ಗುರುವಾರ , ಮಾರ್ಚ್ 23, 2023
28 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಸೋಮವಾರ 7–9–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷದಿಂದ 7 ಜನ ಸದಸ್ಯರ ಸಸ್ಪೆಂಡ್‌: ವಿರುದ್ಧ ಮತ ನೀಡಿದುದಕ್ಕಾಗಿ ಪ್ರಧಾನಿ ಆಜ್ಞೆ

ನವದೆಹಲಿ, ಸೆ. 6– ರಾಜಧನ ರದ್ದು ವಿಧೇಯಕ ಕುರಿತು ಪಕ್ಷದ ಸಚೇತಕರ ಆದೇಶ ಉಲ್ಲಂಘಿಸಿದುದಕ್ಕಾಗಿ ಆಡಳಿತ ಕಾಂಗ್ರೆಸ್‌ ಸಂಸತ್‌ ಪಕ್ಷದಿಂದ ಏಳು ಜನರನ್ನು ಸಸ್ಪೆಂಡ್‌ ಮಾಡಲಾಗಿದೆ. ಇವರಲ್ಲಿ ಕೇಂದ್ರದ ಮಾಜಿ ಉಪ ಸಚಿವ ಶ್ರೀ ಭಾನು ಪ್ರಕಾಶ್‌ ಸಿಂಗ್‌ ಅವರೂ ಒಬ್ಬರು.

ಸಂವಿಧಾನದ ತಿದ್ದುಪಡಿ ವಿಧೇಯಕದ ಬಗೆಗೆ ಪಕ್ಷದ ಆದೇಶ ಪಾಲಿಸದೆ ‘ಉದ್ದೇಶಪೂರ್ವಕವಾಗಿ’ ಅದರ ವಿರುದ್ಧ ಮತ ಚಲಾಯಿಸಿದುದಕ್ಕಾಗಿ ಆ ಸದಸ್ಯರಿಗೆ ಬರೆದಿರುವ ಪತ್ರಗಳಲ್ಲಿ ಸಮಜಾಯಿಷಿ ಕೇಳಿ, ಆವರೆಗೆ ಅವರನ್ನು ಸಸ್ಪೆಂಡ್‌ ಮಾಡಿರುವುದಾಗಿ ಸಂಸತ್‌ ಪಕ್ಷದ ನಾಯಕರಾದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತಿಳಿಸಿದ್ದಾರೆ.

ಮಾಜಿ ರಾಜರ ಮಾನ್ಯತೆ ರದ್ದುಗೊಳಿಸಲು ಕೇಂದ್ರ ಸಂಪುಟದ ನಿರ್ಧಾರ

ನವದೆಹಲಿ, ಸೆ. 6– ಹಿಂದಿನ ಸಂಸ್ಥಾನಗಳ ದೊರೆಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಾನ್ಯತೆ ರದ್ದಾದಾಗ ಅದರ ಜತೆಯಲ್ಲೇ ಮಾಜಿ ಅರಸರ ರಾಜಧನ ಹಾಗೂ ವಿಶೇಷ ಸವಲತ್ತುಗಳೆಲ್ಲ ರದ್ದಾಗುತ್ತವೆ. ಆದರೆ, ಪರಿವರ್ತನೆ ಅವಧಿಯಲ್ಲಿ ಅವರಿಗೆ ಸಲ್ಲಬೇಕಾದ ಭತ್ಯದ ಮೇಲೆ ಈ ನಿರ್ಧಾರದಿಂದ ಯಾವ ಪರಿಣಾಮವೂ ಆಗುವುದಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು