ಇಂಗ್ಲಿಷ್ ತಲೆಗೆ ಹತ್ತಲಿಲ್ಲ ಅಂತ ವಿಪರೀತ ಕನ್ನಡಾಭಿಮಾನ ಬೆಳೆಸಿಕೊಂಡಿದ್ದ ತಿಂಗಳೇಶ, ‘ಅವರ ಭಾಷಣದ ಕನ್ನಡ ಅನುವಾದ ಕಿವಿಯಾರೆ ಕೇಳೇನಿ, ‘ನಾವು ಅಧಿಕಾರದಲ್ಲಿ ಇದ್ದಾಗ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮುಖಾಂತರ ಪೌಷ್ಟಿಕ ಆಹಾರ ಕೊಡ್ತಾ ಇದ್ವಿ, ಕರ್ನಾಟಕದಲ್ಲಿ ಇಂಥ ಕಾರ್ಯಕ್ರಮಗಳನ್ನ ಜನ್ರಿಗೆ ತಲುಪಿಸೋದಕ್ಕೆ ಪ್ರಯತ್ನಶೀಲರಾಗಿದ್ದೇವೆ’ ಅಂತ ಸಮಾಜವಾದಿ ಶಂಕರ್ ಕಾಕಾ ತಮ್ಮ ಬಾಯಾರೆ ಹೇಳ್ಯಾರ. ನೀನು ನೋಡಿದರೆ ಇಂದಿರಾ ಕ್ಯಾಂಟೀನ್ ಎಳೆದು ತರುತ್ತೀಯ...’