ಧಾರವಾಡ, ಬಿದರೆ ಜಿಲ್ಲೆಗಳ ಆದ್ಯಂತ ವ್ಯವಹಾರ ಬಂದ್
ಧಾರವಾಡ/ ಬಿದರೆ, ಮಾರ್ಚ್ 13– ಮೈಸೂರು– ಮಹಾರಾಷ್ಟ್ರ ಗಡಿಪ್ರಶ್ನೆ ಕುರಿತು ಪ್ರಧಾನಮಂತ್ರಿ ಸೂಚಿಸಿರುವ ಇತ್ತೀಚಿನ ಸಲಹೆಗಳಿಗೆ ಪ್ರತಿಭಟನೆ ವ್ಯಕ್ತಪಡಿಸಲು ಇಡೀ ಧಾರಾವಾಡ ಜಿಲ್ಲೆ ಹಾಗೂ ಬಿದರೆ ಜಿಲ್ಲೆಗಳು ಇಂದು ಆಚರಿಸಿದ ಬಂದ್ ಸಂಪೂರ್ಣ ಯಶಸ್ವಿ ಆಗಿತ್ತು. ಎರಡೂ ಜಿಲ್ಲೆಗಳ ಎಲ್ಲ ಪಟ್ಟಣಗಳಲ್ಲೂ ಎಲ್ಲ ವ್ಯವಹಾರವೂ ಸ್ಥಗಿತ ಆಗಿತ್ತು.