ಚಳ್ಳಕೆರೆ ಬಳಿ ಭಾರಿ ಕುರಿ ಅಭಿವೃದ್ಧಿ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ ಬೆಂಗಳೂರು, ಆ. 20– ಚಳ್ಳಕೆರೆ ತಾಲ್ಲೂಕಿನ ಒರವು–ಕುದಾಪುರ ಪ್ರದೇಶದಲ್ಲಿ ಕುರಿ ತಳಿ ಅಭಿವೃದ್ಧಿಯ ಬೃಹತ್ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅಂತಿಮ ಒಪ್ಪಿಗೆ ನೀಡಿದೆ.
ಈ ವಿಷಯವನ್ನು ಇಂದು ವರಿದಿಗಾರರಿಗೆ ತಿಳಿಸಿದ ಪಶುಸಂಗೋಪನಾ ಸ್ಟೇಟ್ ಸಚಿವ ಜಿ.ಬಿ. ಶಂಕರರಾವ್ರವರು 28 ಲಕ್ಷ 70 ಸಾವಿರ ರೂ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ 9,791 ಎಕರೆ ಜಮೀನನ್ನು ಬಿಡುಗಡೆ ಮಾಡಿದೆಯೆಂದು ತಿಳಿಸಿದರು.
ಕೇಂದ್ರ ಸರ್ಕಾರವು ಇಂತಹ ಕ್ಷೇತ್ರಗಳನ್ನು ಏಳು ರಾಜ್ಯಗಳಲ್ಲಿ ಸ್ಥಾಪಿಸಲಿದೆ.
ಸನ್ಯಾಲ್ ಬಂಧನಕ್ಕೆ ನಕ್ಸಲೀಯರ ಕೋಪ: ಟ್ರ್ಯಾಮ್, ಬಸ್ಗಳಿಗೆ ಅಗ್ನಿಸ್ಪರ್ಶ ಕಲ್ಕತ್ತ, ಆ. 20– ಮಧ್ಯ ಕಲ್ಕತ್ತಾದಲ್ಲಿ ನಕ್ಸಲೀಯರು ಇಂದು ಬೆಳಿಗ್ಗೆ ಟ್ರ್ಯಾಮ್ ಒಂದಕ್ಕೆ ಬೆಂಕಿ ಹಾಕಿದರು.
ನಕ್ಸಲೀಯ ನಾಯಕ ಕಾನು ಸನ್ಯಾಲ್ರನ್ನು ನಿನ್ನೆ ಸಿಲಿಗುರಿಯಲ್ಲಿ ಬಂಧಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಈ ಘಟನೆಗಳು ಜರುಗಿದುವೆಂದು ನಂಬಲಾಗಿದೆ. ಶಾಂಪುಕುರ್ ಪ್ರದೇಶದಲ್ಲಿ 2 ಮಹಡಿ ಬಸ್ಗಳಿಗೆ ನಕ್ಸಲೀಯರು ಬೆಂಕಿ ಹಚ್ಚಿ ಜಖಂಗೊಳಿಸಿದರು.