<p><strong>ಕಾವೇರಿ, ಗಡಿ ಪ್ರಶ್ನೆ ನಿಷ್ಪಕ್ಷಪಾತ ತೀರ್ಮಾನ: ಪ್ರಧಾನಿ ಭರವಸೆ</strong><br /><strong>ಬೆಂಗಳೂರು, ಮಾ. 14–</strong> ಗಡಿ ಹಾಗೂ ಕಾವೇರಿ ನೀರು ಸಮಸ್ಯೆಗಳೆರಡನ್ನೂ ಸಹಾನುಭೂತಿಯಿಂದ ಪರಿಶೀಲಿಸಿ ನಿಷ್ಪಕ್ಷಪಾತವಾದ ರೀತಿಯಲ್ಲಿ ತೀರ್ಮಾನಕ್ಕೆ ಬರುವುದಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಭರವಸೆ ನೀಡಿದರು.</p>.<p>ದೀರ್ಘಕಾಲದ ಈ ಸಮಸ್ಯೆಯನ್ನು ಶಾಂತಿ ವಾತಾವರಣದಲ್ಲಿ ಯಾರ ಹಿತಕ್ಕೂ ಧಕ್ಕೆ ಬಾರದ ರೀತಿಯಲ್ಲಿ ತೀರ್ಮಾನಿಸಬೇಕಾದುದು ಅಗತ್ಯವೆಂದರು. ವಿಮಾನ ನಿಲ್ದಾಣದಲ್ಲಿ ಆಡಳಿತ ಕಾಂಗ್ರೆಸ್ಸಿನ ಶಾಸಕರು ಹಾಗೂ ಅಡ್ ಹಾಕ್ ಸಮಿತಿಯ ಸದಸ್ಯರು ನೀಡಿದ ಸ್ವಾಗತ ಸಂದರ್ಭದಲ್ಲಿ ಪ್ರಧಾನಿ ಈ ಆಶ್ವಾಸನೆ ನೀಡಿದರು.</p>.<p><strong>ಕಾವೇರಿ ಒಪ್ಪಂದ: 3 ವಾರಗಳಲ್ಲಿ ಮೈಸೂರು ನಿಲುವು ಸ್ಪಷ್ಟನೆ</strong><br /><strong>ಬೆಂಗಳೂರು, ಮಾ. 14:</strong> ಕಾವೇರಿ ನೀರು ಬಳಕೆ ಸಂಬಂಧದಲ್ಲಿ 1924ರಲ್ಲಿ ಮೈಸೂರು ಮತ್ತು ಮದರಾಸ್ ಸರ್ಕಾರಗಳ ನಡುವೆ ಆದ ಒಪ್ಪಂದವನ್ನು ‘ದುರ್ದೈವದ ಒಪ್ಪಂದ’ ಎಂದು ಕರೆದ ಮುಖ್ಯಮಂತ್ರಿ ಶ್ರೀವೀರೇಂದ್ರ ಪಾಟೀಲರು ಈ ಒಪ್ಪಂದದ ಬಗ್ಗೆ ಮೈಸೂರು ಸರ್ಕಾರದ ನಿಲುವೇನೆಂಬುದನ್ನು ಇನ್ನು ಎರಡು–ಮೂರು ವಾರಗಳಲ್ಲಿ ಹೇಳುವುದಾಗಿ ಇಂದು ತಿಳಿಸಿದರು. ವಿವಾದದ ಬಗ್ಗೆ ಕೇಂದ್ರದ ಸಚಿವ ಡಾ.ಕೆ.ಎಲ್. ರಾವ್ ಅವರು ಪಾರ್ಲಿಮೆಂಟಿನಲ್ಲಿ ನೀಡಿದ ಹೇಳಿಕೆಯಿಂದ ಉದ್ಭವಿಸಿರುವ ಸ್ಥಿತಿ ಕುರಿತು ಮೇಲ್ಮನೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಿ ಈ ವಿಷಯನ್ನು ಸರ್ಕಾರವೂ, ತಜ್ಞರು ಪರಿಶೀಲಿಸುತ್ತಿದ್ದಾರೆಂದರು.</p>.<p><strong>ಗುಜರಾತ್ ಸ್ವತಂತ್ರ ಪಕ್ಷ ಸರ್ಕಾರ ರಚಿಸಿದಲ್ಲಿ ಆಡಳಿತ ಕಾಂಗ್ರೆಸ್ ಬೆಂಬಲ: ರಾಮ್</strong><br /><strong>ಅಹ್ಮದಾಬಾದ್, ಮಾ. 14</strong>–ಗುಜರಾತಿನಲ್ಲಿ ಸ್ವತಂತ್ರ ಪಕ್ಷ ಸರ್ಕಾರ ರಚಿಸಿದಲ್ಲಿ ಆಡಳಿತ ಕಾಂಗ್ರೆಸ್ ಸಂಪುಟದಿಂದ ಹೊರಗಿದ್ದುಕೊಂಡೇ ಅದಕ್ಕೆ ಬೆಂಬಲ ನೀಡುವುದೆಂದು ಆಡಳಿತ ಕಾಂಗ್ರೆಸ್ ಅಧ್ಯಕ್ಷ ಜಗಜೀವನ ರಾಂ ಅವರು ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ, ಗಡಿ ಪ್ರಶ್ನೆ ನಿಷ್ಪಕ್ಷಪಾತ ತೀರ್ಮಾನ: ಪ್ರಧಾನಿ ಭರವಸೆ</strong><br /><strong>ಬೆಂಗಳೂರು, ಮಾ. 14–</strong> ಗಡಿ ಹಾಗೂ ಕಾವೇರಿ ನೀರು ಸಮಸ್ಯೆಗಳೆರಡನ್ನೂ ಸಹಾನುಭೂತಿಯಿಂದ ಪರಿಶೀಲಿಸಿ ನಿಷ್ಪಕ್ಷಪಾತವಾದ ರೀತಿಯಲ್ಲಿ ತೀರ್ಮಾನಕ್ಕೆ ಬರುವುದಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಭರವಸೆ ನೀಡಿದರು.</p>.<p>ದೀರ್ಘಕಾಲದ ಈ ಸಮಸ್ಯೆಯನ್ನು ಶಾಂತಿ ವಾತಾವರಣದಲ್ಲಿ ಯಾರ ಹಿತಕ್ಕೂ ಧಕ್ಕೆ ಬಾರದ ರೀತಿಯಲ್ಲಿ ತೀರ್ಮಾನಿಸಬೇಕಾದುದು ಅಗತ್ಯವೆಂದರು. ವಿಮಾನ ನಿಲ್ದಾಣದಲ್ಲಿ ಆಡಳಿತ ಕಾಂಗ್ರೆಸ್ಸಿನ ಶಾಸಕರು ಹಾಗೂ ಅಡ್ ಹಾಕ್ ಸಮಿತಿಯ ಸದಸ್ಯರು ನೀಡಿದ ಸ್ವಾಗತ ಸಂದರ್ಭದಲ್ಲಿ ಪ್ರಧಾನಿ ಈ ಆಶ್ವಾಸನೆ ನೀಡಿದರು.</p>.<p><strong>ಕಾವೇರಿ ಒಪ್ಪಂದ: 3 ವಾರಗಳಲ್ಲಿ ಮೈಸೂರು ನಿಲುವು ಸ್ಪಷ್ಟನೆ</strong><br /><strong>ಬೆಂಗಳೂರು, ಮಾ. 14:</strong> ಕಾವೇರಿ ನೀರು ಬಳಕೆ ಸಂಬಂಧದಲ್ಲಿ 1924ರಲ್ಲಿ ಮೈಸೂರು ಮತ್ತು ಮದರಾಸ್ ಸರ್ಕಾರಗಳ ನಡುವೆ ಆದ ಒಪ್ಪಂದವನ್ನು ‘ದುರ್ದೈವದ ಒಪ್ಪಂದ’ ಎಂದು ಕರೆದ ಮುಖ್ಯಮಂತ್ರಿ ಶ್ರೀವೀರೇಂದ್ರ ಪಾಟೀಲರು ಈ ಒಪ್ಪಂದದ ಬಗ್ಗೆ ಮೈಸೂರು ಸರ್ಕಾರದ ನಿಲುವೇನೆಂಬುದನ್ನು ಇನ್ನು ಎರಡು–ಮೂರು ವಾರಗಳಲ್ಲಿ ಹೇಳುವುದಾಗಿ ಇಂದು ತಿಳಿಸಿದರು. ವಿವಾದದ ಬಗ್ಗೆ ಕೇಂದ್ರದ ಸಚಿವ ಡಾ.ಕೆ.ಎಲ್. ರಾವ್ ಅವರು ಪಾರ್ಲಿಮೆಂಟಿನಲ್ಲಿ ನೀಡಿದ ಹೇಳಿಕೆಯಿಂದ ಉದ್ಭವಿಸಿರುವ ಸ್ಥಿತಿ ಕುರಿತು ಮೇಲ್ಮನೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಿ ಈ ವಿಷಯನ್ನು ಸರ್ಕಾರವೂ, ತಜ್ಞರು ಪರಿಶೀಲಿಸುತ್ತಿದ್ದಾರೆಂದರು.</p>.<p><strong>ಗುಜರಾತ್ ಸ್ವತಂತ್ರ ಪಕ್ಷ ಸರ್ಕಾರ ರಚಿಸಿದಲ್ಲಿ ಆಡಳಿತ ಕಾಂಗ್ರೆಸ್ ಬೆಂಬಲ: ರಾಮ್</strong><br /><strong>ಅಹ್ಮದಾಬಾದ್, ಮಾ. 14</strong>–ಗುಜರಾತಿನಲ್ಲಿ ಸ್ವತಂತ್ರ ಪಕ್ಷ ಸರ್ಕಾರ ರಚಿಸಿದಲ್ಲಿ ಆಡಳಿತ ಕಾಂಗ್ರೆಸ್ ಸಂಪುಟದಿಂದ ಹೊರಗಿದ್ದುಕೊಂಡೇ ಅದಕ್ಕೆ ಬೆಂಬಲ ನೀಡುವುದೆಂದು ಆಡಳಿತ ಕಾಂಗ್ರೆಸ್ ಅಧ್ಯಕ್ಷ ಜಗಜೀವನ ರಾಂ ಅವರು ಇಂದು ಇಲ್ಲಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>