ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ | ಗುರುವಾರ, 24-9-1970

Last Updated 24 ಸೆಪ್ಟೆಂಬರ್ 2020, 1:10 IST
ಅಕ್ಷರ ಗಾತ್ರ

ಪ್ರಶಸ್ತಿ ನಿರಾಕರಿಸಿ ಪಂತುಲು ಸ್ಪಷ್ಟನೆ
ಬೆಂಗಳೂರು, ಸೆ. 23–
‘ಶ್ರೀಕೃಷ್ಣ ದೇವರಾಯ’ ಚಿತ್ರದಲ್ಲಿನ ಅಭಿನಯಕ್ಕಾಗಿ ತಮಗೆ ನೀಡಲಾದ ‘ಶ್ರೇಷ್ಠ ನಟ’ ರಾಜ್ಯ ಪ್ರಶಸ್ತಿಯನ್ನು ಶ್ರೀ ಬಿ.ಆರ್‌. ಪಂತುಲು ಅವರು ನಿರಾಕರಿಸಿದ್ದಾರೆ.

ಯಾವುದೇ ರೀತಿಯಲ್ಲಿ ಪರಿಶೀಲನೆ ಮಾಡಿದರೂ ‘ಶ್ರೀಕೃಷ್ಣ ದೇವರಾಯ’ ಚಿತ್ರದಲ್ಲಿನ ಶ್ರೇಷ್ಠ ನಟ ರಾಜ್‌ಕುಮಾರ್‌ ಎಂದು ಶ್ರೀ ಪಂತುಲು ಅವರು, ರಾಜ್ಯ ಸರ್ಕಾರದ ಚಲನಚಿತ್ರ ವಿಭಾಗದ ವಿಶೇಷಾಧಿಕಾರಿಯವರಿಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ.

ಜೋರ್ಡಾನಿನಿಂದ ಸಿರಿಯಾ ಸೇನೆ ವಾಪಸು?
ಟೆಲ್‌ಅವೀವ್‌, ಸೆ. 23–
ಜೋರ್ಡಾನಿನಿಂದ ಸಿರಿಯಾ ಪಡೆಗಳು ಹಿಮ್ಮೆಟ್ಟಲಾರಂಭಿಸಿವೆಯೆಂದು ನಂಬಲರ್ಹ ಮೂಲಗಳು ಇಂದು ವರದಿ ಮಾಡಿವೆ.

ಈ ಮಧ್ಯೆ ಪ್ಯಾಲೆಸ್ಟೀನ್‌ ಗೆರಿಲ್ಲಾಗಳ ದಂಡನಾಯಕ ಯಾಸರ್‌ ಅರಾಫತ್‌ರವರು ಹೇಳಿಕೆಯೊಂದನ್ನು ನೀಡಿ, ಜೋರ್ಡಾನಿನಲ್ಲಿರುವ ಎಲ್ಲ ವಿದೇಶಿಯರ ಸುರಕ್ಷತೆ ಬಗೆಗೆ ವಿಶೇಷ ಜಾಗರೂಕತೆಯಿಂದಿರುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT