<p><strong>ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ವಿಸ್ತರಣೆ ಸಾಧ್ಯತೆ<br />ಬೆಂಗಳೂರು, ಜುಲೈ 2–</strong> ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರ ಮೂರು ವಾರಗಳ ಕಾಲದ ಜಪಾನ್ ಪ್ರವಾಸದ ಫಲವಾಗಿ ರಾಜ್ಯದಲ್ಲಿ ಮೂರು ದೊಡ್ಡ ಪ್ರಮಾಣದ ಹಾಗೂ ಮೂರು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನಾನಾ ರೀತಿಯ ವಿದೇಶಿ ನೆರವು ದೊರೆತು ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.</p>.<p>ಜಪಾನಿಗೆ ಬೀಡು ಕಬ್ಬಿಣದ ರಫ್ತಿನ ಬಗ್ಗೆ ತಾವು ನಡೆಸಿದ ಮಾತುಕತೆಗಳ ವಿವರಗಳನ್ನು ಮುಖ್ಯಮಂತ್ರಿ ‘ಮುಂದಿನ ಕ್ರಮ’ಕ್ಕಾಗಿ ಪ್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಇನ್ನೊಂದು ವಾರದಲ್ಲಿ ಕಳುಹಿಸಿ ಕೊಡಲಿದ್ದಾರೆ.</p>.<p>ಜಪಾನಿನ ಕೈಗಾರಿಕೆ ಸಂಸ್ಥೆಗಳೊಡನೆ ಈಗಿರುವ ಸಹಾಯ ಒಪ್ಪಂದಗಳನ್ನು ಭದ್ರಪಡಿಸುವುದು, ಈಗಿರುವ ಒಪ್ಪಂದಗಳ ವಿಸ್ತರಣೆ ಸಾಧ್ಯತೆಯ ಪರಿಶೀಲನೆ, ರಾಜ್ಯದ ಅಗತ್ಯಗಳಿಗೆ ಅನುಗುಣವಾದ ಹೊಸ ವ್ಯವಸ್ಥೆ ಬಗ್ಗೆ ಮಾತುಕತೆ ನಡೆಸುವುದು ಮುಖ್ಯಮಂತ್ರಿ ಅವರ ಜಪಾನ್ ಭೇಟಿಯ ಉದ್ದೇಶವಾಗಿತ್ತು.</p>.<p><strong>ಕೆಂಗಲ್ರಿಗೆ ಮುಖ್ಯಮಂತ್ರಿ ಅಭಿನಂದನೆ<br />ಬೆಂಗಳೂರು, ಜುಲೈ 2– </strong>ಇಂದು ಜಪಾನ್ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು, ಕೇಂದ್ರದ ಸಚಿವರಾಗಿ ನೇಮಕವಾಗಿರುವ ಶ್ರೀ ಹನುಮಂತಯ್ಯ ಅವರಿಗೆ ಅಭಿನಂದನೆಗಳನ್ನು ಕಳುಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ವಿಸ್ತರಣೆ ಸಾಧ್ಯತೆ<br />ಬೆಂಗಳೂರು, ಜುಲೈ 2–</strong> ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರ ಮೂರು ವಾರಗಳ ಕಾಲದ ಜಪಾನ್ ಪ್ರವಾಸದ ಫಲವಾಗಿ ರಾಜ್ಯದಲ್ಲಿ ಮೂರು ದೊಡ್ಡ ಪ್ರಮಾಣದ ಹಾಗೂ ಮೂರು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನಾನಾ ರೀತಿಯ ವಿದೇಶಿ ನೆರವು ದೊರೆತು ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.</p>.<p>ಜಪಾನಿಗೆ ಬೀಡು ಕಬ್ಬಿಣದ ರಫ್ತಿನ ಬಗ್ಗೆ ತಾವು ನಡೆಸಿದ ಮಾತುಕತೆಗಳ ವಿವರಗಳನ್ನು ಮುಖ್ಯಮಂತ್ರಿ ‘ಮುಂದಿನ ಕ್ರಮ’ಕ್ಕಾಗಿ ಪ್ರಧಾನಿ ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಇನ್ನೊಂದು ವಾರದಲ್ಲಿ ಕಳುಹಿಸಿ ಕೊಡಲಿದ್ದಾರೆ.</p>.<p>ಜಪಾನಿನ ಕೈಗಾರಿಕೆ ಸಂಸ್ಥೆಗಳೊಡನೆ ಈಗಿರುವ ಸಹಾಯ ಒಪ್ಪಂದಗಳನ್ನು ಭದ್ರಪಡಿಸುವುದು, ಈಗಿರುವ ಒಪ್ಪಂದಗಳ ವಿಸ್ತರಣೆ ಸಾಧ್ಯತೆಯ ಪರಿಶೀಲನೆ, ರಾಜ್ಯದ ಅಗತ್ಯಗಳಿಗೆ ಅನುಗುಣವಾದ ಹೊಸ ವ್ಯವಸ್ಥೆ ಬಗ್ಗೆ ಮಾತುಕತೆ ನಡೆಸುವುದು ಮುಖ್ಯಮಂತ್ರಿ ಅವರ ಜಪಾನ್ ಭೇಟಿಯ ಉದ್ದೇಶವಾಗಿತ್ತು.</p>.<p><strong>ಕೆಂಗಲ್ರಿಗೆ ಮುಖ್ಯಮಂತ್ರಿ ಅಭಿನಂದನೆ<br />ಬೆಂಗಳೂರು, ಜುಲೈ 2– </strong>ಇಂದು ಜಪಾನ್ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು, ಕೇಂದ್ರದ ಸಚಿವರಾಗಿ ನೇಮಕವಾಗಿರುವ ಶ್ರೀ ಹನುಮಂತಯ್ಯ ಅವರಿಗೆ ಅಭಿನಂದನೆಗಳನ್ನು ಕಳುಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>