<p><strong>ಚಂಡೀಗಡ: ಈಗಿನ ನಿರ್ಧಾರ ಅಂತಿಮವಲ್ಲ ಎಂದು ಬನ್ಸಿಲಾಲ್</strong></p>.<p><strong>ಚಂಡೀಗಡ, ಫೆ. 2–</strong> ಹರಿಯಾಣದ ಮಟ್ಟಿಗೆ ಹೇಳುವುದಾದರೆ, ಚಂಡೀಗಡ ಇನ್ನೂ ತೆರೆದ ಪ್ರಶ್ನೆಯೇ ಎಂದು ಹರಿಯಾಣ ಮುಖ್ಯಮಂತ್ರಿ ಬನ್ಸಿಲಾಲ್ ಇಂದು<br />ಪತ್ರಕರ್ತರಿಗೆ ತಿಳಿಸಿದರು.</p>.<p>ಚಂಡೀಗಡವು ಹಿಂದಿ ಭಾಷಾ ಪ್ರಾಂತ್ಯವಾಗಿದ್ದು, ಅದು ಹರಿಯಾಣಕ್ಕೆ ದೊರೆಯಬೇಕಾಗಿತ್ತು ಎಂದವರು ನುಡಿದರು.</p>.<p>ಚಂಡೀಗಡವನ್ನು ಪಂಜಾಬಿಗೆ ಕೊಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರ ಹರಿಯಾಣದ ಜನತೆಗೆ ದಿಗ್ಭ್ರಮೆ ಉಂಟು ಮಾಡಿದೆಯೆಂಬ ನಿರ್ಣಯವೊಂದನ್ನು ಅಧಿಕಾರಾರೂಢ ಹರಿಯಾಣ ಕಾಂಗ್ರೆಸ್ ಶಾಸಕರ ಪಕ್ಷದ ಸಭೆ ಸರ್ವಾನುಮತದಿಂದ ಅನುಮೋದಿಸಿತು.</p>.<p><strong>ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನು</strong></p>.<p><strong>ಬೆಂಗಳೂರು, ಫೆ. 2–</strong> ಇನ್ನು ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನನ್ನು ಹಂಚಬೇಕೆಂದು ಸರ್ಕಾರ ಉದ್ದೇಶಿಸಿದೆಯೆಂದು ಕಂದಾಯ ಸಚಿವಶ್ರೀ ಎಚ್.ವಿ.ಕೌಜಲಗಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಭೂರಹಿತರಿಗೆ ವಿಲೇ ಮಾಡಲು ರಾಜ್ಯದಲ್ಲಿ 11,95,009 ಎಕರೆ 27 ಗುಂಟೆ ಸರ್ಕಾರಿ ಜಮೀನು ದೊರೆಯುವ ಸಂಭವವಿದೆಯೆಂದು ಸಚಿವರು ಶ್ರೀ ಎಂ.ವಿ.ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರವಿತ್ತರು.</p>.<p>ಸಾಗುವಳಿಗಾಗಿ ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಎಕರೆ ಜಮೀನನ್ನು ಜನ ಅತಿಕ್ರಮ ಮಾಡಿದ್ದಾರೆಂದೂ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಡ: ಈಗಿನ ನಿರ್ಧಾರ ಅಂತಿಮವಲ್ಲ ಎಂದು ಬನ್ಸಿಲಾಲ್</strong></p>.<p><strong>ಚಂಡೀಗಡ, ಫೆ. 2–</strong> ಹರಿಯಾಣದ ಮಟ್ಟಿಗೆ ಹೇಳುವುದಾದರೆ, ಚಂಡೀಗಡ ಇನ್ನೂ ತೆರೆದ ಪ್ರಶ್ನೆಯೇ ಎಂದು ಹರಿಯಾಣ ಮುಖ್ಯಮಂತ್ರಿ ಬನ್ಸಿಲಾಲ್ ಇಂದು<br />ಪತ್ರಕರ್ತರಿಗೆ ತಿಳಿಸಿದರು.</p>.<p>ಚಂಡೀಗಡವು ಹಿಂದಿ ಭಾಷಾ ಪ್ರಾಂತ್ಯವಾಗಿದ್ದು, ಅದು ಹರಿಯಾಣಕ್ಕೆ ದೊರೆಯಬೇಕಾಗಿತ್ತು ಎಂದವರು ನುಡಿದರು.</p>.<p>ಚಂಡೀಗಡವನ್ನು ಪಂಜಾಬಿಗೆ ಕೊಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರ ಹರಿಯಾಣದ ಜನತೆಗೆ ದಿಗ್ಭ್ರಮೆ ಉಂಟು ಮಾಡಿದೆಯೆಂಬ ನಿರ್ಣಯವೊಂದನ್ನು ಅಧಿಕಾರಾರೂಢ ಹರಿಯಾಣ ಕಾಂಗ್ರೆಸ್ ಶಾಸಕರ ಪಕ್ಷದ ಸಭೆ ಸರ್ವಾನುಮತದಿಂದ ಅನುಮೋದಿಸಿತು.</p>.<p><strong>ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನು</strong></p>.<p><strong>ಬೆಂಗಳೂರು, ಫೆ. 2–</strong> ಇನ್ನು ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನನ್ನು ಹಂಚಬೇಕೆಂದು ಸರ್ಕಾರ ಉದ್ದೇಶಿಸಿದೆಯೆಂದು ಕಂದಾಯ ಸಚಿವಶ್ರೀ ಎಚ್.ವಿ.ಕೌಜಲಗಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p>ಭೂರಹಿತರಿಗೆ ವಿಲೇ ಮಾಡಲು ರಾಜ್ಯದಲ್ಲಿ 11,95,009 ಎಕರೆ 27 ಗುಂಟೆ ಸರ್ಕಾರಿ ಜಮೀನು ದೊರೆಯುವ ಸಂಭವವಿದೆಯೆಂದು ಸಚಿವರು ಶ್ರೀ ಎಂ.ವಿ.ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರವಿತ್ತರು.</p>.<p>ಸಾಗುವಳಿಗಾಗಿ ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಎಕರೆ ಜಮೀನನ್ನು ಜನ ಅತಿಕ್ರಮ ಮಾಡಿದ್ದಾರೆಂದೂ ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>