<p>ವಾಲ್ಮೀಕಿ ರಾಮಾಯಣದಿಂದ ಇಂದಿಗೂ ಅನುಸರಿಸಬಹು ದಾದ ಒಂದು ಮುಖ್ಯ ಸಂಗತಿ ‘ಪ್ರಜಾತಂತ್ರ’. ಪ್ರಜಾಪ್ರಭುತ್ವ ರಾಜಪ್ರಭುತ್ವವಾಗಿ ಬದಲಾದಂತೆ ಭಾಸವಾಗುತ್ತಿರುವ ಸಂಕೀರ್ಣ ಸ್ಥಿತಿಯಲ್ಲಿ ಪ್ರಸ್ತುತ ನಾವಿದ್ದೇವೆ. ಹಣ, ಧರ್ಮ, ಇತ್ಯಾದಿಗಳಿಗಾಗಿ ತಮ್ಮ ಮತವನ್ನು ಮಾರಿಕೊಳ್ಳುವವರೇ ಹೆಚ್ಚು. ಇದಕ್ಕೊಂದು ಪರಿಹಾರವನ್ನು ನಾವು ನಡೆದುಬಂದ ಪರಂಪರೆಯಿಂದಲೇ ಹುಡುಕಬೇಕಲ್ಲವೇ?</p>.<p>ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಲ್ಲಿ ಪ್ರಜಾತಂತ್ರಕ್ಕೆ ಅತ್ಯುತ್ತಮ ನಿದರ್ಶನಗಳಿವೆ. ಪ್ರಜೆಗಳಿಂದ ರಾಜನ ಆಯ್ಕೆ ಎನ್ನುವುದೊಂದು ನ್ಯಾಯಯುತ ರಾಜಕೀಯ ಪರಿಕಲ್ಪನೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನಿಗೆ ಪಟ್ಟವಾಗುವುದು ಹಿರಿತನದಿಂದ ಸರಿಯಾದುದಾಗಿದ್ದರೂ, ಯುವರಾಜನನ್ನು ಘೋಷಿಸುವಾಗ ಪ್ರಜೆಗಳ ಇಂಗಿತವನ್ನು ಅರಿತೇ ಆಯ್ಕೆ ಮಾಡಲಾಗಿತ್ತು. ‘ತಮೇವಂ ವೃತ್ತಸಂಪನ್ನಂ ಅಪ್ರಧೃಷ್ಯಪರಾಕ್ರಮ, ಲೋಕಪಾಲೋಪಮಂ ನಾಥಮಕಾಮಯತ ಮೇದಿನೀ’. ಇಲ್ಲಿ ರಾಜನ ಆಯ್ಕೆ ಜನರ ಇಚ್ಛೆಯಾಗಿದೆ.</p>.<p>ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿಚಾರ ವಿನಿಮಯ, ಚರ್ಚೆಗಳ ಮೂಲಕವೇ ನಿರ್ಧರಿಸಲಾಗುತ್ತಿತ್ತು ಎನ್ನುವುದಕ್ಕೆ ರಾಮಾಯಣದಲ್ಲಿ ಉದಾಹರಣೆಗಳಿವೆ. ಜನಪ್ರತಿನಿಧಿಗಳು ಮತ್ತು ಸಾಮಂತರ ಎದುರಿಗೆ ವಿಚಾರಗಳನ್ನು ಮಂಡಿಸಿದ ನಂತರವೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿತ್ತು. ಅಂತಹ ಮಂಡನೆಗಳನ್ನು ಮಾನ್ಯ ಮಾಡಲೇಬೇಕೆಂಬ ನಿಯಮವಿರಲಿಲ್ಲ. ರಾಮ ಜೇಷ್ಠಪುತ್ರ, ಆದರೂ ದಶರಥ ಲೋಕಸಭೆಯನ್ನು ಕರೆಯುತ್ತಾನೆ, ತನ್ನ ಇಂಗಿತವನ್ನು ಪ್ರಸ್ತಾಪಿಸುತ್ತಾನೆ. ಜನಪ್ರತಿನಿಧಿಗಳಿಗೂ, ಸಾಮಂತರಿಗೂ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡುತ್ತಾನೆ.</p>.<p>‘ನಾನು ಹೇಳಿರುವ ಮಾತು ನನಗೆ ಪ್ರಿಯವಾದುದಾಗಿದ್ದರೂ, ನಿಮಗೆ ಅಹಿತವಾಗಿದ್ದರೆ, ಸರಿಯಾದ ನಿರ್ಣಯವನ್ನು ಸೂಚಿಸಬಹುದು. ಈ ವಿಷಯದ ಕುರಿತಂತೆ ಪರಿಶೀಲಿಸಿ ನಿರ್ಣಯ ಕೈಗೊಳ್ಳಲೆಂದೇ ಪ್ರಸ್ತಾಪವನ್ನು ಮಂಡಿಸಿದ್ದೇನೆ’ ಎಂದು ದಶರಥ ವಿನಮ್ರವಾಗಿ ಕೇಳಿಕೊಳ್ಳುತ್ತಾನೆ. ಇದು ನಿಜವಾದ ಪ್ರಜಾತಂತ್ರ. ಇಲ್ಲಿ ನಿರಂಕುಶ ಅಧಿಕಾರಕ್ಕೆ ಜಾಗವೇ ಇಲ್ಲ. </p>.<p>ಒಮ್ಮೆ ಮತದಾರರನ್ನು ಮರುಳು ಮಾಡಿ, ಐದು ವರ್ಷ ಜನರನ್ನು ನರಳಿಸುವ ಇಂದಿನ ಪ್ರಜಾತಂತ್ರವನ್ನು ಬದಲಿಸಿ– ಹೊಸ ದೃಷ್ಟಿಕೋನ, ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಜಾತಿ, ಧರ್ಮ, ಹಣವನ್ನು ತಿರಸ್ಕರಿಸಿ ಯೋಗ್ಯತೆಯನ್ನೇ ಮುಖ್ಯವಾಗಿರಿಸಿ ಪ್ರಜಾಪ್ರತಿನಿಧಿಗಳನ್ನು ಆರಿಸುವ ತುರ್ತು ಇಂದಿನದು.</p>.<p>‘ರಾಮರಾಜ್ಯ’ ಎನ್ನುವುದು ಧರ್ಮ ಅಥವಾ ಮತದ ಹಿನ್ನೆಲೆಯುಳ್ಳ ಕಲ್ಪನೆಯಲ್ಲ. ಅದೊಂದು ‘ಪ್ರಜಾತಂತ್ರ’ ತಳಹದಿಯ ರಾಜಕೀಯ ವ್ಯವಸ್ಥೆ. ಇಂದು ಭಾವಿತವಾಗುತ್ತಿರುವ ‘ರಾಮರಾಜ್ಯ’ದ ಕಲ್ಪನೆ ಆ ಹೆಸರಿಗೆ ವಿರುದ್ಧವಾದದ್ದು. ದಶರಥನಂತೆ ವಿನಂತಿಸಿಕೊಳ್ಳುವ, ರಾಮನಂತೆ ಕಾಡಿಗೆ ತೆರಳುವ, ಭರತನಂತೆ ಆಡಳಿತ ನಡೆಸುವ ಮನಃಸ್ಥಿತಿ ಈಗ ಎಲ್ಲಿದೆ? ನಾಗರಿಕತೆಯ ತುತ್ತ ತುದಿಯಲ್ಲಿರುವ ನಾವು ರಾಮಾಯಣ ಕಾಲದ ರಾಜಕೀಯ ತತ್ತ್ವಗಳನ್ನು ಅಳವಡಿಸಿಕೊಳ್ಳುವ, ಮಾನವೀಯರಾಗಬೇಕಿರುವ ಅಗತ್ಯಗಳನ್ನು ಶೋಧಿಸಬೇಕಿದೆ.</p>.<p>ರಾಜಕೀಯ ವ್ಯವಸ್ಥೆಯಲ್ಲಿ ಯಾವುದೋ ಒಂದು ರಾಜತಂತ್ರವೇ ಸರ್ವಶ್ರೇಷ್ಠ ಎಂದು ವೈಭವೀಕರಿಸುವುದಕ್ಕಿಂತ, ಆ ‘ರಾಜತಂತ್ರ’ವನ್ನು ನಿಯಂತ್ರಿಸಿ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆ ಈಗ ಬಹಳಷ್ಟಿದೆ. ರಾಮಾಯಣದಲ್ಲಿ ‘ಶಾಸನಸಂಸ್ಥೆ’ ಉಪಜೀವನದ ಮಾರ್ಗವಲ್ಲ, ಅದೊಂದು ನಿಸ್ವಾರ್ಥ ಸೇವೆ, ಬದ್ಧತೆ; ಪ್ರಜೆಗಳನ್ನೇ ಸರ್ವಸಂಪತ್ತೆಂದು ಭಾವಿಸಬೇಕಾಗಿರುವ ಹುದ್ದೆ. ಪ್ರಜೆಗಳಿಗೆ ಯಾವ ನ್ಯಾಯವೋ ರಾಜನಿಗೂ ಅದೇ ನ್ಯಾಯ ಎನ್ನುವುದು ವಾಲ್ಮೀಕಿಯ ನ್ಯಾಯವ್ಯವಸ್ಥೆ! ಹಾಗಾಗಿಯೇ ರಾಮನ ವನವಾಸ, ಸೀತೆಯ ಅಗ್ನಿಪ್ರವೇಶ ಘಟನೆಗಳು ಜರುಗಿದ್ದು. ವಾಲ್ಮೀಕಿ ರಾಮನ ಪಾತ್ರದಲ್ಲಿ ಕಂಡದ್ದು ಆದರ್ಶ ರಾಜನನ್ನು ಎನ್ನುವುದಕ್ಕಿಂತ ಆದರ್ಶ ಪ್ರಜಾಸೇವಕನನ್ನು. ರಾಮಾಯಣ ಮಹಾಕಾವ್ಯವೇ ಮನುಷ್ಯನ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುವ ಕಾವ್ಯ. ಕವಿ ವಾಲ್ಮೀಕಿ ಕಂಡ ಕನಸೇ ‘ರಾಮರಾಜ್ಯ.’</p>.<p>ಇಂದಿನ ಯುವಜನತೆ, ರಾಮಾಯಣ ಕಾಲದ ಪ್ರಜೆಗಳಂತೆ ಬುದ್ಧಿವಂತಿಕೆಯಿಂದ ನಮ್ಮನಾಳುವವರನ್ನು ಆರಿಸಿ ಕಳಿಸಬೇಕಿದೆ. ಇಲ್ಲವಾದರೆ ನಿರಂಕುಶ ಆಡಳಿತ ಮರಳುವ ದಿನಗಳು ದೂರವೇನಿಲ್ಲ. ತಾನು, ತನ್ನ ಮಗ ಅಥವಾ ಮಗಳು, ತನ್ನ ಕುಟುಂಬ ಇವರೇ ತನ್ನ ಉತ್ತರಾಧಿಕಾರಿಯಾಗಿ ಮುಂದುವರಿಯಬೇಕು ಎನ್ನುವಂತಹ ಧೋರಣೆಗಳನ್ನು ಜನ ಧಿಕ್ಕರಿಸಬೇಕಿದೆ.</p>.<p>ರಾಮಾಯಣ ಏಕಮುಖ ಬೋಧನಾ ಕಾವ್ಯವಲ್ಲ. ರಾಜನಿಗೆ ರಾಜನ ಕಾರ್ಯಗಳನ್ನು, ಕರ್ತವ್ಯಗಳನ್ನು ತಿಳಿಸಿದರೆ, ಪ್ರಜೆಗಳಿಗೆ ಅವರ ಜವಾಬ್ದಾರಿಯನ್ನೂ ನೆನಪಿಸುವ ಕಾವ್ಯ; ವ್ಯಕ್ತಿ–ವ್ಯಕ್ತಿತ್ವಗಳನ್ನು ಸರಿಪಡಿಸಿಕೊಳ್ಳಬಹುದಾದ ಸಾಧ್ಯತೆಗಳಿರುವ ಕಾವ್ಯ. ಹಾಗಾಗಿಯೇ ರಾಮಾಯಣದ ರಾಮ, ಲಕ್ಷ್ಮಣ, ಸೀತೆ, ಭರತನೆಂಬ ಹೆಸರುಗಳು ನಮ್ಮ ಭಾವಕೋಶದ ಭಾಗವಾಗಿವೆ.</p>.<p>ರಾಮನಂತಾಗುವುದು ಸಾಧ್ಯವಾಗದಿರಬಹುದು, ಇತರರಿಗೆ ಕೇಡು ಬಯಸದೇ ಬದುಕುವುದು ಎಲ್ಲರಿಗೂ ಸಾಧ್ಯ. ಅಷ್ಟರಮಟ್ಟಿನ ಪರಿವರ್ತನೆಯಾದರೂ ಸಾಧ್ಯವಾಗದೆ ಹೋದರೆ ನಮ್ಮ ನಾಳಿನ ಬದುಕನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿಲ್ಲ. ದುರದೃಷ್ಟಕರ ಸಂಗತಿಯೆಂದರೆ, ರಾಮಾಯಣದ ವ್ಯಕ್ತಿತ್ವಗಳು ನೀತಿಪಾಠ ಆಗಬೇಕಿರುವಾಗ ಈ ಕಾಲದಲ್ಲಿ ವ್ಯಕ್ತಿ ವೈಭವೀಕರಣ ಪ್ರಕ್ರಿಯೆ ನಿರಂತರ ಚಾಲ್ತಿಯಲ್ಲಿದೆ. ‘ರಾಮ’ ದೈವವಾಗಿ ಆರಾಧನೆಗೊಳ್ಳುತ್ತಿದ್ದಾನೆಯೇ ಹೊರತು ವ್ಯಕ್ತಿಯಾಗಿ ಅಲ್ಲ. ಅವನ ವ್ಯಕ್ತಿತ್ವದ ಪಾಲನೆ ಯಾರಿಗೂ ಬೇಡದ ವಿಚಾರ. ಸರ್ವರ ರಾಮ ಆಗಬೇಕಾಗಿದ್ದವನು, ಒಂದು ಧರ್ಮದ ರಾಮನಾಗಿ ಮಂದಿರದ ಗರ್ಭಗುಡಿಗೆ ಸೀಮಿತನಾಗಿದ್ದಾನೆ.</p>.<p>ನಮಗಿಂದು ರಾಮ ವೇದ್ಯನಾಗಬೇಕಾಗಿರುವುದು ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ಹಾಗೂ ಮಾರ್ಗದರ್ಶಕನಾಗಿ. ಈ ಅರಿವು ಸಾಮಾಜಿಕ ಸೌಹಾರ್ದಕ್ಕೂ ಪೂರಕವಾದುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾಲ್ಮೀಕಿ ರಾಮಾಯಣದಿಂದ ಇಂದಿಗೂ ಅನುಸರಿಸಬಹು ದಾದ ಒಂದು ಮುಖ್ಯ ಸಂಗತಿ ‘ಪ್ರಜಾತಂತ್ರ’. ಪ್ರಜಾಪ್ರಭುತ್ವ ರಾಜಪ್ರಭುತ್ವವಾಗಿ ಬದಲಾದಂತೆ ಭಾಸವಾಗುತ್ತಿರುವ ಸಂಕೀರ್ಣ ಸ್ಥಿತಿಯಲ್ಲಿ ಪ್ರಸ್ತುತ ನಾವಿದ್ದೇವೆ. ಹಣ, ಧರ್ಮ, ಇತ್ಯಾದಿಗಳಿಗಾಗಿ ತಮ್ಮ ಮತವನ್ನು ಮಾರಿಕೊಳ್ಳುವವರೇ ಹೆಚ್ಚು. ಇದಕ್ಕೊಂದು ಪರಿಹಾರವನ್ನು ನಾವು ನಡೆದುಬಂದ ಪರಂಪರೆಯಿಂದಲೇ ಹುಡುಕಬೇಕಲ್ಲವೇ?</p>.<p>ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಲ್ಲಿ ಪ್ರಜಾತಂತ್ರಕ್ಕೆ ಅತ್ಯುತ್ತಮ ನಿದರ್ಶನಗಳಿವೆ. ಪ್ರಜೆಗಳಿಂದ ರಾಜನ ಆಯ್ಕೆ ಎನ್ನುವುದೊಂದು ನ್ಯಾಯಯುತ ರಾಜಕೀಯ ಪರಿಕಲ್ಪನೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನಿಗೆ ಪಟ್ಟವಾಗುವುದು ಹಿರಿತನದಿಂದ ಸರಿಯಾದುದಾಗಿದ್ದರೂ, ಯುವರಾಜನನ್ನು ಘೋಷಿಸುವಾಗ ಪ್ರಜೆಗಳ ಇಂಗಿತವನ್ನು ಅರಿತೇ ಆಯ್ಕೆ ಮಾಡಲಾಗಿತ್ತು. ‘ತಮೇವಂ ವೃತ್ತಸಂಪನ್ನಂ ಅಪ್ರಧೃಷ್ಯಪರಾಕ್ರಮ, ಲೋಕಪಾಲೋಪಮಂ ನಾಥಮಕಾಮಯತ ಮೇದಿನೀ’. ಇಲ್ಲಿ ರಾಜನ ಆಯ್ಕೆ ಜನರ ಇಚ್ಛೆಯಾಗಿದೆ.</p>.<p>ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿಚಾರ ವಿನಿಮಯ, ಚರ್ಚೆಗಳ ಮೂಲಕವೇ ನಿರ್ಧರಿಸಲಾಗುತ್ತಿತ್ತು ಎನ್ನುವುದಕ್ಕೆ ರಾಮಾಯಣದಲ್ಲಿ ಉದಾಹರಣೆಗಳಿವೆ. ಜನಪ್ರತಿನಿಧಿಗಳು ಮತ್ತು ಸಾಮಂತರ ಎದುರಿಗೆ ವಿಚಾರಗಳನ್ನು ಮಂಡಿಸಿದ ನಂತರವೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿತ್ತು. ಅಂತಹ ಮಂಡನೆಗಳನ್ನು ಮಾನ್ಯ ಮಾಡಲೇಬೇಕೆಂಬ ನಿಯಮವಿರಲಿಲ್ಲ. ರಾಮ ಜೇಷ್ಠಪುತ್ರ, ಆದರೂ ದಶರಥ ಲೋಕಸಭೆಯನ್ನು ಕರೆಯುತ್ತಾನೆ, ತನ್ನ ಇಂಗಿತವನ್ನು ಪ್ರಸ್ತಾಪಿಸುತ್ತಾನೆ. ಜನಪ್ರತಿನಿಧಿಗಳಿಗೂ, ಸಾಮಂತರಿಗೂ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡುತ್ತಾನೆ.</p>.<p>‘ನಾನು ಹೇಳಿರುವ ಮಾತು ನನಗೆ ಪ್ರಿಯವಾದುದಾಗಿದ್ದರೂ, ನಿಮಗೆ ಅಹಿತವಾಗಿದ್ದರೆ, ಸರಿಯಾದ ನಿರ್ಣಯವನ್ನು ಸೂಚಿಸಬಹುದು. ಈ ವಿಷಯದ ಕುರಿತಂತೆ ಪರಿಶೀಲಿಸಿ ನಿರ್ಣಯ ಕೈಗೊಳ್ಳಲೆಂದೇ ಪ್ರಸ್ತಾಪವನ್ನು ಮಂಡಿಸಿದ್ದೇನೆ’ ಎಂದು ದಶರಥ ವಿನಮ್ರವಾಗಿ ಕೇಳಿಕೊಳ್ಳುತ್ತಾನೆ. ಇದು ನಿಜವಾದ ಪ್ರಜಾತಂತ್ರ. ಇಲ್ಲಿ ನಿರಂಕುಶ ಅಧಿಕಾರಕ್ಕೆ ಜಾಗವೇ ಇಲ್ಲ. </p>.<p>ಒಮ್ಮೆ ಮತದಾರರನ್ನು ಮರುಳು ಮಾಡಿ, ಐದು ವರ್ಷ ಜನರನ್ನು ನರಳಿಸುವ ಇಂದಿನ ಪ್ರಜಾತಂತ್ರವನ್ನು ಬದಲಿಸಿ– ಹೊಸ ದೃಷ್ಟಿಕೋನ, ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಜಾತಿ, ಧರ್ಮ, ಹಣವನ್ನು ತಿರಸ್ಕರಿಸಿ ಯೋಗ್ಯತೆಯನ್ನೇ ಮುಖ್ಯವಾಗಿರಿಸಿ ಪ್ರಜಾಪ್ರತಿನಿಧಿಗಳನ್ನು ಆರಿಸುವ ತುರ್ತು ಇಂದಿನದು.</p>.<p>‘ರಾಮರಾಜ್ಯ’ ಎನ್ನುವುದು ಧರ್ಮ ಅಥವಾ ಮತದ ಹಿನ್ನೆಲೆಯುಳ್ಳ ಕಲ್ಪನೆಯಲ್ಲ. ಅದೊಂದು ‘ಪ್ರಜಾತಂತ್ರ’ ತಳಹದಿಯ ರಾಜಕೀಯ ವ್ಯವಸ್ಥೆ. ಇಂದು ಭಾವಿತವಾಗುತ್ತಿರುವ ‘ರಾಮರಾಜ್ಯ’ದ ಕಲ್ಪನೆ ಆ ಹೆಸರಿಗೆ ವಿರುದ್ಧವಾದದ್ದು. ದಶರಥನಂತೆ ವಿನಂತಿಸಿಕೊಳ್ಳುವ, ರಾಮನಂತೆ ಕಾಡಿಗೆ ತೆರಳುವ, ಭರತನಂತೆ ಆಡಳಿತ ನಡೆಸುವ ಮನಃಸ್ಥಿತಿ ಈಗ ಎಲ್ಲಿದೆ? ನಾಗರಿಕತೆಯ ತುತ್ತ ತುದಿಯಲ್ಲಿರುವ ನಾವು ರಾಮಾಯಣ ಕಾಲದ ರಾಜಕೀಯ ತತ್ತ್ವಗಳನ್ನು ಅಳವಡಿಸಿಕೊಳ್ಳುವ, ಮಾನವೀಯರಾಗಬೇಕಿರುವ ಅಗತ್ಯಗಳನ್ನು ಶೋಧಿಸಬೇಕಿದೆ.</p>.<p>ರಾಜಕೀಯ ವ್ಯವಸ್ಥೆಯಲ್ಲಿ ಯಾವುದೋ ಒಂದು ರಾಜತಂತ್ರವೇ ಸರ್ವಶ್ರೇಷ್ಠ ಎಂದು ವೈಭವೀಕರಿಸುವುದಕ್ಕಿಂತ, ಆ ‘ರಾಜತಂತ್ರ’ವನ್ನು ನಿಯಂತ್ರಿಸಿ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆ ಈಗ ಬಹಳಷ್ಟಿದೆ. ರಾಮಾಯಣದಲ್ಲಿ ‘ಶಾಸನಸಂಸ್ಥೆ’ ಉಪಜೀವನದ ಮಾರ್ಗವಲ್ಲ, ಅದೊಂದು ನಿಸ್ವಾರ್ಥ ಸೇವೆ, ಬದ್ಧತೆ; ಪ್ರಜೆಗಳನ್ನೇ ಸರ್ವಸಂಪತ್ತೆಂದು ಭಾವಿಸಬೇಕಾಗಿರುವ ಹುದ್ದೆ. ಪ್ರಜೆಗಳಿಗೆ ಯಾವ ನ್ಯಾಯವೋ ರಾಜನಿಗೂ ಅದೇ ನ್ಯಾಯ ಎನ್ನುವುದು ವಾಲ್ಮೀಕಿಯ ನ್ಯಾಯವ್ಯವಸ್ಥೆ! ಹಾಗಾಗಿಯೇ ರಾಮನ ವನವಾಸ, ಸೀತೆಯ ಅಗ್ನಿಪ್ರವೇಶ ಘಟನೆಗಳು ಜರುಗಿದ್ದು. ವಾಲ್ಮೀಕಿ ರಾಮನ ಪಾತ್ರದಲ್ಲಿ ಕಂಡದ್ದು ಆದರ್ಶ ರಾಜನನ್ನು ಎನ್ನುವುದಕ್ಕಿಂತ ಆದರ್ಶ ಪ್ರಜಾಸೇವಕನನ್ನು. ರಾಮಾಯಣ ಮಹಾಕಾವ್ಯವೇ ಮನುಷ್ಯನ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುವ ಕಾವ್ಯ. ಕವಿ ವಾಲ್ಮೀಕಿ ಕಂಡ ಕನಸೇ ‘ರಾಮರಾಜ್ಯ.’</p>.<p>ಇಂದಿನ ಯುವಜನತೆ, ರಾಮಾಯಣ ಕಾಲದ ಪ್ರಜೆಗಳಂತೆ ಬುದ್ಧಿವಂತಿಕೆಯಿಂದ ನಮ್ಮನಾಳುವವರನ್ನು ಆರಿಸಿ ಕಳಿಸಬೇಕಿದೆ. ಇಲ್ಲವಾದರೆ ನಿರಂಕುಶ ಆಡಳಿತ ಮರಳುವ ದಿನಗಳು ದೂರವೇನಿಲ್ಲ. ತಾನು, ತನ್ನ ಮಗ ಅಥವಾ ಮಗಳು, ತನ್ನ ಕುಟುಂಬ ಇವರೇ ತನ್ನ ಉತ್ತರಾಧಿಕಾರಿಯಾಗಿ ಮುಂದುವರಿಯಬೇಕು ಎನ್ನುವಂತಹ ಧೋರಣೆಗಳನ್ನು ಜನ ಧಿಕ್ಕರಿಸಬೇಕಿದೆ.</p>.<p>ರಾಮಾಯಣ ಏಕಮುಖ ಬೋಧನಾ ಕಾವ್ಯವಲ್ಲ. ರಾಜನಿಗೆ ರಾಜನ ಕಾರ್ಯಗಳನ್ನು, ಕರ್ತವ್ಯಗಳನ್ನು ತಿಳಿಸಿದರೆ, ಪ್ರಜೆಗಳಿಗೆ ಅವರ ಜವಾಬ್ದಾರಿಯನ್ನೂ ನೆನಪಿಸುವ ಕಾವ್ಯ; ವ್ಯಕ್ತಿ–ವ್ಯಕ್ತಿತ್ವಗಳನ್ನು ಸರಿಪಡಿಸಿಕೊಳ್ಳಬಹುದಾದ ಸಾಧ್ಯತೆಗಳಿರುವ ಕಾವ್ಯ. ಹಾಗಾಗಿಯೇ ರಾಮಾಯಣದ ರಾಮ, ಲಕ್ಷ್ಮಣ, ಸೀತೆ, ಭರತನೆಂಬ ಹೆಸರುಗಳು ನಮ್ಮ ಭಾವಕೋಶದ ಭಾಗವಾಗಿವೆ.</p>.<p>ರಾಮನಂತಾಗುವುದು ಸಾಧ್ಯವಾಗದಿರಬಹುದು, ಇತರರಿಗೆ ಕೇಡು ಬಯಸದೇ ಬದುಕುವುದು ಎಲ್ಲರಿಗೂ ಸಾಧ್ಯ. ಅಷ್ಟರಮಟ್ಟಿನ ಪರಿವರ್ತನೆಯಾದರೂ ಸಾಧ್ಯವಾಗದೆ ಹೋದರೆ ನಮ್ಮ ನಾಳಿನ ಬದುಕನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿಲ್ಲ. ದುರದೃಷ್ಟಕರ ಸಂಗತಿಯೆಂದರೆ, ರಾಮಾಯಣದ ವ್ಯಕ್ತಿತ್ವಗಳು ನೀತಿಪಾಠ ಆಗಬೇಕಿರುವಾಗ ಈ ಕಾಲದಲ್ಲಿ ವ್ಯಕ್ತಿ ವೈಭವೀಕರಣ ಪ್ರಕ್ರಿಯೆ ನಿರಂತರ ಚಾಲ್ತಿಯಲ್ಲಿದೆ. ‘ರಾಮ’ ದೈವವಾಗಿ ಆರಾಧನೆಗೊಳ್ಳುತ್ತಿದ್ದಾನೆಯೇ ಹೊರತು ವ್ಯಕ್ತಿಯಾಗಿ ಅಲ್ಲ. ಅವನ ವ್ಯಕ್ತಿತ್ವದ ಪಾಲನೆ ಯಾರಿಗೂ ಬೇಡದ ವಿಚಾರ. ಸರ್ವರ ರಾಮ ಆಗಬೇಕಾಗಿದ್ದವನು, ಒಂದು ಧರ್ಮದ ರಾಮನಾಗಿ ಮಂದಿರದ ಗರ್ಭಗುಡಿಗೆ ಸೀಮಿತನಾಗಿದ್ದಾನೆ.</p>.<p>ನಮಗಿಂದು ರಾಮ ವೇದ್ಯನಾಗಬೇಕಾಗಿರುವುದು ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ಹಾಗೂ ಮಾರ್ಗದರ್ಶಕನಾಗಿ. ಈ ಅರಿವು ಸಾಮಾಜಿಕ ಸೌಹಾರ್ದಕ್ಕೂ ಪೂರಕವಾದುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>