ವಚನಕ್ಕೆ ಅಂದರೆ ನಾಲಿಗೆಗೆ ಯಾವುದು ಶೃಂಗಾರ ಎಂದರೆ ಸತ್ಯವನ್ನು ನುಡಿಯುವುದು: ಸುಳ್ಳು ಕೆಲವೊಮ್ಮೆ ರಂಜನೀಯ ಎನಿಸಿದರೂ ಅದು ತಾತ್ಕಾಲಿಕವಾಗಿ ಭ್ರಮೆ ಹುಟ್ಟಿಸಿದರೂ ಶಾಶ್ವತವಾಗಿ ನಿಲ್ಲದು: ಸಂಭಾಷಣೆಯು ಪ್ರೌಢವಾಗಿ ಪರಿಣಾಮಕಾರಿಯಾಗಿ ಇರಬೇಕೆಂದರೆ ಅದರಲ್ಲಿ ಮಹಾತ್ಮರ ಶರಣರ ಲೋಕೋಕ್ತಿಗಳು ತುಂಬಿರಬೇಕು, ಅಧ್ಯಯನವನ್ನು ನಿರಂತರವಾಗಿ ಮಾಡುತ್ತ ಜ್ಞಾನಿಗಳ ಮಾತುಗಳನ್ನು ಬರೆದಿಟ್ಟುಕೊಂಡು ಭಾಷಣದಲ್ಲಿ ಬರವಣಿಗೆಯಲ್ಲಿ, ಸಂವಾದದಲ್ಲಿ ಬಳಸಬೇಕು. ಕೈಗೆ ಯಾವುದು ಚಂದ, ಬಂಗಾರದ ಬಳೆ, ತೋಳ ಬಂದಿ, ಕೈಕಡಗಗಳೇ? ಇಲ್ಲ; ಸತ್ಪ್ರಾತ್ರಕ್ಕೆ ದಾನ ಮಾಡುವುದು, ತನ್ನ ಗಳಿಕೆಯ ಒಂದು ಪಾಲನ್ನು ಸಮಾಜ-ಧರ್ಮಗಳ ಏಳಿಗೆಗೆ ಬಳಸುವುದು: ಜೀವನ ಎನ್ನುವುದು ದೇವರು ಕೊಟ್ಟ ಮಹಾನ್ ವರ ಅದಕ್ಕೆ ಅರ್ಥ ಬರಬೇಕಾದರ ಶರಣರ ಸತ್ಸಂಗದಲ್ಲಿ ನಡೆಯುವ ಆಧ್ಯಾತ್ಮಿಕ ಚಿಂತನೆ . ಈ ಎಲ್ಲ ಗುಣಗಳು, ಮೌಲ್ಯಗಳು ಇಲ್ಲದ ಜೀವನ ಅರ್ಥರಹಿತ ಯಾವುದಕ್ಕೂ ಪ್ರಯೋಜನವಿಲ್ಲ. ಮೌಲ್ಯ ಸಹಿತವಾದ ಜೀವನ ಲೋಕಕ್ಕೆ ದೊಡ್ಡ ಸಂಪತ್ತು.