<p><strong>ಮೈಸೂರೂ ಬಂಗಾಳದ ಹಾದಿ ಹಿಡಿದೀತು: ವೀರೇಂದ್ರರ ಎಚ್ಚರಿಕೆ</strong></p>.<p><strong>ರಾಯಚೂರು,</strong> ಸೆ. 9– ‘ರಾಜ್ಯದಲ್ಲಿ ಸ್ವಾರ್ಥ ಹಿತಾಸಕ್ತಿ ಉದ್ದೇಶದಿಂದ ಕೆಲವು ಮಂದಿ ‘ಅತೃಪ್ತರು’ ಆಡಳಿತ ಕಾಂಗ್ರೆಸ್ ಪಕ್ಷವನ್ನು ರಚಿಸಿಕೊಂಡಿದ್ದಾರೆ. ಆದರೆ, ಸಂಸ್ಥಾ ಕಾಂಗ್ರೆಸ್ ಚೆನ್ನಾಗಿ ಬೇರೂರಿರುವ ಪಕ್ಷವಾಗಿದೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ತಿಳಿಸಿದರು.</p>.<p>ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ‘ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಬಹುಮತ ಕಳೆದುಕೊಂಡರೆ ಮೈಸೂರು ಸಹ ಪಶ್ಚಿಮ ಬಂಗಾಳದ ಹಾದಿ ಹಿಡಿಯುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ನಾಯಿಕೊಡೆಗಳಂತೆ ಬೆಳೆಯುವ ರಾಜಕೀಯ ಪಕ್ಷಗಳ ಬಗ್ಗೆ ವಿಷಾದಿಸಿದ ಅವರು, ಆಗಾಗ್ಗೆ ನಡೆಯುವ ಪಕ್ಷಾಂತರಗಳನ್ನು ಖಂಡಿಸಿದರು.</p>.<p><strong>ಸ್ವ ಇಚ್ಛೆಯಿಂದ ಜಂಬೂಸವಾರಿ ಕೈಬಿಡುವಂತೆ ಒಡೆಯರಿಗೆ ಸಲಹೆ</strong></p>.<p><strong>ಬೆಂಗಳೂರು, </strong>ಸೆ. 9– ರಾಷ್ಟ್ರಪತಿಯ ಆಜ್ಞೆಯನ್ನನುಸರಿಸಿ ದಸರಾ ಉತ್ಸವದ ರಾಜಸಭಾ ಹಾಗೂ ಜಂಬೂಸವಾರಿ ನಡೆಸುವುದನ್ನು ಮಾಜಿ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್ ತಾವಾಗಿಯೇ ಕೈಬಿಡಬೇಕೆಂದು ವಿಧಾನಸಭೆಯ ಆಡಳಿತ ಕಾಂಗ್ರೆಸ್ ಸದಸ್ಯ ಶ್ರೀ ಅಜೀಜ್ ಸೇಠ್ ಅವರು ಇಂದು ಇಲ್ಲಿ ಸಲಹೆ ಮಾಡಿದರು.</p>.<p>‘ಮಾಜಿ ಮಹಾರಾಜರು ಸ್ವಯಿಚ್ಛೆಯಿಂದ ಈ ನಿರ್ಧಾರ ಕೈಗೊಂಡು ಉತ್ತಮ ಉದಾಹರಣೆಯಾಗಬೇಕು. ಮೈಸೂರು ರಾಜರು ಹಿಂದಿನಿಂದಲೂ ಮಾರ್ಗದರ್ಶಕರಾಗಿ ನಡೆದುಕೊಂಡು ಬಂದಿದ್ದಾರೆ’ ಎಂದು ಆಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರೂ ಬಂಗಾಳದ ಹಾದಿ ಹಿಡಿದೀತು: ವೀರೇಂದ್ರರ ಎಚ್ಚರಿಕೆ</strong></p>.<p><strong>ರಾಯಚೂರು,</strong> ಸೆ. 9– ‘ರಾಜ್ಯದಲ್ಲಿ ಸ್ವಾರ್ಥ ಹಿತಾಸಕ್ತಿ ಉದ್ದೇಶದಿಂದ ಕೆಲವು ಮಂದಿ ‘ಅತೃಪ್ತರು’ ಆಡಳಿತ ಕಾಂಗ್ರೆಸ್ ಪಕ್ಷವನ್ನು ರಚಿಸಿಕೊಂಡಿದ್ದಾರೆ. ಆದರೆ, ಸಂಸ್ಥಾ ಕಾಂಗ್ರೆಸ್ ಚೆನ್ನಾಗಿ ಬೇರೂರಿರುವ ಪಕ್ಷವಾಗಿದೆ’ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ತಿಳಿಸಿದರು.</p>.<p>ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ‘ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ ಬಹುಮತ ಕಳೆದುಕೊಂಡರೆ ಮೈಸೂರು ಸಹ ಪಶ್ಚಿಮ ಬಂಗಾಳದ ಹಾದಿ ಹಿಡಿಯುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ನಾಯಿಕೊಡೆಗಳಂತೆ ಬೆಳೆಯುವ ರಾಜಕೀಯ ಪಕ್ಷಗಳ ಬಗ್ಗೆ ವಿಷಾದಿಸಿದ ಅವರು, ಆಗಾಗ್ಗೆ ನಡೆಯುವ ಪಕ್ಷಾಂತರಗಳನ್ನು ಖಂಡಿಸಿದರು.</p>.<p><strong>ಸ್ವ ಇಚ್ಛೆಯಿಂದ ಜಂಬೂಸವಾರಿ ಕೈಬಿಡುವಂತೆ ಒಡೆಯರಿಗೆ ಸಲಹೆ</strong></p>.<p><strong>ಬೆಂಗಳೂರು, </strong>ಸೆ. 9– ರಾಷ್ಟ್ರಪತಿಯ ಆಜ್ಞೆಯನ್ನನುಸರಿಸಿ ದಸರಾ ಉತ್ಸವದ ರಾಜಸಭಾ ಹಾಗೂ ಜಂಬೂಸವಾರಿ ನಡೆಸುವುದನ್ನು ಮಾಜಿ ಮಹಾರಾಜರಾದ ಶ್ರೀ ಜಯಚಾಮರಾಜ ಒಡೆಯರ್ ತಾವಾಗಿಯೇ ಕೈಬಿಡಬೇಕೆಂದು ವಿಧಾನಸಭೆಯ ಆಡಳಿತ ಕಾಂಗ್ರೆಸ್ ಸದಸ್ಯ ಶ್ರೀ ಅಜೀಜ್ ಸೇಠ್ ಅವರು ಇಂದು ಇಲ್ಲಿ ಸಲಹೆ ಮಾಡಿದರು.</p>.<p>‘ಮಾಜಿ ಮಹಾರಾಜರು ಸ್ವಯಿಚ್ಛೆಯಿಂದ ಈ ನಿರ್ಧಾರ ಕೈಗೊಂಡು ಉತ್ತಮ ಉದಾಹರಣೆಯಾಗಬೇಕು. ಮೈಸೂರು ರಾಜರು ಹಿಂದಿನಿಂದಲೂ ಮಾರ್ಗದರ್ಶಕರಾಗಿ ನಡೆದುಕೊಂಡು ಬಂದಿದ್ದಾರೆ’ ಎಂದು ಆಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>