<p><strong>ಜನಸಂಘದ ಬಗ್ಗೆ ನನ್ನ ಒಲವಿದೆ ಎಂಬ ಪ್ರಚಾರ ರಷ್ಯಾ ಪ್ರೇರಿತ: ಎಸ್ಸೆನ್<br />ಹುಬ್ಬಳ್ಳಿ, ಜೂನ್ 11–</strong> ‘ಕಮ್ಯುನಿಸಂ ಮತ್ತು ಕೋಮುವಾದವನ್ನು ನಾನು ವಿರೋಧಿಸುತ್ತೇನೆ. ಜನಸಂಘದ ಬಗ್ಗೆ ನನಗೆ ಒಲವಿದೆ ಎಂಬ ಮಾತು ರಷ್ಯಾ ಮೂಲಗಳಿಂದ ಪ್ರೇರಿತವಾದುದು. ಈ ಅಪವಾದ ಅಪ್ಪಟವಾದ ಸುಳ್ಳು’ ಎಂದು ಭಾರತ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪ್ರಜಾತಂತ್ರ, ಸಮಾಜವಾದ, ಜಾತ್ಯತೀತ ರಾಜ್ಯ ತತ್ವಗಳನ್ನು ಅಂಗೀಕರಿಸಿರುವ ಪಿ.ಎಸ್.ಪಿ., ಎಸ್.ಎಸ್.ಪಿ. ಮುಂತಾದ ಪಕ್ಷಗಳನ್ನು ಗೌರವಿಸುವುದು ಅಗತ್ಯವೆಂದ ಶ್ರೀ ನಿಜಲಿಂಗಪ್ಪನವರು,ಡಿ.ಎಂ.ಕೆ. ಮುಂತಾದ ಪ್ರಾದೇಶಿಕ ಪಕ್ಷಗಳನ್ನು ಪ್ರೋತ್ಸಾಹಿಸುವುದಕ್ಕೆ ತಮ್ಮ ವಿರೋಧವಿದೆ ಎಂದರು.</p>.<p><strong>‘ಕದನವಿರಾಮ ರೇಖೆ ಕಾಶ್ಮೀರದಲ್ಲಿ ಕಾಯಂ ಗಡಿಯಾಗಿ ಉಳಿಯಲಿ’<br />ಶ್ರೀನಗರ, ಜೂನ್ 11– </strong>ಕಾಶ್ಮೀರದಲ್ಲಿನ ಕದನವಿರಾಮ ರೇಖೆಯನ್ನೇ ಕಾಯಂ ಗಡಿಯಾಗಿ ಪರಿವರ್ತಿಸಬೇಕೆಂಬ ಸೂಚನೆಯೊಂದರ ಬಗ್ಗೆ ಇಲ್ಲಿನ ಜನತಾ ಸಮ್ಮೇಳನದಲ್ಲಿ ಭಾಗವಹಿಸಿರುವ ಪ್ರಮುಖ ಕಾಶ್ಮೀರಿ ಪ್ರತಿನಿಧಿಗಳು ಇಂದು ವಿವರಗಳನ್ನು ಸ್ಪಷ್ಟೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನಸಂಘದ ಬಗ್ಗೆ ನನ್ನ ಒಲವಿದೆ ಎಂಬ ಪ್ರಚಾರ ರಷ್ಯಾ ಪ್ರೇರಿತ: ಎಸ್ಸೆನ್<br />ಹುಬ್ಬಳ್ಳಿ, ಜೂನ್ 11–</strong> ‘ಕಮ್ಯುನಿಸಂ ಮತ್ತು ಕೋಮುವಾದವನ್ನು ನಾನು ವಿರೋಧಿಸುತ್ತೇನೆ. ಜನಸಂಘದ ಬಗ್ಗೆ ನನಗೆ ಒಲವಿದೆ ಎಂಬ ಮಾತು ರಷ್ಯಾ ಮೂಲಗಳಿಂದ ಪ್ರೇರಿತವಾದುದು. ಈ ಅಪವಾದ ಅಪ್ಪಟವಾದ ಸುಳ್ಳು’ ಎಂದು ಭಾರತ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪ್ರಜಾತಂತ್ರ, ಸಮಾಜವಾದ, ಜಾತ್ಯತೀತ ರಾಜ್ಯ ತತ್ವಗಳನ್ನು ಅಂಗೀಕರಿಸಿರುವ ಪಿ.ಎಸ್.ಪಿ., ಎಸ್.ಎಸ್.ಪಿ. ಮುಂತಾದ ಪಕ್ಷಗಳನ್ನು ಗೌರವಿಸುವುದು ಅಗತ್ಯವೆಂದ ಶ್ರೀ ನಿಜಲಿಂಗಪ್ಪನವರು,ಡಿ.ಎಂ.ಕೆ. ಮುಂತಾದ ಪ್ರಾದೇಶಿಕ ಪಕ್ಷಗಳನ್ನು ಪ್ರೋತ್ಸಾಹಿಸುವುದಕ್ಕೆ ತಮ್ಮ ವಿರೋಧವಿದೆ ಎಂದರು.</p>.<p><strong>‘ಕದನವಿರಾಮ ರೇಖೆ ಕಾಶ್ಮೀರದಲ್ಲಿ ಕಾಯಂ ಗಡಿಯಾಗಿ ಉಳಿಯಲಿ’<br />ಶ್ರೀನಗರ, ಜೂನ್ 11– </strong>ಕಾಶ್ಮೀರದಲ್ಲಿನ ಕದನವಿರಾಮ ರೇಖೆಯನ್ನೇ ಕಾಯಂ ಗಡಿಯಾಗಿ ಪರಿವರ್ತಿಸಬೇಕೆಂಬ ಸೂಚನೆಯೊಂದರ ಬಗ್ಗೆ ಇಲ್ಲಿನ ಜನತಾ ಸಮ್ಮೇಳನದಲ್ಲಿ ಭಾಗವಹಿಸಿರುವ ಪ್ರಮುಖ ಕಾಶ್ಮೀರಿ ಪ್ರತಿನಿಧಿಗಳು ಇಂದು ವಿವರಗಳನ್ನು ಸ್ಪಷ್ಟೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>