ಮುಖ್ಯಮಂತ್ರಿಗಳು ಸಭೆ ಸೇರಲು ಇದು ಸಕಾಲವಲ್ಲ: ಮೈಸೂರಿನ ನಿಲುವು
ಬೆಂಗಳೂರು, ಆ. 10– ಕಪಿಲಾ ಮತ್ತು ಹೇಮಾವತಿ ಯೋಜನೆಗಳಿಗೆ ಮಂಜೂರಾತಿ ನೀಡುವ ಬಗ್ಗೆ ಅಂತ್ಯ ಮಾತುಕತೆಗಾಗಿ ‘ಸಾಧ್ಯವಾದಷ್ಟು ಬೇಗ’ ಸಂಬಂಧಪಟ್ಟ ಮುಖ್ಯಮಂತ್ರಿಗಳ ಸಭೆ ನಡೆಯಬೇಕೆಂದು ಸಲಹೆ ಮಾಡಿ ಕೇಂದ್ರದ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸ್ಟೇಟ್ ಸಚಿವ ಡಾ. ಕೆ.ಎಲ್.ರಾವ್ರವರು ಇಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಪತ್ರ ಬರೆದಿದ್ದಾರೆ.