<p><strong>ಪಕ್ಷದಿಂದ 7 ಜನ ಸದಸ್ಯರ ಸಸ್ಪೆಂಡ್: ವಿರುದ್ಧ ಮತ ನೀಡಿದುದಕ್ಕಾಗಿ ಪ್ರಧಾನಿ ಆಜ್ಞೆ</strong></p>.<p><strong>ನವದೆಹಲಿ, ಸೆ. 6</strong>– ರಾಜಧನ ರದ್ದು ವಿಧೇಯಕ ಕುರಿತು ಪಕ್ಷದ ಸಚೇತಕರ ಆದೇಶ ಉಲ್ಲಂಘಿಸಿದುದಕ್ಕಾಗಿ ಆಡಳಿತ ಕಾಂಗ್ರೆಸ್ ಸಂಸತ್ ಪಕ್ಷದಿಂದ ಏಳು ಜನರನ್ನು ಸಸ್ಪೆಂಡ್ ಮಾಡಲಾಗಿದೆ. ಇವರಲ್ಲಿ ಕೇಂದ್ರದ ಮಾಜಿ ಉಪ ಸಚಿವ ಶ್ರೀ ಭಾನು ಪ್ರಕಾಶ್ ಸಿಂಗ್ ಅವರೂ ಒಬ್ಬರು.</p>.<p>ಸಂವಿಧಾನದ ತಿದ್ದುಪಡಿ ವಿಧೇಯಕದ ಬಗೆಗೆ ಪಕ್ಷದ ಆದೇಶ ಪಾಲಿಸದೆ ‘ಉದ್ದೇಶಪೂರ್ವಕವಾಗಿ’ ಅದರ ವಿರುದ್ಧ ಮತ ಚಲಾಯಿಸಿದುದಕ್ಕಾಗಿ ಆ ಸದಸ್ಯರಿಗೆ ಬರೆದಿರುವ ಪತ್ರಗಳಲ್ಲಿ ಸಮಜಾಯಿಷಿ ಕೇಳಿ, ಆವರೆಗೆ ಅವರನ್ನು ಸಸ್ಪೆಂಡ್ ಮಾಡಿರುವುದಾಗಿಸಂಸತ್ ಪಕ್ಷದ ನಾಯಕರಾದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತಿಳಿಸಿದ್ದಾರೆ.</p>.<p><strong>ಮಾಜಿ ರಾಜರ ಮಾನ್ಯತೆ ರದ್ದುಗೊಳಿಸಲು ಕೇಂದ್ರ ಸಂಪುಟದ ನಿರ್ಧಾರ</strong></p>.<p><strong>ನವದೆಹಲಿ, ಸೆ. 6</strong>– ಹಿಂದಿನ ಸಂಸ್ಥಾನಗಳ ದೊರೆಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.</p>.<p>ಮಾನ್ಯತೆ ರದ್ದಾದಾಗ ಅದರ ಜತೆಯಲ್ಲೇ ಮಾಜಿ ಅರಸರ ರಾಜಧನ ಹಾಗೂ ವಿಶೇಷ ಸವಲತ್ತುಗಳೆಲ್ಲ ರದ್ದಾಗುತ್ತವೆ. ಆದರೆ, ಪರಿವರ್ತನೆ ಅವಧಿಯಲ್ಲಿ ಅವರಿಗೆ ಸಲ್ಲಬೇಕಾದ ಭತ್ಯದ ಮೇಲೆ ಈ ನಿರ್ಧಾರದಿಂದ ಯಾವ ಪರಿಣಾಮವೂ ಆಗುವುದಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಕ್ಷದಿಂದ 7 ಜನ ಸದಸ್ಯರ ಸಸ್ಪೆಂಡ್: ವಿರುದ್ಧ ಮತ ನೀಡಿದುದಕ್ಕಾಗಿ ಪ್ರಧಾನಿ ಆಜ್ಞೆ</strong></p>.<p><strong>ನವದೆಹಲಿ, ಸೆ. 6</strong>– ರಾಜಧನ ರದ್ದು ವಿಧೇಯಕ ಕುರಿತು ಪಕ್ಷದ ಸಚೇತಕರ ಆದೇಶ ಉಲ್ಲಂಘಿಸಿದುದಕ್ಕಾಗಿ ಆಡಳಿತ ಕಾಂಗ್ರೆಸ್ ಸಂಸತ್ ಪಕ್ಷದಿಂದ ಏಳು ಜನರನ್ನು ಸಸ್ಪೆಂಡ್ ಮಾಡಲಾಗಿದೆ. ಇವರಲ್ಲಿ ಕೇಂದ್ರದ ಮಾಜಿ ಉಪ ಸಚಿವ ಶ್ರೀ ಭಾನು ಪ್ರಕಾಶ್ ಸಿಂಗ್ ಅವರೂ ಒಬ್ಬರು.</p>.<p>ಸಂವಿಧಾನದ ತಿದ್ದುಪಡಿ ವಿಧೇಯಕದ ಬಗೆಗೆ ಪಕ್ಷದ ಆದೇಶ ಪಾಲಿಸದೆ ‘ಉದ್ದೇಶಪೂರ್ವಕವಾಗಿ’ ಅದರ ವಿರುದ್ಧ ಮತ ಚಲಾಯಿಸಿದುದಕ್ಕಾಗಿ ಆ ಸದಸ್ಯರಿಗೆ ಬರೆದಿರುವ ಪತ್ರಗಳಲ್ಲಿ ಸಮಜಾಯಿಷಿ ಕೇಳಿ, ಆವರೆಗೆ ಅವರನ್ನು ಸಸ್ಪೆಂಡ್ ಮಾಡಿರುವುದಾಗಿಸಂಸತ್ ಪಕ್ಷದ ನಾಯಕರಾದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ತಿಳಿಸಿದ್ದಾರೆ.</p>.<p><strong>ಮಾಜಿ ರಾಜರ ಮಾನ್ಯತೆ ರದ್ದುಗೊಳಿಸಲು ಕೇಂದ್ರ ಸಂಪುಟದ ನಿರ್ಧಾರ</strong></p>.<p><strong>ನವದೆಹಲಿ, ಸೆ. 6</strong>– ಹಿಂದಿನ ಸಂಸ್ಥಾನಗಳ ದೊರೆಗಳಿಗೆ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.</p>.<p>ಮಾನ್ಯತೆ ರದ್ದಾದಾಗ ಅದರ ಜತೆಯಲ್ಲೇ ಮಾಜಿ ಅರಸರ ರಾಜಧನ ಹಾಗೂ ವಿಶೇಷ ಸವಲತ್ತುಗಳೆಲ್ಲ ರದ್ದಾಗುತ್ತವೆ. ಆದರೆ, ಪರಿವರ್ತನೆ ಅವಧಿಯಲ್ಲಿ ಅವರಿಗೆ ಸಲ್ಲಬೇಕಾದ ಭತ್ಯದ ಮೇಲೆ ಈ ನಿರ್ಧಾರದಿಂದ ಯಾವ ಪರಿಣಾಮವೂ ಆಗುವುದಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>