<p><strong>ಇಂದಿರಾ ಸರ್ಕಾರ ಸುಭದ್ರ:ಕೆಂಗಲ್ ವಿವರಣೆ</strong></p>.<p>ಮೈಸೂರು, ಫೆ. 1– ‘ಕೇಂದ್ರದಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ಸರ್ಕಾರವನ್ನು ಉರುಳಿಸಲು ವಿರೋಧ ಗುಂಪುಗಳವರಿಗೆ ಸಾಕಷ್ಟು ಸಂಖ್ಯೆಯ ಸಂಸತ್ ಸದಸ್ಯರ ಬೆಂಬಲವಿಲ್ಲ. ಆದುದರಿಂದ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದರಲ್ಲಿ ಸಂದೇಹವಿಲ್ಲ’ ಎಂದು ಶ್ರೀ ಕೆ.ಹನುಮಂತಯ್ಯ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಪತ್ರಕರ್ತರ ಸಂಘದವರು ಏರ್ಪಡಿಸಿದ್ದ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಹನುಮಂತಯ್ಯನವರು ಬರಲಿರುವ ಪಾರ್ಲಿಮೆಂಟ್ ಅಧಿವೇಶನ ಪ್ರಮುಖವಾದುದೆಂದರು.</p>.<p>ಹಿಂದೆಂದಿಗಿಂತ ಉತ್ತಮ ರೀತಿಯಲ್ಲಿ ಸಂಘಟಿತರಾಗಿರುವ ವಿರೋಧ ಗುಂಪುಗಳವರನ್ನು ಸರ್ಕಾರ ಎದುರಿಸಬೇಕಾಗುವುದುದೆಂದು ತಿಳಿಸಿದ ಶ್ರೀಯುತರು, ಸದಸ್ಯರ ಸಂಖ್ಯಾಬಲ ಮಾತ್ರದಿಂದಲೇ ಅಲ್ಲದೆ ಪಾರ್ಲಿಮೆಂಟಿನಲ್ಲಿ ಮಂತ್ರಿಗಳ ಶ್ರೇಷ್ಠ ದರ್ಜೆಯ ಕಾರ್ಯನಿರ್ವಹಣೆಯ ಮೂಲಕ ಇಂದಿರಾಗಾಂಧಿ ಅವರು ವಿರೋಧಿ<br />ಗಳನ್ನು ಎದುರಿಸಬೇಕೆಂದರು.</p>.<p><strong>10ರೊಳಗೆ ಚಂಡೀಗಡ ನಿರ್ಧಾರ ತಿರಸ್ಕರಿಸಲು ಜನಸಂಘದ ಒತ್ತಾಯ</strong></p>.<p>ಚಂಡೀಗಡ, ಫೆ. 1– ಪಂಜಾಬಿನ ಅಧಿಕಾರಾರೂಢ ಪಕ್ಷಗಳಾದ ಅಕಾಲಿದಳ ಮತ್ತು ಜನಸಂಘದ ನಡುವೆ ತೀವ್ರ ಒಡಕಿನ ಸೂಚನೆಗಳು ಬರುತ್ತಿವೆ. ಚಂಡೀಗಡ ಪ್ರಶ್ನೆ ಕುರಿತ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಇಡಿಯಾಗಿ’ ಫೆಬ್ರುವರಿ 10ರೊಳಗಾಗಿ ತಿರಸ್ಕರಿಸುವಂತೆ ಜನಸಂಘವು ಪಂಜಾಬ್ ಸರ್ಕಾರಕ್ಕೆ ಕೊನೆಯೆಚ್ಚರಿಕೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದಿರಾ ಸರ್ಕಾರ ಸುಭದ್ರ:ಕೆಂಗಲ್ ವಿವರಣೆ</strong></p>.<p>ಮೈಸೂರು, ಫೆ. 1– ‘ಕೇಂದ್ರದಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ಸರ್ಕಾರವನ್ನು ಉರುಳಿಸಲು ವಿರೋಧ ಗುಂಪುಗಳವರಿಗೆ ಸಾಕಷ್ಟು ಸಂಖ್ಯೆಯ ಸಂಸತ್ ಸದಸ್ಯರ ಬೆಂಬಲವಿಲ್ಲ. ಆದುದರಿಂದ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದರಲ್ಲಿ ಸಂದೇಹವಿಲ್ಲ’ ಎಂದು ಶ್ರೀ ಕೆ.ಹನುಮಂತಯ್ಯ ಅವರು ಇಂದು ಇಲ್ಲಿ ತಿಳಿಸಿದರು.</p>.<p>ಪತ್ರಕರ್ತರ ಸಂಘದವರು ಏರ್ಪಡಿಸಿದ್ದ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಹನುಮಂತಯ್ಯನವರು ಬರಲಿರುವ ಪಾರ್ಲಿಮೆಂಟ್ ಅಧಿವೇಶನ ಪ್ರಮುಖವಾದುದೆಂದರು.</p>.<p>ಹಿಂದೆಂದಿಗಿಂತ ಉತ್ತಮ ರೀತಿಯಲ್ಲಿ ಸಂಘಟಿತರಾಗಿರುವ ವಿರೋಧ ಗುಂಪುಗಳವರನ್ನು ಸರ್ಕಾರ ಎದುರಿಸಬೇಕಾಗುವುದುದೆಂದು ತಿಳಿಸಿದ ಶ್ರೀಯುತರು, ಸದಸ್ಯರ ಸಂಖ್ಯಾಬಲ ಮಾತ್ರದಿಂದಲೇ ಅಲ್ಲದೆ ಪಾರ್ಲಿಮೆಂಟಿನಲ್ಲಿ ಮಂತ್ರಿಗಳ ಶ್ರೇಷ್ಠ ದರ್ಜೆಯ ಕಾರ್ಯನಿರ್ವಹಣೆಯ ಮೂಲಕ ಇಂದಿರಾಗಾಂಧಿ ಅವರು ವಿರೋಧಿ<br />ಗಳನ್ನು ಎದುರಿಸಬೇಕೆಂದರು.</p>.<p><strong>10ರೊಳಗೆ ಚಂಡೀಗಡ ನಿರ್ಧಾರ ತಿರಸ್ಕರಿಸಲು ಜನಸಂಘದ ಒತ್ತಾಯ</strong></p>.<p>ಚಂಡೀಗಡ, ಫೆ. 1– ಪಂಜಾಬಿನ ಅಧಿಕಾರಾರೂಢ ಪಕ್ಷಗಳಾದ ಅಕಾಲಿದಳ ಮತ್ತು ಜನಸಂಘದ ನಡುವೆ ತೀವ್ರ ಒಡಕಿನ ಸೂಚನೆಗಳು ಬರುತ್ತಿವೆ. ಚಂಡೀಗಡ ಪ್ರಶ್ನೆ ಕುರಿತ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಇಡಿಯಾಗಿ’ ಫೆಬ್ರುವರಿ 10ರೊಳಗಾಗಿ ತಿರಸ್ಕರಿಸುವಂತೆ ಜನಸಂಘವು ಪಂಜಾಬ್ ಸರ್ಕಾರಕ್ಕೆ ಕೊನೆಯೆಚ್ಚರಿಕೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>