<p><strong>ಕನ್ನಡ ಚಲನಚಿತ್ರಗಳಿಗೆ ಸಹಾಯಧನ ರದ್ದು</strong></p>.<p>ಬೆಂಗಳೂರು, ಜೂನ್ 18– ರಾಜ್ಯದಲ್ಲಿ ತಯಾರಿಸುವ ಕನ್ನಡ ಚಲನಚಿತ್ರಗಳಿಗೆ ನೀಡುವ 50,000 ರೂಪಾಯಿ ಸಹಾಯಧನವನ್ನು 1970ರ ಏಪ್ರಿಲ್ 1ರಿಂದ ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆಯೆಂದು ತಿಳಿದುಬಂದಿದೆ.</p>.<p>ಚಲನಚಿತ್ರೋದ್ಯಮದ ಬೆಳವಣಿಗೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ, ರಾಜ್ಯದಲ್ಲಿ ತಯಾರಾದ ಚಲನಚಿತ್ರಗಳಿಗೆ ಈ ಸಹಾಯಧನವನ್ನು ಸರ್ಕಾರ ನೀಡುತ್ತಿತ್ತು.</p>.<p>ಸಂಪನ್ಮೂಲಗಳ ಸಮಿತಿಯ ಶಿಫಾರಸಿನಂತೆ ಸರ್ಕಾರ ಈ ಸಹಾಯಧನ ನೀಡಿಕೆಯನ್ನು ನಿಲ್ಲಿಸಲು ನಿರ್ಧಾರ ಕೈಗೊಂಡಿದೆ.</p>.<p><strong>ಅತೃಪ್ತಿಯ ತೆಕ್ಕೆಯಲ್ಲಿ ಪೂರ್ವ ಪಾಕಿಸ್ತಾನ</strong></p>.<p>ಢಾಕಾ, ಜೂನ್ 18– ಬಾಂಬುಗಳ ಎಸೆತದ ಕಿರುಕುಳ, ಮುಷ್ಕರದ ಅಬ್ಬರ, ಕ್ಷಾಮ– ಡಾಮರದ ಭೀತಿಯಿಂದ, ಪಾಕಿಸ್ತಾನದ ರಾಜಕೀಯ ‘ಚಕಮಕಿ ಪೆಟ್ಟಿಗೆ’ ಎನಿಸಿರುವ ಪೂರ್ವ ಬಂಗಾಳ ಹತೋಟಿ ತಪ್ಪಿ ಹೋಗಲಿದೆ ಎಂದು ಪಾಕಿಸ್ತಾನ್ ಸೈನ್ಯ ತಿಳಿಸಿದೆ.</p>.<p>ಶಾಂತಿ ಭಂಗದ ಭೀತಿ ಇದೆ ಎಂದೂ ಹೇಳಿದೆ. ರಾಷ್ಟ್ರವನ್ನು ಸಿವಿಲಿಯನ್ನರ ಆಡಳಿತಕ್ಕೆ ಒಪ್ಪಿಸುವ ಸಂಬಂಧ ಚುನಾವಣೆಗಳನ್ನು ನಡೆಸುವುದು ಅಗತ್ಯವೆಂದೂ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನ್ನಡ ಚಲನಚಿತ್ರಗಳಿಗೆ ಸಹಾಯಧನ ರದ್ದು</strong></p>.<p>ಬೆಂಗಳೂರು, ಜೂನ್ 18– ರಾಜ್ಯದಲ್ಲಿ ತಯಾರಿಸುವ ಕನ್ನಡ ಚಲನಚಿತ್ರಗಳಿಗೆ ನೀಡುವ 50,000 ರೂಪಾಯಿ ಸಹಾಯಧನವನ್ನು 1970ರ ಏಪ್ರಿಲ್ 1ರಿಂದ ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆಯೆಂದು ತಿಳಿದುಬಂದಿದೆ.</p>.<p>ಚಲನಚಿತ್ರೋದ್ಯಮದ ಬೆಳವಣಿಗೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ, ರಾಜ್ಯದಲ್ಲಿ ತಯಾರಾದ ಚಲನಚಿತ್ರಗಳಿಗೆ ಈ ಸಹಾಯಧನವನ್ನು ಸರ್ಕಾರ ನೀಡುತ್ತಿತ್ತು.</p>.<p>ಸಂಪನ್ಮೂಲಗಳ ಸಮಿತಿಯ ಶಿಫಾರಸಿನಂತೆ ಸರ್ಕಾರ ಈ ಸಹಾಯಧನ ನೀಡಿಕೆಯನ್ನು ನಿಲ್ಲಿಸಲು ನಿರ್ಧಾರ ಕೈಗೊಂಡಿದೆ.</p>.<p><strong>ಅತೃಪ್ತಿಯ ತೆಕ್ಕೆಯಲ್ಲಿ ಪೂರ್ವ ಪಾಕಿಸ್ತಾನ</strong></p>.<p>ಢಾಕಾ, ಜೂನ್ 18– ಬಾಂಬುಗಳ ಎಸೆತದ ಕಿರುಕುಳ, ಮುಷ್ಕರದ ಅಬ್ಬರ, ಕ್ಷಾಮ– ಡಾಮರದ ಭೀತಿಯಿಂದ, ಪಾಕಿಸ್ತಾನದ ರಾಜಕೀಯ ‘ಚಕಮಕಿ ಪೆಟ್ಟಿಗೆ’ ಎನಿಸಿರುವ ಪೂರ್ವ ಬಂಗಾಳ ಹತೋಟಿ ತಪ್ಪಿ ಹೋಗಲಿದೆ ಎಂದು ಪಾಕಿಸ್ತಾನ್ ಸೈನ್ಯ ತಿಳಿಸಿದೆ.</p>.<p>ಶಾಂತಿ ಭಂಗದ ಭೀತಿ ಇದೆ ಎಂದೂ ಹೇಳಿದೆ. ರಾಷ್ಟ್ರವನ್ನು ಸಿವಿಲಿಯನ್ನರ ಆಡಳಿತಕ್ಕೆ ಒಪ್ಪಿಸುವ ಸಂಬಂಧ ಚುನಾವಣೆಗಳನ್ನು ನಡೆಸುವುದು ಅಗತ್ಯವೆಂದೂ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>