<p><strong>ರಾಜ್ಯದಲ್ಲಿ ಮುಕ್ಕಾಲು ಪಾಲು ಮುಂಗಾರು ಬೆಳೆ ಹಾಳು<br />ಬೆಂಗಳೂರು, ಆ. 12– </strong>ಮಳೆ ಅಭಾವದ ಕಾರಣ ರಾಜ್ಯದಲ್ಲಿ ಶೇಕಡ 75ರಷ್ಟು ಮುಂಗಾರು ಬೆಳೆ ನಷ್ಟವಾಗುವ ಸಂಭವವಿದೆ.</p>.<p>ಈಗಾಗಲೇ ಮಂಜೂರು ಮಾಡಿರುವ ಕಾಮಗಾರಿಗಳನ್ನು ಅಭಾವ ಪ್ರದೇಶಗಳಲ್ಲಿ ತತ್ಕ್ಷಣ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ತೀರ್ಮಾನಿಸಲಾಯಿತು.</p>.<p>ಇಂದು ನಡೆದ ಮಂತ್ರಿಮಂಡಲ ಸಭೆ ರಾಜ್ಯದ ಋತುಮಾನ ಪರಿಸ್ಥಿತಿಯನ್ನು ಅನೌಪಚಾರಿಕವಾಗಿ ಚರ್ಚಿಸಿತು.</p>.<p>ರಾಜ್ಯದ ಋತುಮಾನ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರಬೇಕೆಂದು ಈಗ ದೆಹಲಿಯಲ್ಲಿರುವ ಕಂದಾಯ ಇಲಾಖೆಯ ಕಾರ್ಯದರ್ಶಿ ಶ್ರೀ ಸ್ವಾಮಿನಾಥನ್ ಅವರಿಗೆ ತಿಳಿಸಲಾಗಿದೆಯೆಂದು ಕಂದಾಯ ಸಚಿವ ಶ್ರೀ ಎಚ್.ವಿ. ಕೌಜಲಗಿ ಅವರು ವರದಿಗಾರರಿಗೆ ತಿಳಿಸಿದರು.</p>.<p><strong>ರಾಷ್ಟ್ರದಲ್ಲಿ ಏಕರೂಪ ನೀರು ದರ, ಅಭಿವೃದ್ಧಿ ಕಂದಾಯ ಇರಲಿ: ಸಲಹೆ<br />ಬೆಂಗಳೂರು, ಆ. 12–</strong> ನೀರು ದರ ಮತ್ತು ಅಭಿವೃದ್ಧಿ ಕಂದಾಯ ರಾಷ್ಟ್ರದಾದ್ಯಂತ ಏಕರೂಪದ್ದಾಗಿರಬೇಕೆಂದು ಮೈಸುರು ಸರ್ಕಾರವು ನೀರಾವರಿ ಆಯೋಗಕ್ಕೆ ಸಲಹೆ ಮಾಡಿದೆ.</p>.<p>ಕೇಂದ್ರ ಸರ್ಕಾರ ಶ್ರೀ ಎ.ಪಿ. ಜೈನ್ರವರ ಅಧ್ಯಕ್ಷತೆಯಲ್ಲಿ ರಚಿಸಿರುವ ನೀರಾವರಿ ಆಯೋಗವು ಇಂದು ರಾಜ್ಯದ ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದಲ್ಲಿ ಮುಕ್ಕಾಲು ಪಾಲು ಮುಂಗಾರು ಬೆಳೆ ಹಾಳು<br />ಬೆಂಗಳೂರು, ಆ. 12– </strong>ಮಳೆ ಅಭಾವದ ಕಾರಣ ರಾಜ್ಯದಲ್ಲಿ ಶೇಕಡ 75ರಷ್ಟು ಮುಂಗಾರು ಬೆಳೆ ನಷ್ಟವಾಗುವ ಸಂಭವವಿದೆ.</p>.<p>ಈಗಾಗಲೇ ಮಂಜೂರು ಮಾಡಿರುವ ಕಾಮಗಾರಿಗಳನ್ನು ಅಭಾವ ಪ್ರದೇಶಗಳಲ್ಲಿ ತತ್ಕ್ಷಣ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ತೀರ್ಮಾನಿಸಲಾಯಿತು.</p>.<p>ಇಂದು ನಡೆದ ಮಂತ್ರಿಮಂಡಲ ಸಭೆ ರಾಜ್ಯದ ಋತುಮಾನ ಪರಿಸ್ಥಿತಿಯನ್ನು ಅನೌಪಚಾರಿಕವಾಗಿ ಚರ್ಚಿಸಿತು.</p>.<p>ರಾಜ್ಯದ ಋತುಮಾನ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರಬೇಕೆಂದು ಈಗ ದೆಹಲಿಯಲ್ಲಿರುವ ಕಂದಾಯ ಇಲಾಖೆಯ ಕಾರ್ಯದರ್ಶಿ ಶ್ರೀ ಸ್ವಾಮಿನಾಥನ್ ಅವರಿಗೆ ತಿಳಿಸಲಾಗಿದೆಯೆಂದು ಕಂದಾಯ ಸಚಿವ ಶ್ರೀ ಎಚ್.ವಿ. ಕೌಜಲಗಿ ಅವರು ವರದಿಗಾರರಿಗೆ ತಿಳಿಸಿದರು.</p>.<p><strong>ರಾಷ್ಟ್ರದಲ್ಲಿ ಏಕರೂಪ ನೀರು ದರ, ಅಭಿವೃದ್ಧಿ ಕಂದಾಯ ಇರಲಿ: ಸಲಹೆ<br />ಬೆಂಗಳೂರು, ಆ. 12–</strong> ನೀರು ದರ ಮತ್ತು ಅಭಿವೃದ್ಧಿ ಕಂದಾಯ ರಾಷ್ಟ್ರದಾದ್ಯಂತ ಏಕರೂಪದ್ದಾಗಿರಬೇಕೆಂದು ಮೈಸುರು ಸರ್ಕಾರವು ನೀರಾವರಿ ಆಯೋಗಕ್ಕೆ ಸಲಹೆ ಮಾಡಿದೆ.</p>.<p>ಕೇಂದ್ರ ಸರ್ಕಾರ ಶ್ರೀ ಎ.ಪಿ. ಜೈನ್ರವರ ಅಧ್ಯಕ್ಷತೆಯಲ್ಲಿ ರಚಿಸಿರುವ ನೀರಾವರಿ ಆಯೋಗವು ಇಂದು ರಾಜ್ಯದ ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>