ಸಹಜ ಕೃಷಿಯಿಂದ ಕೆಲಸ ಕಡಿಮೆ. ಕೃಷಿ ಕ್ಷೇತ್ರದಲ್ಲಿ ಕಾಡಿನಂತಹ ವಾತಾವರಣ ನಿರ್ಮಾಣವಾಗುತ್ತದೆ. ಪಕ್ಷಿಗಳು, ಪ್ರಾಣಿಗಳು, ದನಕರುಗಳಿಗೆಲ್ಲ ಇಲ್ಲಿ ಆಹಾರ ಸಿಗುತ್ತದೆ. ಬಗೆಬಗೆಯ ಪ್ರಾಣಿ ಪಕ್ಷಿಗಳು ನಮ್ಮ ತೋಟದ ನಿತ್ಯದ ಅತಿಥಿಗಳು. ನಮ್ಮ ತೋಟದಲ್ಲಿ ಹೇರಳವಾಗಿರುವ ಎರೆಹುಳು, ಗೊಬ್ಬರ ಹುಳು ಮತ್ತಿತರ ಹುಳುಹುಪ್ಪಡಿಗಳನ್ನು ಹುಡುಕಿಕೊಂಡು ಬರುವ ಅವು, ತೋಟದ ಮಣ್ಣನ್ನು ಕೆದಕುತ್ತವೆ. ಅದರಿಂದ ತೋಟಕ್ಕೂ ಪ್ರಯೋಜನವಾಗುತ್ತದೆ.