<p>ಸಾಮಾನ್ಯ ಲೌಕಿಕರು ದೇಹಕ್ಕೆ ಅಲಂಕಾರ ಮಾಡಿಕೊಳ್ಳುವುದರಲ್ಲೆ ಆಸಕ್ತಿ ಹೊಂದಿರುತ್ತಾರೆ. ಆದರೆ ಆದರ್ಶ ಮೌಲ್ಯಗಳಿಗೆ ಬೆಲೆ ಕೊಡುವ ಸಾಧಕ ಜೀವಿಗಳು ಜೀವನವನ್ನು ಸದ್ಗುಣಗಳಿಂದ ಅಲಂಕರಿಸಬಯಸುತ್ತಾರೆ.</p>.<p>ಕಣ್ಣಿಗೆ ಯಾವುದು ಶೃಂಗಾರ? ಗುರು ದರ್ಶನವನ್ನು ಪಡೆಯುವುದು, ಹಿರಿಯರ ದರ್ಶನವನ್ನು ಪಡೆದು ಗುರು ಹಿರಿಯರ ಆಶೀರ್ವಾದ ಪಡೆಯುವುದು ನಿಜವಾದ ಶೃಂಗಾರ.</p>.<p>ಕಿವಿಗೆ ಓಲೆ, ಆಭರಣ ಧರಿಸುವುದು ಭೌತಿಕ ಶೃಂಗಾರ, ಜ್ಞಾನಿಗಳ ದಿವ್ಯವಾಣಿ ಕೇಳುವುದು ಬೌದ್ಧಿಕ ಶೃಂಗಾರ. ಅವು ಜೀವನದಲ್ಲಿ ಮಾರ್ಗದರ್ಶನ ಮಾಡುವ ದಾರಿ ದೀಪಗಳು; ಕೆಲವೊಮ್ಮೆ ಸಂದಿಗ್ಧ ಪ್ರಸಂಗ ಎದುರಾದಾಗ ಸರಿಯಾದ ದಾರಿ ತೋರಿಸುವ ದಿಕ್ಸೂಚಿ.</p>.<p>ವಚನಕ್ಕೆ ಅಂದರೆ ನಾಲಿಗೆಗೆ ಯಾವುದು ಶೃಂಗಾರ ಎಂದರೆ ಸತ್ಯವನ್ನು ನುಡಿಯುವುದು: ಸುಳ್ಳು ಕೆಲವೊಮ್ಮೆ ರಂಜನೀಯ ಎನಿಸಿದರೂ ಅದು ತಾತ್ಕಾಲಿಕವಾಗಿ ಭ್ರಮೆ ಹುಟ್ಟಿಸಿದರೂ ಶಾಶ್ವತವಾಗಿ ನಿಲ್ಲದು: ಸಂಭಾಷಣೆಯು ಪ್ರೌಢವಾಗಿ ಪರಿಣಾಮಕಾರಿಯಾಗಿ ಇರಬೇಕೆಂದರೆ ಅದರಲ್ಲಿ ಮಹಾತ್ಮರ ಶರಣರ ಲೋಕೋಕ್ತಿಗಳು ತುಂಬಿರಬೇಕು, ಅಧ್ಯಯನವನ್ನು ನಿರಂತರವಾಗಿ ಮಾಡುತ್ತ ಜ್ಞಾನಿಗಳ ಮಾತುಗಳನ್ನು ಬರೆದಿಟ್ಟುಕೊಂಡು ಭಾಷಣದಲ್ಲಿ ಬರವಣಿಗೆಯಲ್ಲಿ, ಸಂವಾದದಲ್ಲಿ ಬಳಸಬೇಕು. ಕೈಗೆ ಯಾವುದು ಚಂದ, ಬಂಗಾರದ ಬಳೆ, ತೋಳ ಬಂದಿ, ಕೈಕಡಗಗಳೇ? ಇಲ್ಲ; ಸತ್ಪ್ರಾತ್ರಕ್ಕೆ ದಾನ ಮಾಡುವುದು, ತನ್ನ ಗಳಿಕೆಯ ಒಂದು ಪಾಲನ್ನು ಸಮಾಜ-ಧರ್ಮಗಳ ಏಳಿಗೆಗೆ ಬಳಸುವುದು: ಜೀವನ ಎನ್ನುವುದು ದೇವರು ಕೊಟ್ಟ ಮಹಾನ್ ವರ ಅದಕ್ಕೆ ಅರ್ಥ ಬರಬೇಕಾದರ ಶರಣರ ಸತ್ಸಂಗದಲ್ಲಿ ನಡೆಯುವ ಆಧ್ಯಾತ್ಮಿಕ ಚಿಂತನೆ . ಈ ಎಲ್ಲ ಗುಣಗಳು, ಮೌಲ್ಯಗಳು ಇಲ್ಲದ ಜೀವನ ಅರ್ಥರಹಿತ ಯಾವುದಕ್ಕೂ ಪ್ರಯೋಜನವಿಲ್ಲ. ಮೌಲ್ಯ ಸಹಿತವಾದ ಜೀವನ ಲೋಕಕ್ಕೆ ದೊಡ್ಡ ಸಂಪತ್ತು.</p>.<p><em><strong>(ಪ್ರಜಾವಾಣಿಯ ವಚನಾಮೃತ ಅಂಕಣದಲ್ಲಿ ಪ್ರಕಟವಾದ ಬರಹ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಮಾನ್ಯ ಲೌಕಿಕರು ದೇಹಕ್ಕೆ ಅಲಂಕಾರ ಮಾಡಿಕೊಳ್ಳುವುದರಲ್ಲೆ ಆಸಕ್ತಿ ಹೊಂದಿರುತ್ತಾರೆ. ಆದರೆ ಆದರ್ಶ ಮೌಲ್ಯಗಳಿಗೆ ಬೆಲೆ ಕೊಡುವ ಸಾಧಕ ಜೀವಿಗಳು ಜೀವನವನ್ನು ಸದ್ಗುಣಗಳಿಂದ ಅಲಂಕರಿಸಬಯಸುತ್ತಾರೆ.</p>.<p>ಕಣ್ಣಿಗೆ ಯಾವುದು ಶೃಂಗಾರ? ಗುರು ದರ್ಶನವನ್ನು ಪಡೆಯುವುದು, ಹಿರಿಯರ ದರ್ಶನವನ್ನು ಪಡೆದು ಗುರು ಹಿರಿಯರ ಆಶೀರ್ವಾದ ಪಡೆಯುವುದು ನಿಜವಾದ ಶೃಂಗಾರ.</p>.<p>ಕಿವಿಗೆ ಓಲೆ, ಆಭರಣ ಧರಿಸುವುದು ಭೌತಿಕ ಶೃಂಗಾರ, ಜ್ಞಾನಿಗಳ ದಿವ್ಯವಾಣಿ ಕೇಳುವುದು ಬೌದ್ಧಿಕ ಶೃಂಗಾರ. ಅವು ಜೀವನದಲ್ಲಿ ಮಾರ್ಗದರ್ಶನ ಮಾಡುವ ದಾರಿ ದೀಪಗಳು; ಕೆಲವೊಮ್ಮೆ ಸಂದಿಗ್ಧ ಪ್ರಸಂಗ ಎದುರಾದಾಗ ಸರಿಯಾದ ದಾರಿ ತೋರಿಸುವ ದಿಕ್ಸೂಚಿ.</p>.<p>ವಚನಕ್ಕೆ ಅಂದರೆ ನಾಲಿಗೆಗೆ ಯಾವುದು ಶೃಂಗಾರ ಎಂದರೆ ಸತ್ಯವನ್ನು ನುಡಿಯುವುದು: ಸುಳ್ಳು ಕೆಲವೊಮ್ಮೆ ರಂಜನೀಯ ಎನಿಸಿದರೂ ಅದು ತಾತ್ಕಾಲಿಕವಾಗಿ ಭ್ರಮೆ ಹುಟ್ಟಿಸಿದರೂ ಶಾಶ್ವತವಾಗಿ ನಿಲ್ಲದು: ಸಂಭಾಷಣೆಯು ಪ್ರೌಢವಾಗಿ ಪರಿಣಾಮಕಾರಿಯಾಗಿ ಇರಬೇಕೆಂದರೆ ಅದರಲ್ಲಿ ಮಹಾತ್ಮರ ಶರಣರ ಲೋಕೋಕ್ತಿಗಳು ತುಂಬಿರಬೇಕು, ಅಧ್ಯಯನವನ್ನು ನಿರಂತರವಾಗಿ ಮಾಡುತ್ತ ಜ್ಞಾನಿಗಳ ಮಾತುಗಳನ್ನು ಬರೆದಿಟ್ಟುಕೊಂಡು ಭಾಷಣದಲ್ಲಿ ಬರವಣಿಗೆಯಲ್ಲಿ, ಸಂವಾದದಲ್ಲಿ ಬಳಸಬೇಕು. ಕೈಗೆ ಯಾವುದು ಚಂದ, ಬಂಗಾರದ ಬಳೆ, ತೋಳ ಬಂದಿ, ಕೈಕಡಗಗಳೇ? ಇಲ್ಲ; ಸತ್ಪ್ರಾತ್ರಕ್ಕೆ ದಾನ ಮಾಡುವುದು, ತನ್ನ ಗಳಿಕೆಯ ಒಂದು ಪಾಲನ್ನು ಸಮಾಜ-ಧರ್ಮಗಳ ಏಳಿಗೆಗೆ ಬಳಸುವುದು: ಜೀವನ ಎನ್ನುವುದು ದೇವರು ಕೊಟ್ಟ ಮಹಾನ್ ವರ ಅದಕ್ಕೆ ಅರ್ಥ ಬರಬೇಕಾದರ ಶರಣರ ಸತ್ಸಂಗದಲ್ಲಿ ನಡೆಯುವ ಆಧ್ಯಾತ್ಮಿಕ ಚಿಂತನೆ . ಈ ಎಲ್ಲ ಗುಣಗಳು, ಮೌಲ್ಯಗಳು ಇಲ್ಲದ ಜೀವನ ಅರ್ಥರಹಿತ ಯಾವುದಕ್ಕೂ ಪ್ರಯೋಜನವಿಲ್ಲ. ಮೌಲ್ಯ ಸಹಿತವಾದ ಜೀವನ ಲೋಕಕ್ಕೆ ದೊಡ್ಡ ಸಂಪತ್ತು.</p>.<p><em><strong>(ಪ್ರಜಾವಾಣಿಯ ವಚನಾಮೃತ ಅಂಕಣದಲ್ಲಿ ಪ್ರಕಟವಾದ ಬರಹ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>