<p>* <strong>ಹಂಪಿ ಉತ್ಸವಕ್ಕಾಗಿ ನೀವು ಉಪವಾಸ ಕುಳಿತುಕೊಳ್ಳುವುದಾಗಿ ಹೇಳಿಕೆ ನೀಡಿದ್ದು ಏಕೆ?</strong></p>.<p>ಸರ್ಕಾರವನ್ನು ಎಚ್ಚರಿಸಲು ಉಪವಾಸ ಕೂತ್ಕೊಳ್ಳಲೇಬೇಕು. ಶಾಸಕರ ವಿಲಾಸಕ್ಕೆ, ಮಸಾಜ್ಗಳಿಗೆ ಎಪ್ಪತ್ತು ಎಂಬತ್ತು ಲಕ್ಷ ರೂಪಾಯಿ ದುರ್ಬಳಕೆ ಆಗಬಹುದು. ಆದರೆ ಸಾಂಸ್ಕೃತಿಕ ಮಹತ್ವದ ಹಂಪಿ ಉತ್ಸವ ಏಕೆ ನಡೆಯಬಾರದು?</p>.<p>* <strong>ಬರಗಾಲ ಇರುವುದರಿಂದ ಉತ್ಸವ ಬೇಡ ಎಂದು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದರಲ್ಲ...?</strong></p>.<p>ಒಂದು ವಿಷಯ ನೆನಪಿಡಿ. ಹಣಕಾಸಿಗೆ ಯಾವುದೇ ಬರಗಾಲ ಇಲ್ಲ. ಸರ್ಕಾರಕ್ಕೆ ಸಾಂಸ್ಕೃತಿಕ ಬರಗಾಲ ಬಂದಿದೆ. ಬರಗಾಲವಿದೆ ಎಂದು ಯಾರೂ ಸುಮ್ಮನೆ ಕುಳಿತುಕೊಂಡಿಲ್ಲ. ಹಾಡುವವರು ಎಂದಿನಂತೆ ಹಾಡುತ್ತಿದ್ದಾರೆ.<br />ಬರೆಯುವವರು ಬರೆಯುತ್ತಿದ್ದಾರೆ. ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಕಲೆಗೆ ಬರಗಾಲ ಬಂದಿಲ್ಲ.</p>.<p>* <strong>ಬರಗಾಲದಲ್ಲಿ ಮೈಸೂರು ದಸರಾ ನಡೆದಿತ್ತು. ಹಂಪಿ ಉತ್ಸವ ಬೇಡವೆನ್ನುವುದು ಸರ್ಕಾರದ ತಾರತಮ್ಯ ನೀತಿಯೇ?</strong></p>.<p>ಖಂಡಿತವಾಗಿ. ದಕ್ಷಿಣ ಕರ್ನಾಟಕದ ಎಲ್ಲ ಉತ್ಸವಗಳನ್ನು ಸರ್ಕಾರ ವಿಜೃಂಭಣೆಯಿಂದ ಆಚರಿಸಿದೆ. ಮೈಸೂರು ದಸರಾಗೆ ಪ್ರೇರಣೆಯಾದ ಮಹಾನವಮಿ ದಿಬ್ಬ ಇರುವುದೇ ಹಂಪಿಯಲ್ಲಿ. ಸರ್ಕಾರದ ಈ ನೀತಿಯಿಂದಾಗಿಯೇ ಉತ್ತರ ಕರ್ನಾಟಕ ಭಾಗದ ಪ್ರದೇಶಗಳು ಈಗಲೂ ಅಭಿವೃದ್ಧಿಯಲ್ಲಿ ಹಿಂದುಳಿದಿವೆ.</p>.<p><strong>* ಉತ್ಸವ ನಡೆಸಲು ಭಿಕ್ಷೆ ಬೇಡಿ ಸರ್ಕಾರಕ್ಕೆ ಹಣ ಕೊಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡರಿಗೆ ಏನು ಹೇಳುವಿರಿ?</strong></p>.<p>ಸರ್ಕಾರ ಅವರಪ್ಪನ ಮನೆಯ ದುಡ್ಡಿನಿಂದ ಉತ್ಸವ ಮಾಡುವುದಿಲ್ಲ. ಅದು ಜನರ ದುಡ್ಡು. ಉತ್ಸವಕ್ಕಾಗಿ ಯಾರೂ ಭಿಕ್ಷೆ ಬೇಡಬೇಕಾಗಿಲ್ಲ. ಕರ್ನಾಟಕದ ಭವ್ಯ ಇತಿಹಾಸ, ಪರಂಪರೆಗೆ ಸಾಕ್ಷಿಯಾದ ಜಿಲ್ಲೆಯ ಏಕೈಕ ಉತ್ಸವಕ್ಕೆ ಬೇಕಾದ ಹಣವನ್ನು ಸರ್ಕಾರವೇ ಖರ್ಚು ಮಾಡಬೇಕು.</p>.<p><strong>* ಎರಡು ದಿನ ಉತ್ಸವ ನಡೆಸುವ ಬಗ್ಗೆ ಬಳ್ಳಾರಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಉತ್ಸವಕ್ಕೆ ಎರಡು ದಿನ ಸಾಕೆ?</strong></p>.<p>ಉತ್ಸವ ಮೂರು ದಿನ ನಡೆಯಲೇಬೇಕು. ಜಿಲ್ಲಾಡಳಿತ ಸ್ವಂತ ನಿರ್ಧಾರ ಕೈಗೊಂಡಿಲ್ಲ. ಉಸ್ತುವಾರಿ ಸಚಿವರ ಪ್ರತಿಧ್ವನಿಯಾಗಿ ಕೆಲಸ ಮಾಡುತ್ತಿದೆ. ಎರಡು ದಿನದಲ್ಲಿ ಯಾವ ಉತ್ಸವ ಮಾಡುತ್ತೀರಿ? ಉತ್ಸವ ಕೇವಲ ಟಿ.ಎ., ಡಿ.ಎ ವಿಚಾರವಲ್ಲ ಎಂಬುದನ್ನು ಮೊದಲು ಸರ್ಕಾರ ತಿಳಿದುಕೊಳ್ಳಬೇಕು.</p>.<p><strong>–ಕೆ.ನರಸಿಂಹಮೂರ್ತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>* <strong>ಹಂಪಿ ಉತ್ಸವಕ್ಕಾಗಿ ನೀವು ಉಪವಾಸ ಕುಳಿತುಕೊಳ್ಳುವುದಾಗಿ ಹೇಳಿಕೆ ನೀಡಿದ್ದು ಏಕೆ?</strong></p>.<p>ಸರ್ಕಾರವನ್ನು ಎಚ್ಚರಿಸಲು ಉಪವಾಸ ಕೂತ್ಕೊಳ್ಳಲೇಬೇಕು. ಶಾಸಕರ ವಿಲಾಸಕ್ಕೆ, ಮಸಾಜ್ಗಳಿಗೆ ಎಪ್ಪತ್ತು ಎಂಬತ್ತು ಲಕ್ಷ ರೂಪಾಯಿ ದುರ್ಬಳಕೆ ಆಗಬಹುದು. ಆದರೆ ಸಾಂಸ್ಕೃತಿಕ ಮಹತ್ವದ ಹಂಪಿ ಉತ್ಸವ ಏಕೆ ನಡೆಯಬಾರದು?</p>.<p>* <strong>ಬರಗಾಲ ಇರುವುದರಿಂದ ಉತ್ಸವ ಬೇಡ ಎಂದು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದರಲ್ಲ...?</strong></p>.<p>ಒಂದು ವಿಷಯ ನೆನಪಿಡಿ. ಹಣಕಾಸಿಗೆ ಯಾವುದೇ ಬರಗಾಲ ಇಲ್ಲ. ಸರ್ಕಾರಕ್ಕೆ ಸಾಂಸ್ಕೃತಿಕ ಬರಗಾಲ ಬಂದಿದೆ. ಬರಗಾಲವಿದೆ ಎಂದು ಯಾರೂ ಸುಮ್ಮನೆ ಕುಳಿತುಕೊಂಡಿಲ್ಲ. ಹಾಡುವವರು ಎಂದಿನಂತೆ ಹಾಡುತ್ತಿದ್ದಾರೆ.<br />ಬರೆಯುವವರು ಬರೆಯುತ್ತಿದ್ದಾರೆ. ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಕಲೆಗೆ ಬರಗಾಲ ಬಂದಿಲ್ಲ.</p>.<p>* <strong>ಬರಗಾಲದಲ್ಲಿ ಮೈಸೂರು ದಸರಾ ನಡೆದಿತ್ತು. ಹಂಪಿ ಉತ್ಸವ ಬೇಡವೆನ್ನುವುದು ಸರ್ಕಾರದ ತಾರತಮ್ಯ ನೀತಿಯೇ?</strong></p>.<p>ಖಂಡಿತವಾಗಿ. ದಕ್ಷಿಣ ಕರ್ನಾಟಕದ ಎಲ್ಲ ಉತ್ಸವಗಳನ್ನು ಸರ್ಕಾರ ವಿಜೃಂಭಣೆಯಿಂದ ಆಚರಿಸಿದೆ. ಮೈಸೂರು ದಸರಾಗೆ ಪ್ರೇರಣೆಯಾದ ಮಹಾನವಮಿ ದಿಬ್ಬ ಇರುವುದೇ ಹಂಪಿಯಲ್ಲಿ. ಸರ್ಕಾರದ ಈ ನೀತಿಯಿಂದಾಗಿಯೇ ಉತ್ತರ ಕರ್ನಾಟಕ ಭಾಗದ ಪ್ರದೇಶಗಳು ಈಗಲೂ ಅಭಿವೃದ್ಧಿಯಲ್ಲಿ ಹಿಂದುಳಿದಿವೆ.</p>.<p><strong>* ಉತ್ಸವ ನಡೆಸಲು ಭಿಕ್ಷೆ ಬೇಡಿ ಸರ್ಕಾರಕ್ಕೆ ಹಣ ಕೊಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡರಿಗೆ ಏನು ಹೇಳುವಿರಿ?</strong></p>.<p>ಸರ್ಕಾರ ಅವರಪ್ಪನ ಮನೆಯ ದುಡ್ಡಿನಿಂದ ಉತ್ಸವ ಮಾಡುವುದಿಲ್ಲ. ಅದು ಜನರ ದುಡ್ಡು. ಉತ್ಸವಕ್ಕಾಗಿ ಯಾರೂ ಭಿಕ್ಷೆ ಬೇಡಬೇಕಾಗಿಲ್ಲ. ಕರ್ನಾಟಕದ ಭವ್ಯ ಇತಿಹಾಸ, ಪರಂಪರೆಗೆ ಸಾಕ್ಷಿಯಾದ ಜಿಲ್ಲೆಯ ಏಕೈಕ ಉತ್ಸವಕ್ಕೆ ಬೇಕಾದ ಹಣವನ್ನು ಸರ್ಕಾರವೇ ಖರ್ಚು ಮಾಡಬೇಕು.</p>.<p><strong>* ಎರಡು ದಿನ ಉತ್ಸವ ನಡೆಸುವ ಬಗ್ಗೆ ಬಳ್ಳಾರಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಉತ್ಸವಕ್ಕೆ ಎರಡು ದಿನ ಸಾಕೆ?</strong></p>.<p>ಉತ್ಸವ ಮೂರು ದಿನ ನಡೆಯಲೇಬೇಕು. ಜಿಲ್ಲಾಡಳಿತ ಸ್ವಂತ ನಿರ್ಧಾರ ಕೈಗೊಂಡಿಲ್ಲ. ಉಸ್ತುವಾರಿ ಸಚಿವರ ಪ್ರತಿಧ್ವನಿಯಾಗಿ ಕೆಲಸ ಮಾಡುತ್ತಿದೆ. ಎರಡು ದಿನದಲ್ಲಿ ಯಾವ ಉತ್ಸವ ಮಾಡುತ್ತೀರಿ? ಉತ್ಸವ ಕೇವಲ ಟಿ.ಎ., ಡಿ.ಎ ವಿಚಾರವಲ್ಲ ಎಂಬುದನ್ನು ಮೊದಲು ಸರ್ಕಾರ ತಿಳಿದುಕೊಳ್ಳಬೇಕು.</p>.<p><strong>–ಕೆ.ನರಸಿಂಹಮೂರ್ತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>