ನವದೆಹಲಿ, ಆ. 26 – ಬಲಾತ್ಕಾರವಾಗಿ ಸನ್ಯಾಸಿನಿಯರನ್ನಾಗಿ ಮಾಡಲು ಕೇರಳ ಮತ್ತಿತರ ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ತರುಣಿಯರನ್ನು ಯುರೋಪಿನಲ್ಲಿನ ಕಾನ್ವೆಂಟುಗಳಿಗೆ ಮಾರಾಟ ಮಾಡಲಾಗುತ್ತಿದೆಯೆಂಬ ವರದಿಗಳ ಬಗ್ಗೆ ಸಮಗ್ರ ರೀತಿಯ ತನಿಖೆಯೊಂದಕ್ಕೆ ಕೇಂದ್ರ ಸರ್ಕಾರ ಆಜ್ಞೆ ಮಾಡಿದೆ ಎಂದು ವಿದೇಶಾಂಗ ಸಚಿವ ಶ್ರೀ ಸ್ವರಣ್ ಸಿಂಗ್ ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.