<p><strong>ಚಳ್ಳಕೆರೆ ಬಳಿ ಭಾರಿ ಕುರಿ ಅಭಿವೃದ್ಧಿ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ<br />ಬೆಂಗಳೂರು, ಆ. 20– </strong>ಚಳ್ಳಕೆರೆ ತಾಲ್ಲೂಕಿನ ಒರವು–ಕುದಾಪುರ ಪ್ರದೇಶದಲ್ಲಿ ಕುರಿ ತಳಿ ಅಭಿವೃದ್ಧಿಯ ಬೃಹತ್ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅಂತಿಮ ಒಪ್ಪಿಗೆ ನೀಡಿದೆ.</p>.<p>ಈ ವಿಷಯವನ್ನು ಇಂದು ವರಿದಿಗಾರರಿಗೆ ತಿಳಿಸಿದ ಪಶುಸಂಗೋಪನಾ ಸ್ಟೇಟ್ ಸಚಿವ ಜಿ.ಬಿ. ಶಂಕರರಾವ್ರವರು 28 ಲಕ್ಷ 70 ಸಾವಿರ ರೂ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ 9,791 ಎಕರೆ ಜಮೀನನ್ನು ಬಿಡುಗಡೆ ಮಾಡಿದೆಯೆಂದು ತಿಳಿಸಿದರು.</p>.<p>ಕೇಂದ್ರ ಸರ್ಕಾರವು ಇಂತಹ ಕ್ಷೇತ್ರಗಳನ್ನು ಏಳು ರಾಜ್ಯಗಳಲ್ಲಿ ಸ್ಥಾಪಿಸಲಿದೆ.</p>.<p><strong>ಸನ್ಯಾಲ್ ಬಂಧನಕ್ಕೆ ನಕ್ಸಲೀಯರ ಕೋಪ: ಟ್ರ್ಯಾಮ್, ಬಸ್ಗಳಿಗೆ ಅಗ್ನಿಸ್ಪರ್ಶ<br />ಕಲ್ಕತ್ತ, ಆ. 20–</strong> ಮಧ್ಯ ಕಲ್ಕತ್ತಾದಲ್ಲಿ ನಕ್ಸಲೀಯರು ಇಂದು ಬೆಳಿಗ್ಗೆ ಟ್ರ್ಯಾಮ್ ಒಂದಕ್ಕೆ ಬೆಂಕಿ ಹಾಕಿದರು.</p>.<p>ನಕ್ಸಲೀಯ ನಾಯಕ ಕಾನು ಸನ್ಯಾಲ್ರನ್ನು ನಿನ್ನೆ ಸಿಲಿಗುರಿಯಲ್ಲಿ ಬಂಧಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಈ ಘಟನೆಗಳು ಜರುಗಿದುವೆಂದು ನಂಬಲಾಗಿದೆ. ಶಾಂಪುಕುರ್ ಪ್ರದೇಶದಲ್ಲಿ 2 ಮಹಡಿ ಬಸ್ಗಳಿಗೆ ನಕ್ಸಲೀಯರು ಬೆಂಕಿ ಹಚ್ಚಿ ಜಖಂಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ ಬಳಿ ಭಾರಿ ಕುರಿ ಅಭಿವೃದ್ಧಿ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ<br />ಬೆಂಗಳೂರು, ಆ. 20– </strong>ಚಳ್ಳಕೆರೆ ತಾಲ್ಲೂಕಿನ ಒರವು–ಕುದಾಪುರ ಪ್ರದೇಶದಲ್ಲಿ ಕುರಿ ತಳಿ ಅಭಿವೃದ್ಧಿಯ ಬೃಹತ್ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅಂತಿಮ ಒಪ್ಪಿಗೆ ನೀಡಿದೆ.</p>.<p>ಈ ವಿಷಯವನ್ನು ಇಂದು ವರಿದಿಗಾರರಿಗೆ ತಿಳಿಸಿದ ಪಶುಸಂಗೋಪನಾ ಸ್ಟೇಟ್ ಸಚಿವ ಜಿ.ಬಿ. ಶಂಕರರಾವ್ರವರು 28 ಲಕ್ಷ 70 ಸಾವಿರ ರೂ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ 9,791 ಎಕರೆ ಜಮೀನನ್ನು ಬಿಡುಗಡೆ ಮಾಡಿದೆಯೆಂದು ತಿಳಿಸಿದರು.</p>.<p>ಕೇಂದ್ರ ಸರ್ಕಾರವು ಇಂತಹ ಕ್ಷೇತ್ರಗಳನ್ನು ಏಳು ರಾಜ್ಯಗಳಲ್ಲಿ ಸ್ಥಾಪಿಸಲಿದೆ.</p>.<p><strong>ಸನ್ಯಾಲ್ ಬಂಧನಕ್ಕೆ ನಕ್ಸಲೀಯರ ಕೋಪ: ಟ್ರ್ಯಾಮ್, ಬಸ್ಗಳಿಗೆ ಅಗ್ನಿಸ್ಪರ್ಶ<br />ಕಲ್ಕತ್ತ, ಆ. 20–</strong> ಮಧ್ಯ ಕಲ್ಕತ್ತಾದಲ್ಲಿ ನಕ್ಸಲೀಯರು ಇಂದು ಬೆಳಿಗ್ಗೆ ಟ್ರ್ಯಾಮ್ ಒಂದಕ್ಕೆ ಬೆಂಕಿ ಹಾಕಿದರು.</p>.<p>ನಕ್ಸಲೀಯ ನಾಯಕ ಕಾನು ಸನ್ಯಾಲ್ರನ್ನು ನಿನ್ನೆ ಸಿಲಿಗುರಿಯಲ್ಲಿ ಬಂಧಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಈ ಘಟನೆಗಳು ಜರುಗಿದುವೆಂದು ನಂಬಲಾಗಿದೆ. ಶಾಂಪುಕುರ್ ಪ್ರದೇಶದಲ್ಲಿ 2 ಮಹಡಿ ಬಸ್ಗಳಿಗೆ ನಕ್ಸಲೀಯರು ಬೆಂಕಿ ಹಚ್ಚಿ ಜಖಂಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>