– ಓಹ್... ಅದೊಂದು ಅದ್ಭುತ ಅನುಭವ. ನಾನು ಕ್ರಿಕೆಟ್ ಆಡುವಾಗ ಇಲ್ಲಿಗೆ ಬಂದು ಹೋಗಿದ್ದೇನೆ. ಆದರೆ ಈಗ ಇಲ್ಲಿರುವುದು ಒಳ್ಳೆಯ ಅವಕಾಶ. ನಮ್ಮ ವಾಹಿನಿಯ ತಂಡದೊಂದಿಗೆ, ಬೆಂಗಳೂರಿನ ನಿಜವಾದ ಶ್ರೀಮಂತಿಕೆ, ಸಂಸ್ಕೃತಿಯನ್ನು ನೋಡಿದೆ. ಯಕ್ಷಗಾನ ಅಕಾಡೆಮಿಯಲ್ಲಿ ಅವರ ಸಮರ್ಪಣಾ ಭಾವ ಮನತಟ್ಟಿತು. ದೋಸಾ, ಇಡ್ಲಿ, ಕೇಸರಿಬಾತ್ ಮತ್ತಿತರ ಖಾದ್ಯಗಳ ವೈವಿಧ್ಯ ಅಮೋಘವಾದದ್ದು. ಕರ್ನಾಟಕ ಬಹಳ ಇಷ್ಟವಾಯಿತು. ಮಳೆ ಇರದಿದ್ದರೆ ಹುಬ್ಬಳ್ಳಿಯಲ್ಲಿಯೂ ಓಡಾಡುವ ಅವಕಾಶ ಸಿಗುತ್ತಿತ್ತು. ಮುಂದಿನ ವಾರ ಮೈಸೂರಿನಲ್ಲಿರುತ್ತೇನೆ. ಆ ಊರಿನ ಬಗ್ಗೆ ಕೇಳಿದ್ದೆ. ಈಗ ನೋಡುವ ಅವಕಾಶ ಸಿಕ್ಕಿದೆ.