<p>ಶಂಕ್ರಿ, ಸುಮಿ ಎಲೆಕ್ಷನ್ ಎಕ್ಸಿಬಿಷನ್ಗೆ ಬಂದಿದ್ದರು.</p>.<p>‘ಬನ್ನಿ ಮೇಡಂ... ನಮ್ಮದು ಅನ್ನಭಾಗ್ಯ ಮಳಿಗೆ, ಐದು ಕೆ.ಜಿ ಅಕ್ಕಿ ಉಚಿತವಾಗಿ ಕೊಡ್ತೀವಿ’ ಅಂದ ಮಳಿಗೆಯವ.</p>.<p>‘ಹತ್ತು ಕೆ.ಜಿ ಕೊಡ್ತೀವಿ ಅಂತ ಹೇಳಿದ್ರಿ...’ ಅಂದ ಶಂಕ್ರಿ.</p>.<p>‘ಖರೀದಿಸಲು ಅಕ್ಕಿ ಸಿಗದಂತೆ ಮಾಡಿದ್ದಾರೆ ಇವ್ರು’ ಎಂದು ಪಕ್ಕದ ಮಳಿಗೆಯವನನ್ನು ದೂರಿ, ‘ಅಕ್ಕಿ ಬದಲು ದುಡ್ಡು ಕೊಡ್ತಿದ್ದೀವಲ್ಲ’ ಅಂದ.</p>.<p>‘ನಿಮ್ಮ ಅಕ್ಕಿ ದುಡ್ಡು ಉಪ್ಪು, ಮೆಣಸಿನಕಾಯಿಗೂ ಸಾಕಾಗಲ್ಲ’ ಪಕ್ಕದವನು ಕಿಚಾಯಿಸಿದ.</p>.<p>‘ನಾವು ಎಷ್ಟೊಂದು ಫ್ರೀ ಕೊಡ್ತಿದ್ದೀವಿ, ನೀವು ಯಾವುದನ್ನಾದ್ರೂ ಫ್ರೀ <br>ಕೊಟ್ಟಿದ್ದೀರೇನ್ರೀ?’ ಅಂದ. ಇಬ್ಬರೂ ಜಗಳಕ್ಕೆ ಬಿದ್ದರು.</p>.<p>ಶಂಕ್ರಿ, ಸುಮಿ ಇನ್ನೊಂದು ಮಳಿಗೆಗೆ ಬಂದರು. ‘ಎಲೆಕ್ಷನ್ ಟಿಕೆಟ್ ಸಿಗದೆ ನೊಂದವರಿಗೆ ಸಾಂತ್ವನ ಹೇಳುವ ಪರಿಣಾಮಕಾರಿ ಪುಸ್ತಕಗಳು ನಮ್ಮಲ್ಲಿವೆ. ಪುಸ್ತಕ ಓದಿಯೂ ನೋವು ನಿವಾರಣೆ ಆಗದಿದ್ದರೆ, ತಜ್ಞರಿಂದ ಚಿಕಿತ್ಸೆ ಕೊಡುಸ್ತೀವಿ’ ಎಂದ.</p>.<p>‘ಮೇಕೆ ಮಳಿಗೆ’ಗೆ ಬಂದರು. ‘ಇದು ಮಟನ್ ಸ್ಟಾಲಾ?’ ಸುಮಿ ಕೇಳಿದಳು.</p>.<p>‘ಅಲ್ಲ ಮೇಡಂ, ನಮ್ಮಲ್ಲಿ ಕಾವೇರಿ ನದಿ ದಾಟಬಲ್ಲ ಮೇಕೆಗಳಿವೆ. ಎಲೆಕ್ಷನ್ನಲ್ಲಿ ಗೆದ್ದರೆ ನಾವು ಮೇಕೆಯನ್ನು ನದಿ ದಾಟಿಸುತ್ತೇವೆ’ ಅಂದ.</p>.<p>ಭಾಗ್ಯ, ಸೌಭಾಗ್ಯದ ಮಳಿಗೆಗಳನ್ನು ಸುತ್ತಾಡಿ ಶಂಕ್ರಿ, ಸುಮಿ ದಣಿದು ಬಾಯಾರಿದರು.</p>.<p>‘ನೀರಿನ ಮಳಿಗೆ ಎಲ್ಲಿದೆ?’ ಶಂಕ್ರಿ ಕೇಳಿದ.</p>.<p>‘ನೀರು ಮಾತ್ರ ಕೇಳಬೇಡಿ ಸಾರ್, ನಾವೇ ದುಡ್ಡು ಕೊಟ್ಟು ಟ್ಯಾಂಕರ್ನಲ್ಲಿ ನೀರು <br>ತರಿಸಿಕೊಳ್ತಿದ್ದೀವಿ, ಎಲೆಕ್ಷನ್ ಎಕ್ಸಿಬಿಷನ್ನಲ್ಲಿ ನೀರಿನ ಮಳಿಗೆ ಇಲ್ಲ...’ ಅಂದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಂಕ್ರಿ, ಸುಮಿ ಎಲೆಕ್ಷನ್ ಎಕ್ಸಿಬಿಷನ್ಗೆ ಬಂದಿದ್ದರು.</p>.<p>‘ಬನ್ನಿ ಮೇಡಂ... ನಮ್ಮದು ಅನ್ನಭಾಗ್ಯ ಮಳಿಗೆ, ಐದು ಕೆ.ಜಿ ಅಕ್ಕಿ ಉಚಿತವಾಗಿ ಕೊಡ್ತೀವಿ’ ಅಂದ ಮಳಿಗೆಯವ.</p>.<p>‘ಹತ್ತು ಕೆ.ಜಿ ಕೊಡ್ತೀವಿ ಅಂತ ಹೇಳಿದ್ರಿ...’ ಅಂದ ಶಂಕ್ರಿ.</p>.<p>‘ಖರೀದಿಸಲು ಅಕ್ಕಿ ಸಿಗದಂತೆ ಮಾಡಿದ್ದಾರೆ ಇವ್ರು’ ಎಂದು ಪಕ್ಕದ ಮಳಿಗೆಯವನನ್ನು ದೂರಿ, ‘ಅಕ್ಕಿ ಬದಲು ದುಡ್ಡು ಕೊಡ್ತಿದ್ದೀವಲ್ಲ’ ಅಂದ.</p>.<p>‘ನಿಮ್ಮ ಅಕ್ಕಿ ದುಡ್ಡು ಉಪ್ಪು, ಮೆಣಸಿನಕಾಯಿಗೂ ಸಾಕಾಗಲ್ಲ’ ಪಕ್ಕದವನು ಕಿಚಾಯಿಸಿದ.</p>.<p>‘ನಾವು ಎಷ್ಟೊಂದು ಫ್ರೀ ಕೊಡ್ತಿದ್ದೀವಿ, ನೀವು ಯಾವುದನ್ನಾದ್ರೂ ಫ್ರೀ <br>ಕೊಟ್ಟಿದ್ದೀರೇನ್ರೀ?’ ಅಂದ. ಇಬ್ಬರೂ ಜಗಳಕ್ಕೆ ಬಿದ್ದರು.</p>.<p>ಶಂಕ್ರಿ, ಸುಮಿ ಇನ್ನೊಂದು ಮಳಿಗೆಗೆ ಬಂದರು. ‘ಎಲೆಕ್ಷನ್ ಟಿಕೆಟ್ ಸಿಗದೆ ನೊಂದವರಿಗೆ ಸಾಂತ್ವನ ಹೇಳುವ ಪರಿಣಾಮಕಾರಿ ಪುಸ್ತಕಗಳು ನಮ್ಮಲ್ಲಿವೆ. ಪುಸ್ತಕ ಓದಿಯೂ ನೋವು ನಿವಾರಣೆ ಆಗದಿದ್ದರೆ, ತಜ್ಞರಿಂದ ಚಿಕಿತ್ಸೆ ಕೊಡುಸ್ತೀವಿ’ ಎಂದ.</p>.<p>‘ಮೇಕೆ ಮಳಿಗೆ’ಗೆ ಬಂದರು. ‘ಇದು ಮಟನ್ ಸ್ಟಾಲಾ?’ ಸುಮಿ ಕೇಳಿದಳು.</p>.<p>‘ಅಲ್ಲ ಮೇಡಂ, ನಮ್ಮಲ್ಲಿ ಕಾವೇರಿ ನದಿ ದಾಟಬಲ್ಲ ಮೇಕೆಗಳಿವೆ. ಎಲೆಕ್ಷನ್ನಲ್ಲಿ ಗೆದ್ದರೆ ನಾವು ಮೇಕೆಯನ್ನು ನದಿ ದಾಟಿಸುತ್ತೇವೆ’ ಅಂದ.</p>.<p>ಭಾಗ್ಯ, ಸೌಭಾಗ್ಯದ ಮಳಿಗೆಗಳನ್ನು ಸುತ್ತಾಡಿ ಶಂಕ್ರಿ, ಸುಮಿ ದಣಿದು ಬಾಯಾರಿದರು.</p>.<p>‘ನೀರಿನ ಮಳಿಗೆ ಎಲ್ಲಿದೆ?’ ಶಂಕ್ರಿ ಕೇಳಿದ.</p>.<p>‘ನೀರು ಮಾತ್ರ ಕೇಳಬೇಡಿ ಸಾರ್, ನಾವೇ ದುಡ್ಡು ಕೊಟ್ಟು ಟ್ಯಾಂಕರ್ನಲ್ಲಿ ನೀರು <br>ತರಿಸಿಕೊಳ್ತಿದ್ದೀವಿ, ಎಲೆಕ್ಷನ್ ಎಕ್ಸಿಬಿಷನ್ನಲ್ಲಿ ನೀರಿನ ಮಳಿಗೆ ಇಲ್ಲ...’ ಅಂದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>