<p><strong>‘ಗುಪ್ತ ಉದ್ದೇಶದಿಂದ ಗಡಿ ವಿವಾದ ಪ್ರಚೋದನೆ’</strong></p>.<p>ದಾಂಡೇಲಿ, ಮೇ 9– ಮೈಸೂರು ಮಹಾರಾಷ್ಟ್ರ ಗಡಿ ವಿವಾದದಂತಹ ಗತಕಾಲದ ಪ್ರಶ್ನೆಗಳನ್ನು ಪ್ರಧಾನಿ ಇಂದಿರಾಗಾಂಧಿಯವರು ಗುಪ್ತ ಉದ್ದೇಶಗಳಿಂದ ಪ್ರಚೋದಿಸುತ್ತಿರುವರೆಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ.ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿ ಆಪಾದಿಸಿದರು.</p>.<p>ಮಹಾಜನ್ ಆಯೋಗದ ನೇಮಕವನ್ನು ತಾವು ವಿರೋಧಿಸಿದರೆಂದೂ ಆದರೆ ಅದನ್ನು ಒಪ್ಪಲು ಕೇಂದ್ರ ಒತ್ತಾಯ ಮಾಡಿತೆಂದೂ ಹೇಳಿದ ಶ್ರೀ ನಿಜಲಿಂಗಪ್ಪನವರು ಮಹಾರಾಷ್ಟ್ರ ಮುಖ್ಯಮಂತ್ರಿಯು ಒಳಗೊಂಡ ಆಗ ಅಧಿಕಾರದಲ್ಲಿದ್ದವರಿಗೆಲ್ಲ ಆಯೋಗದ ಶಿಫಾರಸುಗಳು ಅಖೈರೆಂದು ಸ್ಪಷ್ಟಪಡಿಸಲಾಗಿತ್ತೆಂದು ಹೇಳಿದರು.</p>.<p>ಅವರು ಉತ್ತರ ಕನ್ನಡ ಜಿಲ್ಲಾ ರಾಜಕೀಯ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದರು. ರಾಷ್ಟ್ರದಲ್ಲಿ ಪ್ರಜಾಸತ್ತೆಯನ್ನು ಉಳಿಸಲು ಜನತೆಯ ಜಾಗೃತಿಗೆ ಅವರು ಕರೆ ಇತ್ತರು. ಮೈಸೂರು ಪ್ರದೇಶ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ. ನಾಗಪ್ಪ ಆಳ್ವ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಗುಪ್ತ ಉದ್ದೇಶದಿಂದ ಗಡಿ ವಿವಾದ ಪ್ರಚೋದನೆ’</strong></p>.<p>ದಾಂಡೇಲಿ, ಮೇ 9– ಮೈಸೂರು ಮಹಾರಾಷ್ಟ್ರ ಗಡಿ ವಿವಾದದಂತಹ ಗತಕಾಲದ ಪ್ರಶ್ನೆಗಳನ್ನು ಪ್ರಧಾನಿ ಇಂದಿರಾಗಾಂಧಿಯವರು ಗುಪ್ತ ಉದ್ದೇಶಗಳಿಂದ ಪ್ರಚೋದಿಸುತ್ತಿರುವರೆಂದು ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ.ಎಸ್.ನಿಜಲಿಂಗಪ್ಪನವರು ಇಂದು ಇಲ್ಲಿ ಆಪಾದಿಸಿದರು.</p>.<p>ಮಹಾಜನ್ ಆಯೋಗದ ನೇಮಕವನ್ನು ತಾವು ವಿರೋಧಿಸಿದರೆಂದೂ ಆದರೆ ಅದನ್ನು ಒಪ್ಪಲು ಕೇಂದ್ರ ಒತ್ತಾಯ ಮಾಡಿತೆಂದೂ ಹೇಳಿದ ಶ್ರೀ ನಿಜಲಿಂಗಪ್ಪನವರು ಮಹಾರಾಷ್ಟ್ರ ಮುಖ್ಯಮಂತ್ರಿಯು ಒಳಗೊಂಡ ಆಗ ಅಧಿಕಾರದಲ್ಲಿದ್ದವರಿಗೆಲ್ಲ ಆಯೋಗದ ಶಿಫಾರಸುಗಳು ಅಖೈರೆಂದು ಸ್ಪಷ್ಟಪಡಿಸಲಾಗಿತ್ತೆಂದು ಹೇಳಿದರು.</p>.<p>ಅವರು ಉತ್ತರ ಕನ್ನಡ ಜಿಲ್ಲಾ ರಾಜಕೀಯ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದರು. ರಾಷ್ಟ್ರದಲ್ಲಿ ಪ್ರಜಾಸತ್ತೆಯನ್ನು ಉಳಿಸಲು ಜನತೆಯ ಜಾಗೃತಿಗೆ ಅವರು ಕರೆ ಇತ್ತರು. ಮೈಸೂರು ಪ್ರದೇಶ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ. ನಾಗಪ್ಪ ಆಳ್ವ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>