ಕಾವೇರಿ ಒಪ್ಪಂದ: 3 ವಾರಗಳಲ್ಲಿ ಮೈಸೂರು ನಿಲುವು ಸ್ಪಷ್ಟನೆ
ಬೆಂಗಳೂರು, ಮಾ. 14: ಕಾವೇರಿ ನೀರು ಬಳಕೆ ಸಂಬಂಧದಲ್ಲಿ 1924ರಲ್ಲಿ ಮೈಸೂರು ಮತ್ತು ಮದರಾಸ್ ಸರ್ಕಾರಗಳ ನಡುವೆ ಆದ ಒಪ್ಪಂದವನ್ನು ‘ದುರ್ದೈವದ ಒಪ್ಪಂದ’ ಎಂದು ಕರೆದ ಮುಖ್ಯಮಂತ್ರಿ ಶ್ರೀವೀರೇಂದ್ರ ಪಾಟೀಲರು ಈ ಒಪ್ಪಂದದ ಬಗ್ಗೆ ಮೈಸೂರು ಸರ್ಕಾರದ ನಿಲುವೇನೆಂಬುದನ್ನು ಇನ್ನು ಎರಡು–ಮೂರು ವಾರಗಳಲ್ಲಿ ಹೇಳುವುದಾಗಿ ಇಂದು ತಿಳಿಸಿದರು. ವಿವಾದದ ಬಗ್ಗೆ ಕೇಂದ್ರದ ಸಚಿವ ಡಾ.ಕೆ.ಎಲ್. ರಾವ್ ಅವರು ಪಾರ್ಲಿಮೆಂಟಿನಲ್ಲಿ ನೀಡಿದ ಹೇಳಿಕೆಯಿಂದ ಉದ್ಭವಿಸಿರುವ ಸ್ಥಿತಿ ಕುರಿತು ಮೇಲ್ಮನೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಿ ಈ ವಿಷಯನ್ನು ಸರ್ಕಾರವೂ, ತಜ್ಞರು ಪರಿಶೀಲಿಸುತ್ತಿದ್ದಾರೆಂದರು.