<p>‘ಈ ಸಲ ಕಪ್ ನಮ್ದೇ ಅಂತ ಕುಣೀತಿದ್ದಿರಿ… ಕಪ್ ಜೊತಿಗಿ ಕಪ್ಪುಚುಕ್ಕೆನೂ ಸಿಕ್ತು ಬಿಡು’ ಎಂದು ಬೆಕ್ಕಣ್ಣ ಹಂಗಿಸಿತು.</p>.<p>‘ಅದೇ ಮತ್ತೆ… ಈಗ ಒಬ್ಬರ ಮ್ಯಾಲೆ ಇನ್ನೊಬ್ಬರು ತಪ್ಪು ಹೊರೆಸತಾರೆ. ಯಾರನ್ನು ಅಮಾನತು ಮಾಡಿದ್ರೇನು, ಯಾರು ರಾಜೀನಾಮೆ ಕೊಟ್ಟರೇನು… ಹೋದ ಪ್ರಾಣ ಮಾತ್ರ ಬರಂಗಿಲ್ಲ’ ಎಂದೆ.</p>.<p>‘ಯಾರದೋ ಅಹಂಕಾರದ ತಪ್ಪು ನಿರ್ಧಾರಕ್ಕೆ ಇನ್ನಾರೋ ಹರಕೆಯ ಕುರಿ ಆಗತಾರೆ. ಕಪ್ ನಮ್ದೇ ಅಂತ ಕುಣಿಯೋದ್ರ ಜೊತಿಗಿ ಪ್ರಾಣನೂ ನಮ್ದೇ, ಜವಾಬ್ದಾರಿನೂ ನಮ್ದೇ ಅಂತ ಅಭಿಮಾನಿಗಳು ಯೋಚನೆ ಮಾಡಬೇಕಿತ್ತು’ ಎಂದು ಬೆಕ್ಕಣ್ಣ ಲೊಚಗುಟ್ಟಿತು.</p>.<p>‘ಅದ್ಸರಿ… ಆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯವರು ಒಂದೇ ದಿನದ ಸಂಭ್ರಮಾಚರಣೆಗೆ ಸುಮಾರು ₹15 ಕೋಟಿ ಖರ್ಚು ಮಾಡ್ಯಾರಂತೆ. ಅಷ್ಟಕೊಂದು ರೊಕ್ಕ ಎದಕ್ಕೆ ಖರ್ಚು ಮಾಡಿರತಾರೆ?’ ಎಂದೆ ನಾನು ಕೋಪದಿಂದ.</p>.<p>‘ಕ್ರೀಡಾಂಗಣದ ಹೊರಗೆ ಕಾಲ್ತುಳಿತ, ಒಳಗೆ ಸಂಭ್ರಮಾಚರಣೆ! ಅವ್ರಿಗಿ ರೊಕ್ಕ, ಮಂದಿ ಪ್ರಾಣ ಎರಡೂ ಲೆಕ್ಕಕ್ಕಿಲ್ಲ. ಆರ್ಸಿಬಿ ಮಾಜಿ ಮಾಲೀಕ ಮಲ್ಯ ಆವಾಗ ನಾ ₹476 ಕೋಟಿ ಬಿಡ್ ಮಾಡಿ ಆರ್ಸಿಬಿ ಟೀಮ್ ಕಟ್ಟಿದ್ದೆ… ನಮ್ ಹುಡುಗ್ರು ಕಪ್ ಬೆಂಗ್ಳೂರಿಗೆ ತಂದಿದನ್ನು ಕಣ್ಣು ತುಂಬಿಕೊಳ್ಳೋ ಭಾಗ್ಯನೂ ನನಗಿಲ್ಲ ಅಂತ ಲಂಡನ್ವಳಗೆ ಕುಂತು ಕಣ್ಣೀರು ಮಿಡಿದಾನೆ’ ಎಂದಿತು ಬೆಕ್ಕಣ್ಣ.</p>.<p>‘ಇದೇ ನೆವದಾಗೆ ನಾಕು ತಾಸಿನ ಪಾಡ್ಕಾಸ್ಟ್ ರಿಲೀಸ್ ಮಾಡ್ಯಾನೆ. ನಾ ಕಳ್ಳನೂ ಅಲ್ಲ, ಸುಳ್ಳನೂ ಅಲ್ಲ, ವಂಚಕನಂತೂ ಅಲ್ಲವೇ ಅಲ್ಲ. ನಾ ಎಲ್ಲಿಗೂ ಓಡಿಯೂ ಹೋಗಿಲ್ಲ. ಕೆಲಸದ ಮ್ಯಾಲೆ ಲಂಡನ್ನಿಗೆ ಬಂದಂವ ಇಲ್ಲೇ ಉಳದೀನಿ ಅಂತ ವಾದ ಮಾಡ್ಯಾನೆ’.</p>.<p>‘ಹೂಂ ಮತ್ತೆ… ಈ ಕಲಿಯುಗದಾಗೆ ಕಳ್ಳ, ಸುಳ್ಳ, ವಂಚಕ, ಮಾನವೀಯತೆ, ಅಭಿಮಾನದಂತಹ ಪದಗಳ ಅರ್ಥವೇ ಬದಲಾಗೈತಿ. ಹೊಸ ಶಬ್ದಕೋಶ ರಚಿಸಬೇಕು’ ಎಂದು ಬೆಕ್ಕಣ್ಣ ತಲೆ ಮೇಲೆ ಕೈ ಹೊತ್ತಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಈ ಸಲ ಕಪ್ ನಮ್ದೇ ಅಂತ ಕುಣೀತಿದ್ದಿರಿ… ಕಪ್ ಜೊತಿಗಿ ಕಪ್ಪುಚುಕ್ಕೆನೂ ಸಿಕ್ತು ಬಿಡು’ ಎಂದು ಬೆಕ್ಕಣ್ಣ ಹಂಗಿಸಿತು.</p>.<p>‘ಅದೇ ಮತ್ತೆ… ಈಗ ಒಬ್ಬರ ಮ್ಯಾಲೆ ಇನ್ನೊಬ್ಬರು ತಪ್ಪು ಹೊರೆಸತಾರೆ. ಯಾರನ್ನು ಅಮಾನತು ಮಾಡಿದ್ರೇನು, ಯಾರು ರಾಜೀನಾಮೆ ಕೊಟ್ಟರೇನು… ಹೋದ ಪ್ರಾಣ ಮಾತ್ರ ಬರಂಗಿಲ್ಲ’ ಎಂದೆ.</p>.<p>‘ಯಾರದೋ ಅಹಂಕಾರದ ತಪ್ಪು ನಿರ್ಧಾರಕ್ಕೆ ಇನ್ನಾರೋ ಹರಕೆಯ ಕುರಿ ಆಗತಾರೆ. ಕಪ್ ನಮ್ದೇ ಅಂತ ಕುಣಿಯೋದ್ರ ಜೊತಿಗಿ ಪ್ರಾಣನೂ ನಮ್ದೇ, ಜವಾಬ್ದಾರಿನೂ ನಮ್ದೇ ಅಂತ ಅಭಿಮಾನಿಗಳು ಯೋಚನೆ ಮಾಡಬೇಕಿತ್ತು’ ಎಂದು ಬೆಕ್ಕಣ್ಣ ಲೊಚಗುಟ್ಟಿತು.</p>.<p>‘ಅದ್ಸರಿ… ಆ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯವರು ಒಂದೇ ದಿನದ ಸಂಭ್ರಮಾಚರಣೆಗೆ ಸುಮಾರು ₹15 ಕೋಟಿ ಖರ್ಚು ಮಾಡ್ಯಾರಂತೆ. ಅಷ್ಟಕೊಂದು ರೊಕ್ಕ ಎದಕ್ಕೆ ಖರ್ಚು ಮಾಡಿರತಾರೆ?’ ಎಂದೆ ನಾನು ಕೋಪದಿಂದ.</p>.<p>‘ಕ್ರೀಡಾಂಗಣದ ಹೊರಗೆ ಕಾಲ್ತುಳಿತ, ಒಳಗೆ ಸಂಭ್ರಮಾಚರಣೆ! ಅವ್ರಿಗಿ ರೊಕ್ಕ, ಮಂದಿ ಪ್ರಾಣ ಎರಡೂ ಲೆಕ್ಕಕ್ಕಿಲ್ಲ. ಆರ್ಸಿಬಿ ಮಾಜಿ ಮಾಲೀಕ ಮಲ್ಯ ಆವಾಗ ನಾ ₹476 ಕೋಟಿ ಬಿಡ್ ಮಾಡಿ ಆರ್ಸಿಬಿ ಟೀಮ್ ಕಟ್ಟಿದ್ದೆ… ನಮ್ ಹುಡುಗ್ರು ಕಪ್ ಬೆಂಗ್ಳೂರಿಗೆ ತಂದಿದನ್ನು ಕಣ್ಣು ತುಂಬಿಕೊಳ್ಳೋ ಭಾಗ್ಯನೂ ನನಗಿಲ್ಲ ಅಂತ ಲಂಡನ್ವಳಗೆ ಕುಂತು ಕಣ್ಣೀರು ಮಿಡಿದಾನೆ’ ಎಂದಿತು ಬೆಕ್ಕಣ್ಣ.</p>.<p>‘ಇದೇ ನೆವದಾಗೆ ನಾಕು ತಾಸಿನ ಪಾಡ್ಕಾಸ್ಟ್ ರಿಲೀಸ್ ಮಾಡ್ಯಾನೆ. ನಾ ಕಳ್ಳನೂ ಅಲ್ಲ, ಸುಳ್ಳನೂ ಅಲ್ಲ, ವಂಚಕನಂತೂ ಅಲ್ಲವೇ ಅಲ್ಲ. ನಾ ಎಲ್ಲಿಗೂ ಓಡಿಯೂ ಹೋಗಿಲ್ಲ. ಕೆಲಸದ ಮ್ಯಾಲೆ ಲಂಡನ್ನಿಗೆ ಬಂದಂವ ಇಲ್ಲೇ ಉಳದೀನಿ ಅಂತ ವಾದ ಮಾಡ್ಯಾನೆ’.</p>.<p>‘ಹೂಂ ಮತ್ತೆ… ಈ ಕಲಿಯುಗದಾಗೆ ಕಳ್ಳ, ಸುಳ್ಳ, ವಂಚಕ, ಮಾನವೀಯತೆ, ಅಭಿಮಾನದಂತಹ ಪದಗಳ ಅರ್ಥವೇ ಬದಲಾಗೈತಿ. ಹೊಸ ಶಬ್ದಕೋಶ ರಚಿಸಬೇಕು’ ಎಂದು ಬೆಕ್ಕಣ್ಣ ತಲೆ ಮೇಲೆ ಕೈ ಹೊತ್ತಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>