ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 24–7–1970

Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

ಸಂಪುಟದಲ್ಲಿ ಬದಲಾವಣೆ ಇಲ್ಲ: ಪಾಟೀಲ್‌

ಬೆಂಗಳೂರು, ಜುಲೈ 23– ರಾಜ್ಯದ ಮಂತ್ರಿಮಂಡಲದಲ್ಲಿ ಬದಲಾವಣೆಗಳನ್ನು ಮಾಡುವ ಆಲೋಚನೆ ತಮಗಿಲ್ಲವೆಂದು ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಇಂದು ಸ್ಪಷ್ಟಪಡಿಸಿದರು.

ಇಂದು ಪತ್ರಿಕೆಗಳಲ್ಲಿ ವರದಿಯಾಗಿರುವ ಊಹಾಪೋಹಗಳ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಶ್ರೀ ಪಾಟೀಲರು ಊಹಾಪೋಹಗಳು ನಿರಾಧಾರವೆಂದರು.

ಮಂತ್ರಿಯೊಬ್ಬರಿಗೆ ರಾಜೀನಾಮೆ ಕೊಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನಾಗಿ ಮಾಡುವ ಪ್ರಯತ್ನ ನಡೆದಿದೆಯೆಂಬ ಜನಸಂಘದ ರಾಜ್ಯ ಶಾಖೆ ಅಧ್ಯಕ್ಷ ಶ್ರೀ ವೈ.ಎಸ್‌.ಪಾಟೀಲರ ಹೇಳಿಕೆಯನ್ನು ‘ಉದ್ದೇಶಪೂರ್ವಕವಾಗಿ’ ಮಾಡಲ್ಪಟ್ಟ ‘ಕುಚೋದ್ಯದ’ ಹೇಳಿಕೆ ಎಂದು ಮುಖ್ಯಮಂತ್ರಿಯವರು ತಳ್ಳಿಹಾಕಿದರು.

ಸರ್ಕಾರಿ ಕಾಮಗಾರಿಗಳ ಕೀಳುಮಟ್ಟದ ಕೆಲಸ: ಧರ್ಮವೀರ ವಿಷಾದ

ಬೆಂಗಳೂರು, ಜುಲೈ 23– ಎಂಜಿನಿಯರುಗಳ ಮೇಲ್ವಿಚಾರಣೆಯಲ್ಲಿ ನಡೆದ ನಿರ್ಮಾಣ ಕಾಮಗಾರಿಗಳು ಅದರಲ್ಲೂ ಸರ್ಕಾರಿ ಕಾಮಗಾರಿಗಳಲ್ಲಿ ಕೆಲಸದ ಗುಣ ಕೀಳುಮಟ್ಟಕ್ಕೆ ಇಳಿಯುತ್ತಿದೆಯೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಇಲ್ಲಿ ವಿಷಾದಿಸಿದರು.

ಕಟ್ಟಡಗಳು ಹಾಗೂ ರಸ್ತೆ ಕೆಲಸ ತೀರಾ ಕಳಪೆ ದರ್ಜೆಯದಾಗಿರುವುದಕ್ಕೆಮೇಲ್ವಿಚಾರಣೆ ಸರಿಯಾಗಿಲ್ಲದಿರುವುದೇ ಕಾರಣ. ಇದರಿಂದ ಇಡೀ ಎಂಜಿನಿಯರಿಂಗ್‌ ವಿಭಾಗಕ್ಕೆ ಕಳಂಕ ಮೂಡಿದೆಯೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT