ಗಡಿ ಸಮಸ್ಯೆ ಪರಿಶೀಲಿಸಲು ಸ್ವರಣ್, ಅಹಮದ್ಗೆ ಪ್ರಧಾನಿ ಅವರ ಸೂಚನೆ
ನವದೆಹಲಿ, ಏ. 30– ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಅಧ್ಯಯಿಸಿ, ಅದನ್ನು ಬಗೆಹರಿಸುವ ಸಲಹೆಗಳನ್ನು ಸೂಚಿಸುವಂತೆ ಕೇಂದ್ರ ಗೃಹ ಸಚಿವ ಸಂಪುಟದ ಇಬ್ಬರು ಹಿರಿಯ ಸಚಿವರುಗಳಾದ ರಕ್ಷಣಾ ಮಂತ್ರಿ ಶ್ರೀ ಸ್ವರಣ್ ಸಿಂಗ್ ಮತ್ತು ಕೇಂದ್ರ ಕೈಗಾರಿಕಾಭಿವೃದ್ಧಿ ಸಚಿವ ಶ್ರೀ ಫಕ್ರುದ್ದೀನ್ ಆಲಿ ಅಹಮದ್ ಅವರಿಗೆ ಪ್ರಧಾನಿ ಅವರು ತಿಳಿಸಿದ್ದಾರೆಂದು ತಿಳಿದುಬಂದಿದೆ.