‘ಮನೆಗೆ, ಜಮೀನಿಗೆ ತಕ್ಕಂಡ ಸಾಲ ತೀರಿಸದಿದ್ದರೆ ಬ್ಯಾಂಕುಗಳು ಆಸ್ತಿ ಮುಟ್ಟು ಗೋಲು ಹಾಕ್ಕಳ್ತಾವೆ. ಆದ್ರೆ ಮಲ್ಯ, ನೀರವ್ ಮೋದಿಯಂಥವರ ಸಹಸ್ರಾರು ಕೋಟಿ ಬ್ಯಾಡ್ಲೋನ್ ವಸೂಲು ಮಾಡಕ್ಕಾಗದೇ ತಲೆ ಮ್ಯಾಗೆ ತಟ್ಟು ಹಾಕ್ಕಂಡು, ಈಗ ಬ್ಯಾಡ್ಬ್ಯಾಂಕ್ ಸ್ಥಾಪನೆ ಮಾಡ್ತಿದಾರಲ್ಲ, ಹಂಗೇ ಇದು. ನಾಳೆ ವಳಗೆ ಪಾರ್ಕಿಂಗ್ ಶುಲ್ಕ ತುಂಬದಿದ್ದರೆ ಗಾಡಿ ಎತ್ಹಾಕ್ಕೊಂಡು ಹೋಗ್ತೀವಿ’ ಎಂದು ರಸೀದಿ ಕೈಯಲ್ಲಿಟ್ಟು ಹೋದನಾತ.