<p><strong>ಗಿರಿ ಆಯ್ಕೆ ಕ್ರಮಬದ್ಧ: ಸುಪ್ರೀಂ ಕೋರ್ಟ್ ತೀರ್ಪು</strong></p>.<p><strong>ನವದೆಹಲಿ, ಮೇ 11– </strong>ರಾಷ್ಟ್ರಪತಿಯಾಗಿ ಶ್ರೀ ವಿ.ವಿ.ಗಿರಿ ಅವರ ಆಯ್ಕೆ ಕ್ರಮಬದ್ಧವಾಗಿದೆಯೆಂದು ಸುಪ್ರೀಂ ಕೋರ್ಟ್ ಇಂದು ಘೋಷಿಸಿತು.</p>.<p>ಶ್ರೀ ಗಿರಿಯವರ ಚುನಾವಣೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಂಸತ್ ಸದಸ್ಯ ಅಬ್ದುಲ್ ಘನಿ ಧಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು. ಅರ್ಜಿದಾರರು ಶ್ರೀ ಗಿರಿ ಅವರಿಗೆ ಕೋರ್ಟ್ ವೆಚ್ಚವನ್ನು<br />ತೆರಬೇಕಾದ್ದಿಲ್ಲ.</p>.<p><strong>‘ಧೂಮಪಾನ ಅಪಾಯ’</strong></p>.<p><strong>ನವದೆಹಲಿ, ಮೇ 11– </strong>ಧೂಮಪಾನ ಅಪಾಯ ಎಂಬ ಘೋಷಣೆಯನ್ನು ಸಿಗರೇಟ್ ಪ್ಯಾಕೆಟ್ಟುಗಳ ಮೇಲೆ ಜಾಹೀರಾತು ಹಾಕುವಂತೆ<br />ಸಿಗರೇಟು ತಯಾರಕರಿಗೆ ಒತ್ತಾಯ<br />ಪಡಿಸಲಾಗುವುದು.</p>.<p>ಧೂಮಪಾನ ಮಾಡುವುದನ್ನು ನಿರುತ್ಸಾಹಗೊಳಿಸುವುದೇ ಇದರ ಉದ್ದೇಶ.</p>.<p>ಬ್ರಿಟನ್ ಮತ್ತು ಅಮೆರಿಕಗಳಲ್ಲಿನಂತೆ ಈ ಉದ್ದೇಶಕ್ಕಾಗಿ ಶಾಸನವೊಂದನ್ನು ತರುವ ವಿಷಯವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸ್ಟೇಟ್ ಸಚಿವ ಡಾ. ಚಂದ್ರಶೇಖರ್ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ತಾಂಬೂಲ ಚರ್ವಣವು ಬಾಯಿ ಕ್ಯಾನ್ಸರ್ಗೆ ಕಾರಣವೆಂಬುದು ಹತ್ತು ವರ್ಷಗಳ ಸಂಶೋಧನೆ ನಂತರ ಮದರಾಸ್ ಕ್ಯಾನ್ಸರ್ ಸಂಶೋಧನೆ ಸಂಸ್ಥೆ ನಿರ್ಧಾರಕ್ಕೆ ಬಂದಿದೆ ಎಂದೂ ಅವರು ಶ್ರೀ ನಾಥ್ ಪೈ ಅವರಿಗೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಿರಿ ಆಯ್ಕೆ ಕ್ರಮಬದ್ಧ: ಸುಪ್ರೀಂ ಕೋರ್ಟ್ ತೀರ್ಪು</strong></p>.<p><strong>ನವದೆಹಲಿ, ಮೇ 11– </strong>ರಾಷ್ಟ್ರಪತಿಯಾಗಿ ಶ್ರೀ ವಿ.ವಿ.ಗಿರಿ ಅವರ ಆಯ್ಕೆ ಕ್ರಮಬದ್ಧವಾಗಿದೆಯೆಂದು ಸುಪ್ರೀಂ ಕೋರ್ಟ್ ಇಂದು ಘೋಷಿಸಿತು.</p>.<p>ಶ್ರೀ ಗಿರಿಯವರ ಚುನಾವಣೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಂಸತ್ ಸದಸ್ಯ ಅಬ್ದುಲ್ ಘನಿ ಧಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು. ಅರ್ಜಿದಾರರು ಶ್ರೀ ಗಿರಿ ಅವರಿಗೆ ಕೋರ್ಟ್ ವೆಚ್ಚವನ್ನು<br />ತೆರಬೇಕಾದ್ದಿಲ್ಲ.</p>.<p><strong>‘ಧೂಮಪಾನ ಅಪಾಯ’</strong></p>.<p><strong>ನವದೆಹಲಿ, ಮೇ 11– </strong>ಧೂಮಪಾನ ಅಪಾಯ ಎಂಬ ಘೋಷಣೆಯನ್ನು ಸಿಗರೇಟ್ ಪ್ಯಾಕೆಟ್ಟುಗಳ ಮೇಲೆ ಜಾಹೀರಾತು ಹಾಕುವಂತೆ<br />ಸಿಗರೇಟು ತಯಾರಕರಿಗೆ ಒತ್ತಾಯ<br />ಪಡಿಸಲಾಗುವುದು.</p>.<p>ಧೂಮಪಾನ ಮಾಡುವುದನ್ನು ನಿರುತ್ಸಾಹಗೊಳಿಸುವುದೇ ಇದರ ಉದ್ದೇಶ.</p>.<p>ಬ್ರಿಟನ್ ಮತ್ತು ಅಮೆರಿಕಗಳಲ್ಲಿನಂತೆ ಈ ಉದ್ದೇಶಕ್ಕಾಗಿ ಶಾಸನವೊಂದನ್ನು ತರುವ ವಿಷಯವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸ್ಟೇಟ್ ಸಚಿವ ಡಾ. ಚಂದ್ರಶೇಖರ್ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ತಾಂಬೂಲ ಚರ್ವಣವು ಬಾಯಿ ಕ್ಯಾನ್ಸರ್ಗೆ ಕಾರಣವೆಂಬುದು ಹತ್ತು ವರ್ಷಗಳ ಸಂಶೋಧನೆ ನಂತರ ಮದರಾಸ್ ಕ್ಯಾನ್ಸರ್ ಸಂಶೋಧನೆ ಸಂಸ್ಥೆ ನಿರ್ಧಾರಕ್ಕೆ ಬಂದಿದೆ ಎಂದೂ ಅವರು ಶ್ರೀ ನಾಥ್ ಪೈ ಅವರಿಗೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>