<p><strong>ಬ್ರಿಟಿಷರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ಭಾರತದ ನಿರ್ಧಾರ<br />ನವದೆಹಲಿ, ಜುಲೈ 13–</strong> ಭಾರತಕ್ಕೆ ಬ್ರಿಟಿಷ್ ರಾಷ್ಟ್ರೀಯರು ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಲು ಕೇಂದ್ರ ಸಂಪುಟದ ಆಂತರಿಕ ವ್ಯವಹಾರ ಸಮಿತಿ ಇಂದು ನಿರ್ಧರಿಸಿತು. ಭಾರತೀಯರು ಬ್ರಿಟನ್ನಿಗೆ ಪ್ರವೇಶಿಸುವುದರ ಮೇಲೆ ಬ್ರಿಟನ್ ನಿರ್ಬಂಧಗಳನ್ನು ವಿಧಿಸಿರುವುದರಿಂದ ಭಾರತ ಈ ಪ್ರತಿಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಿತು.</p>.<p>ಬ್ರಿಟನ್ನಿಗೆ ತೆರಳುವ ವಿಶ್ವಾಸಯೋಗ್ಯ ಪ್ರಯಾಣಿಕರಿಗೂ ಅನಗತ್ಯವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಭಾರತ ಬಹು ಕಾಲದಿಂದಲೂ ಕಳವಳಗೊಂಡಿತ್ತು. ಬ್ರಿಟನ್ನಿಗೆ ಭೇಟಿ ಕೊಡುವ ಭಾರತೀಯರ ಬಗ್ಗೆ ತೋರಲಾಗುತ್ತಿರುವ ಈ ಪಕ್ಷಪಾತವನ್ನು ಕೊನೆಗೊಳಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಭಾರತ ಅನೇಕ ಬಾರಿ ಮನವಿ ಮಾಡಿಕೊಂಡಿತ್ತು. ಆದರೆ ಬ್ರಿಟಿಷ್ ಸರ್ಕಾರ ಈ ಮನವಿಗಳಿಗೆ ಓಗೊಡಲಿಲ್ಲ.</p>.<p><strong>ನವೀನ ರೀತಿಯ ಟಾರ್ಚ್: ಎಲ್ಆರ್ಡಿಇ ಸಾಧನೆ<br />ಬೆಂಗಳೂರು, ಜುಲೈ 13– </strong>ಪದೇಪದೇ ಬ್ಯಾಟರಿ ಷೆಲ್ಲುಗಳನ್ನು ಬದಲಾಯಿಸುವ ತಾಪತ್ರಯವಿಲ್ಲದ ಟಾರ್ಚನ್ನು ನಗರದಲ್ಲಿರುವ ಎಲ್ಆರ್ಡಿಇಸಂಸ್ಥೆಯು ಭಾರತದಲ್ಲಿಯೇ ಪ್ರಥಮವಾಗಿ ತಯಾರಿಸಿದೆ. ಇದಕ್ಕೆ ಉಪಯೋಗವಾಗಿರುವ ವಸ್ತುಗಳು ನೂರಕ್ಕೆ ನೂರರಷ್ಟು ಸ್ವದೇಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಿಟಿಷರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ಭಾರತದ ನಿರ್ಧಾರ<br />ನವದೆಹಲಿ, ಜುಲೈ 13–</strong> ಭಾರತಕ್ಕೆ ಬ್ರಿಟಿಷ್ ರಾಷ್ಟ್ರೀಯರು ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಲು ಕೇಂದ್ರ ಸಂಪುಟದ ಆಂತರಿಕ ವ್ಯವಹಾರ ಸಮಿತಿ ಇಂದು ನಿರ್ಧರಿಸಿತು. ಭಾರತೀಯರು ಬ್ರಿಟನ್ನಿಗೆ ಪ್ರವೇಶಿಸುವುದರ ಮೇಲೆ ಬ್ರಿಟನ್ ನಿರ್ಬಂಧಗಳನ್ನು ವಿಧಿಸಿರುವುದರಿಂದ ಭಾರತ ಈ ಪ್ರತಿಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಿತು.</p>.<p>ಬ್ರಿಟನ್ನಿಗೆ ತೆರಳುವ ವಿಶ್ವಾಸಯೋಗ್ಯ ಪ್ರಯಾಣಿಕರಿಗೂ ಅನಗತ್ಯವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಭಾರತ ಬಹು ಕಾಲದಿಂದಲೂ ಕಳವಳಗೊಂಡಿತ್ತು. ಬ್ರಿಟನ್ನಿಗೆ ಭೇಟಿ ಕೊಡುವ ಭಾರತೀಯರ ಬಗ್ಗೆ ತೋರಲಾಗುತ್ತಿರುವ ಈ ಪಕ್ಷಪಾತವನ್ನು ಕೊನೆಗೊಳಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಭಾರತ ಅನೇಕ ಬಾರಿ ಮನವಿ ಮಾಡಿಕೊಂಡಿತ್ತು. ಆದರೆ ಬ್ರಿಟಿಷ್ ಸರ್ಕಾರ ಈ ಮನವಿಗಳಿಗೆ ಓಗೊಡಲಿಲ್ಲ.</p>.<p><strong>ನವೀನ ರೀತಿಯ ಟಾರ್ಚ್: ಎಲ್ಆರ್ಡಿಇ ಸಾಧನೆ<br />ಬೆಂಗಳೂರು, ಜುಲೈ 13– </strong>ಪದೇಪದೇ ಬ್ಯಾಟರಿ ಷೆಲ್ಲುಗಳನ್ನು ಬದಲಾಯಿಸುವ ತಾಪತ್ರಯವಿಲ್ಲದ ಟಾರ್ಚನ್ನು ನಗರದಲ್ಲಿರುವ ಎಲ್ಆರ್ಡಿಇಸಂಸ್ಥೆಯು ಭಾರತದಲ್ಲಿಯೇ ಪ್ರಥಮವಾಗಿ ತಯಾರಿಸಿದೆ. ಇದಕ್ಕೆ ಉಪಯೋಗವಾಗಿರುವ ವಸ್ತುಗಳು ನೂರಕ್ಕೆ ನೂರರಷ್ಟು ಸ್ವದೇಶಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>