‘ನಾವು ಎಷ್ಟೊಂದು ಫ್ರೀ ಕೊಡ್ತಿದ್ದೀವಿ, ನೀವು ಯಾವುದನ್ನಾದ್ರೂ ಫ್ರೀ ಕೊಟ್ಟಿದ್ದೀರೇನ್ರೀ?’ ಅಂದ. ಇಬ್ಬರೂ ಜಗಳಕ್ಕೆ ಬಿದ್ದರು.
ಶಂಕ್ರಿ, ಸುಮಿ ಇನ್ನೊಂದು ಮಳಿಗೆಗೆ ಬಂದರು. ‘ಎಲೆಕ್ಷನ್ ಟಿಕೆಟ್ ಸಿಗದೆ ನೊಂದವರಿಗೆ ಸಾಂತ್ವನ ಹೇಳುವ ಪರಿಣಾಮಕಾರಿ ಪುಸ್ತಕಗಳು ನಮ್ಮಲ್ಲಿವೆ. ಪುಸ್ತಕ ಓದಿಯೂ ನೋವು ನಿವಾರಣೆ ಆಗದಿದ್ದರೆ, ತಜ್ಞರಿಂದ ಚಿಕಿತ್ಸೆ ಕೊಡುಸ್ತೀವಿ’ ಎಂದ.
‘ಮೇಕೆ ಮಳಿಗೆ’ಗೆ ಬಂದರು. ‘ಇದು ಮಟನ್ ಸ್ಟಾಲಾ?’ ಸುಮಿ ಕೇಳಿದಳು.
‘ಅಲ್ಲ ಮೇಡಂ, ನಮ್ಮಲ್ಲಿ ಕಾವೇರಿ ನದಿ ದಾಟಬಲ್ಲ ಮೇಕೆಗಳಿವೆ. ಎಲೆಕ್ಷನ್ನಲ್ಲಿ ಗೆದ್ದರೆ ನಾವು ಮೇಕೆಯನ್ನು ನದಿ ದಾಟಿಸುತ್ತೇವೆ’ ಅಂದ.