದ್ದೀರಿ ಅನಿಸುತ್ತೆ. ಅಲ್ವಾ ಅಣ್ಣ?’ </p><p>‘ಪೊಲೀಸರ ಬಳಿಗೆ’ ತಣ್ಣಗೆ ಹೇಳಿದ ಮುದ್ದಣ್ಣ. </p><p>‘ಅದ್ಯಾಕಣ್ಣ’ ಅಚ್ಚರಿಯಿಂದ ಕೇಳಿದ ವಿಜಿ. </p><p>‘ಕೇಸ್ ಹಾಕಿದ್ದಾರೆ. ಅದಕ್ಕೆ ಹೋಗಬೇಕು?’ </p><p>‘ತಿಂಗಳಿಂದಲೂ ಪೊಲೀಸರು ನಿಮಗಾಗಿ ಕಾಯುತ್ತಿದ್ದರೂ ಇವತ್ತೇ ಏಕೆ ಹೋಗ್ತಿದ್ದೀರಣ್ಣ?’ </p><p>‘ಶುಕ್ರವಾರ ಪೊಲೀಸರ ಮುಂದೆ ಹೋದರೆ ನಿಮಗೆ ಏನೂ ತೊಂದರೆಯಾಗದು ಅಂತ ನಮ್ಮ ಜ್ಯೋತಿಷಿ ಹೇಳಿದ್ದಾರೆ. ಅದಕ್ಕೆ ಇವತ್ತೇ ಹೋಗ್ತಿದ್ದೀನಿ. ಆ ದೇವರಿದ್ದಾನೆ’.</p><p>‘ಕೆಟ್ಟ ಕೆಲಸ ಮಾಡಿ ದೇವರಿದ್ದಾನೆ ಅಂದರೆ ಹೇಗೆ’ ಅಂತ ಗುನುಗಿಕೊಂಡ ವಿಜಿ, ‘ಹೌದಣ್ಣ, ಆ ದೇವರೇ ನೋಡಿಕೊಳ್ತಾನೆ ಬಿಡಿ’ ಎಂದ ಜೋರಾಗಿ. </p><p>ಮುದ್ದಣ್ಣನ ಬಂಧನವಾಯಿತು. ‘ಅಯ್ಯೋ, ಜ್ಯೋತಿಷಿ ಹೇಳಿದ್ದಾರೆ ಅಂತ ಶುಕ್ರವಾರ ಪೊಲೀಸರ ಬಳಿ ಹೋಗಿದ್ದರು ನಮ್ಮಣ್ಣ. ಆದರೂ ಅರೆಸ್ಟ್ ಆಗಿಬಿಡ್ತು’ ಟಿ.ವಿ ನೋಡುತ್ತಾ ಹೇಳಿದ ವಿಜಿ. </p><p>‘ಪೊಲೀಸಿನವರೂ ಜ್ಯೋತಿಷಿ ಬಳಿ ಹೋಗಿದ್ದರಂತೆ. ಮಹಿಳೆಯರು ದುರ್ಗೆಯ ರೂಪ. ಐವರು ಮಹಿಳೆಯರೇ ಅರೆಸ್ಟ್ ಮಾಡಿದರೆ ಗ್ಯಾರಂಟಿ ಶಿಕ್ಷೆಯಾಗುತ್ತೆ ಅಂತ ಅವರಿಗೆ ಹೇಳಿದರಂತೆ. ಅದಕ್ಕೆ ಲೇಡಿ ಆಫೀಸರ್ಸ್ ಬಂಧಿಸಿದ್ದಾರೆ. ಯಾವ ಜ್ಯೋತಿಷಿ ಭವಿಷ್ಯ ನಿಜವಾಗುತ್ತೋ ನೋಡೋಣ’ ಎಂದು ನಕ್ಕಳು ವಿಜಿಯ ಪತ್ನಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>