ಹೋದ ವರ್ಷ ಇದೇ ಸಮಯದಲ್ಲಿ ಬೆಕ್ಕಣ್ಣ ‘ನಂಗೂ ಶಂಖ, ಜಾಗಟೆ ತರಿಸಿಕೊಡು, ಶಂಖ ಊದಿ, ಜಾಗಟೆ ಬಡಿದು ಗೋ ಕೊರೊನಾ ಗೋ ಅಂತ ಹಾಡಿ, ಕೊರೊನಾ ಓಡಿಸ್ತೀನಿ’ ಎಂದು ವರಾತ ಹಚ್ಚಿತ್ತು. ಆಮೇಲೆ ಗೋಮೂತ್ರ ಡೆಲಿವರಿ ಸರ್ವಿಸ್ ಶುರುಮಾಡತೀನಿ, ಕಷಾಯದ ಪುಡಿ ಫ್ಯಾಕ್ಟರಿ ಹಾಕತೀನಿ ಎಂದೆಲ್ಲ ಏನೇನೋ ನವೋದ್ಯಮದ ಕನಸು ಹೊಸೆಯುತ್ತಿತ್ತು.