<p><strong>ಸಣ್ಣ ಕಾರು: ಉತ್ಪಾದನೆ ಬೆಲೆ ಮಿತಿಮೀರಿದರೆ ಸರ್ಕಾರದ ನೀತಿ ಪುನರ್ ವಿಮರ್ಶೆ</strong></p>.<p>ನವದೆಹಲಿ, ಸೆ. 16– ವಿದೇಶಿ ಸಹಯೋಗದಿಂದ ತಯಾರಿಸಲಾಗುವ ಕಾರಿನ ಬೆಲೆ ಹದಿನೈದು ಸಾವಿರ ರೂ.ಗಳಿಗೂ ಮೀರುವುದಾದರೆ ಕೇಂದ್ರ ಸರ್ಕಾರವು ಸರ್ಕಾರಿ ರಂಗದಲ್ಲಿ ಕಡಿಮೆ ಬೆಲೆಯ ಕಾರನ್ನು ತಯಾರಿಸುವ ನಿರ್ಧಾರವನ್ನು ಪುನರ್ ವಿಮರ್ಶಿಸುವ ಸಂಭವವಿದೆ.</p>.<p>ಉತ್ಪಾದನಾ ಸಾಮರ್ಥ್ಯವನ್ನು 50 ಸಾವಿರದಿಂದ ಒಂದು ಲಕ್ಷಕ್ಕೆ ಏರಿಸುವುದರಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ ಎಂದು ಕಂಡುಬಂದರೆ ಕೇಂದ್ರವು ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಸಂಭವವೂ ಇದೆ ಎಂದು ಅಧಿಕೃತ ವಲಯಗಳು ತಿಳಿಸಿವೆ.</p>.<p><strong>ಜೋರ್ಡಾನ್ನಲ್ಲಿ ಮಿಲಿಟರಿ ಆಡಳಿತ: ಕದನಕ್ಕೆ ಗೆರಿಲ್ಲಾ ಸಜ್ಜು</strong></p>.<p>ಅಮ್ಮಾನ್, ಸೆ. 16– ದೊರೆ ಹುಸೇನ್ರು ಇಂದು ಜೋರ್ಡಾನ್ ಆಡಳಿತವನ್ನು ಮಿಲಿಟರಿ ಸರ್ಕಾರದ ವಶಕ್ಕೆ ಒಪ್ಪಿಸಿ ಮಿಲಿಟರಿ ಶಾಸನ ಜಾರಿಗೆ ತಂದ ಕೂಡಲೇ ಅರಬ್ ಗೆರಿಲ್ಲಾಗಳು ಸರ್ಕಾರದ ಆಜ್ಞೆಯನ್ನು ಅಲಕ್ಷಿಸಿ ಅಮ್ಮಾನ್ನಲ್ಲಿ ಕದನಕ್ಕೆ ಸಜ್ಜಾಗಿ ನಿಂತರು.</p>.<p>ರಾಜಧಾನಿಯಲ್ಲಿ ಅಂಗಡಿ, ಶಾಲೆಗಳು ಮುಚ್ಚಿದ್ದು ಮತ್ತೊಂದು ಸುತ್ತು ಕದನ ನಡೆಯುವಂತಹ ಆಸ್ಫೋಟಕ ಪರಿಸ್ಥಿತಿ ಇದ್ದು, ‘ಮಧ್ಯಪ್ರವೇಶ ಮಾಡಿ, ಸಂಭವನೀಯ ರಕ್ತಪಾತವನ್ನು ತಡೆಗಟ್ಟಿ’ ಎಂದು ಕಮಾಂಡೊಗಳು ಅರಬ್ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಣ್ಣ ಕಾರು: ಉತ್ಪಾದನೆ ಬೆಲೆ ಮಿತಿಮೀರಿದರೆ ಸರ್ಕಾರದ ನೀತಿ ಪುನರ್ ವಿಮರ್ಶೆ</strong></p>.<p>ನವದೆಹಲಿ, ಸೆ. 16– ವಿದೇಶಿ ಸಹಯೋಗದಿಂದ ತಯಾರಿಸಲಾಗುವ ಕಾರಿನ ಬೆಲೆ ಹದಿನೈದು ಸಾವಿರ ರೂ.ಗಳಿಗೂ ಮೀರುವುದಾದರೆ ಕೇಂದ್ರ ಸರ್ಕಾರವು ಸರ್ಕಾರಿ ರಂಗದಲ್ಲಿ ಕಡಿಮೆ ಬೆಲೆಯ ಕಾರನ್ನು ತಯಾರಿಸುವ ನಿರ್ಧಾರವನ್ನು ಪುನರ್ ವಿಮರ್ಶಿಸುವ ಸಂಭವವಿದೆ.</p>.<p>ಉತ್ಪಾದನಾ ಸಾಮರ್ಥ್ಯವನ್ನು 50 ಸಾವಿರದಿಂದ ಒಂದು ಲಕ್ಷಕ್ಕೆ ಏರಿಸುವುದರಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ ಎಂದು ಕಂಡುಬಂದರೆ ಕೇಂದ್ರವು ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಸಂಭವವೂ ಇದೆ ಎಂದು ಅಧಿಕೃತ ವಲಯಗಳು ತಿಳಿಸಿವೆ.</p>.<p><strong>ಜೋರ್ಡಾನ್ನಲ್ಲಿ ಮಿಲಿಟರಿ ಆಡಳಿತ: ಕದನಕ್ಕೆ ಗೆರಿಲ್ಲಾ ಸಜ್ಜು</strong></p>.<p>ಅಮ್ಮಾನ್, ಸೆ. 16– ದೊರೆ ಹುಸೇನ್ರು ಇಂದು ಜೋರ್ಡಾನ್ ಆಡಳಿತವನ್ನು ಮಿಲಿಟರಿ ಸರ್ಕಾರದ ವಶಕ್ಕೆ ಒಪ್ಪಿಸಿ ಮಿಲಿಟರಿ ಶಾಸನ ಜಾರಿಗೆ ತಂದ ಕೂಡಲೇ ಅರಬ್ ಗೆರಿಲ್ಲಾಗಳು ಸರ್ಕಾರದ ಆಜ್ಞೆಯನ್ನು ಅಲಕ್ಷಿಸಿ ಅಮ್ಮಾನ್ನಲ್ಲಿ ಕದನಕ್ಕೆ ಸಜ್ಜಾಗಿ ನಿಂತರು.</p>.<p>ರಾಜಧಾನಿಯಲ್ಲಿ ಅಂಗಡಿ, ಶಾಲೆಗಳು ಮುಚ್ಚಿದ್ದು ಮತ್ತೊಂದು ಸುತ್ತು ಕದನ ನಡೆಯುವಂತಹ ಆಸ್ಫೋಟಕ ಪರಿಸ್ಥಿತಿ ಇದ್ದು, ‘ಮಧ್ಯಪ್ರವೇಶ ಮಾಡಿ, ಸಂಭವನೀಯ ರಕ್ತಪಾತವನ್ನು ತಡೆಗಟ್ಟಿ’ ಎಂದು ಕಮಾಂಡೊಗಳು ಅರಬ್ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>