<p><strong>ಕಾಂಗ್ರೆಸ್ ನೇತೃತ್ವದ ಸರ್ಕಾರ ಉರುಳಿಸುವ ಎಸ್ಸೆಸ್ಪಿ ನೀತಿ ಬದಲಾಗಿಲ್ಲ</strong></p>.<p><strong>ಬೆಂಗಳೂರು, ಡಿ. 13–</strong> ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ವಿರೋಧಿಸಿ ಅದನ್ನು ಉರುಳಿಸುವ ಎಸ್ಸೆಸ್ಪಿ ನೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ರಾಜ್ಯದ ಎಸ್ಸೆಸ್ಪಿ ನಾಯಕ ಶ್ರೀ ಎಸ್. ಗೋಪಾಲಗೌಡ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>ಈ ನೀತಿಯನ್ನನುಸರಿಸಿ ರಾಜ್ಯದಲ್ಲಿ ಶ್ರೀ ವೀರೇಂದ್ರ ಪಾಟೀಲರ ಸರ್ಕಾರವನ್ನು ಪದಚ್ಯುತಗೊಳಿಸುವ ಯಾರ ಪ್ರಯತ್ನಕ್ಕೇ ಆಗಲಿ ತಮ್ಮ ಪಕ್ಷದ ಬೆಂಬಲವಿದೆ ಎಂದರು. ವಿಧಾನಸಭೆಯಲ್ಲಿ ಇತರ ಕಾಂಗ್ರೆಸ್ ವಿರೋಧಿ ಪಕ್ಷಗಳೊಡನೆ ತಮ್ಮ ಪಕ್ಷ ಸಹಕರಿಸುವುದು, ಆ ಪಕ್ಷಗಳ ಹೊಂದಾಣಿಕೆ ಸಾಧ್ಯತೆಗಳನ್ನು ಅವಲಂಬಿಸಿದೆಯೆಂದು ವರದಿಗಾರರಿಗೆ ತಿಳಿಸಿದರು.</p>.<p><strong>ಕಾಂಗ್ರೆಸ್ ಐಕ್ಯ ಅಸಾಧ್ಯ ಎಂದಅಧ್ಯಕ್ಷರು</strong></p>.<p><strong>ಬೆಂಗಳೂರು, ಡಿ. 13–</strong> ಕಾಂಗ್ರೆಸ್ಸಿನ ಎರಡು ಬಣಗಳ ನಡುವೆ ಮತ್ತೆ ಏಕತೆ ಅಸಾಧ್ಯವೆಂದು ಎರಡೂ ಗುಂಪಿನ<br />ಅಧ್ಯಕ್ಷರುಗಳು ಮತ್ತೆ ಸ್ಪಷ್ಟಪಡಿಸಿದ್ದಾರೆ.</p>.<p>‘ನನ್ನ ಪ್ರಯತ್ನಗಳಿಗೆ ಸಾಕಷ್ಟು ತಿರಸ್ಕಾರ, ಮುಖಭಂಗಗಳಾಗಿವೆ. ಏಕತೆ ಸಾಧಿಸಲು ಹೊಸ ಪ್ರಯತ್ನ ಮಾಡಲೊಲ್ಲೆ’ ಎಂದು ಎಸ್.ನಿಜಲಿಂಗಪ್ಪ ಮತ್ತು ಸಿ.ಸುಬ್ರಹ್ಮಣ್ಯಂ ಅವರು ಸ್ಪಷ್ಟಪಡಿಸಿದರು.</p>.<p><strong>ಬೆನಗಲ್ ರಾಮರಾವ್ ಅವರುನಿಧನ</strong></p>.<p><strong>ಮುಂಬೈ, ಡಿ. 13–</strong> ರಿಸರ್ವ್ ಬ್ಯಾಂಕಿನ ಮಾಜಿ ಗೌರ್ನರ್ ಶ್ರೀ ಬೆನಗಲ್ ರಾಮರಾವ್ ಅವರು ಇಂದು ಇಲ್ಲಿ ನಿಧನರಾದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿದ್ದರು. ಅವರಿಗೆ 80 ವರ್ಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಂಗ್ರೆಸ್ ನೇತೃತ್ವದ ಸರ್ಕಾರ ಉರುಳಿಸುವ ಎಸ್ಸೆಸ್ಪಿ ನೀತಿ ಬದಲಾಗಿಲ್ಲ</strong></p>.<p><strong>ಬೆಂಗಳೂರು, ಡಿ. 13–</strong> ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ವಿರೋಧಿಸಿ ಅದನ್ನು ಉರುಳಿಸುವ ಎಸ್ಸೆಸ್ಪಿ ನೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ರಾಜ್ಯದ ಎಸ್ಸೆಸ್ಪಿ ನಾಯಕ ಶ್ರೀ ಎಸ್. ಗೋಪಾಲಗೌಡ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.</p>.<p>ಈ ನೀತಿಯನ್ನನುಸರಿಸಿ ರಾಜ್ಯದಲ್ಲಿ ಶ್ರೀ ವೀರೇಂದ್ರ ಪಾಟೀಲರ ಸರ್ಕಾರವನ್ನು ಪದಚ್ಯುತಗೊಳಿಸುವ ಯಾರ ಪ್ರಯತ್ನಕ್ಕೇ ಆಗಲಿ ತಮ್ಮ ಪಕ್ಷದ ಬೆಂಬಲವಿದೆ ಎಂದರು. ವಿಧಾನಸಭೆಯಲ್ಲಿ ಇತರ ಕಾಂಗ್ರೆಸ್ ವಿರೋಧಿ ಪಕ್ಷಗಳೊಡನೆ ತಮ್ಮ ಪಕ್ಷ ಸಹಕರಿಸುವುದು, ಆ ಪಕ್ಷಗಳ ಹೊಂದಾಣಿಕೆ ಸಾಧ್ಯತೆಗಳನ್ನು ಅವಲಂಬಿಸಿದೆಯೆಂದು ವರದಿಗಾರರಿಗೆ ತಿಳಿಸಿದರು.</p>.<p><strong>ಕಾಂಗ್ರೆಸ್ ಐಕ್ಯ ಅಸಾಧ್ಯ ಎಂದಅಧ್ಯಕ್ಷರು</strong></p>.<p><strong>ಬೆಂಗಳೂರು, ಡಿ. 13–</strong> ಕಾಂಗ್ರೆಸ್ಸಿನ ಎರಡು ಬಣಗಳ ನಡುವೆ ಮತ್ತೆ ಏಕತೆ ಅಸಾಧ್ಯವೆಂದು ಎರಡೂ ಗುಂಪಿನ<br />ಅಧ್ಯಕ್ಷರುಗಳು ಮತ್ತೆ ಸ್ಪಷ್ಟಪಡಿಸಿದ್ದಾರೆ.</p>.<p>‘ನನ್ನ ಪ್ರಯತ್ನಗಳಿಗೆ ಸಾಕಷ್ಟು ತಿರಸ್ಕಾರ, ಮುಖಭಂಗಗಳಾಗಿವೆ. ಏಕತೆ ಸಾಧಿಸಲು ಹೊಸ ಪ್ರಯತ್ನ ಮಾಡಲೊಲ್ಲೆ’ ಎಂದು ಎಸ್.ನಿಜಲಿಂಗಪ್ಪ ಮತ್ತು ಸಿ.ಸುಬ್ರಹ್ಮಣ್ಯಂ ಅವರು ಸ್ಪಷ್ಟಪಡಿಸಿದರು.</p>.<p><strong>ಬೆನಗಲ್ ರಾಮರಾವ್ ಅವರುನಿಧನ</strong></p>.<p><strong>ಮುಂಬೈ, ಡಿ. 13–</strong> ರಿಸರ್ವ್ ಬ್ಯಾಂಕಿನ ಮಾಜಿ ಗೌರ್ನರ್ ಶ್ರೀ ಬೆನಗಲ್ ರಾಮರಾವ್ ಅವರು ಇಂದು ಇಲ್ಲಿ ನಿಧನರಾದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿದ್ದರು. ಅವರಿಗೆ 80 ವರ್ಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>