ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ಕಾಲೆಬುಡ್ಡೆ, ಗೌರವ ಕಾರ್ಯದರ್ಶಿ ಎ.ಆರ್.ಜೆ. ಪಠಾಣ್, ಜಂಟಿ ಕಾರ್ಯದರ್ಶಿ ಅಬ್ದುಲ್ ಅಜೀಜ್ ಗಂಗೊಳ್ಳಿ ಹಾಗೂ ಖಜಾಂಚಿ ಬಾಶಿ ಎಚ್. ಮುನ್ಷಿ ಅವರು ‘ಮುಸ್ಲಿಂ ಸಮುದಾಯದ ಧರ್ಮನಿರಪೇಕ್ಷತೆ ಹಾಗೂ ದೇಶಭಕ್ತಿಯನ್ನು ಸಂಶಯರಹಿತವಾಗಿ ರುಜುವಾತುಪಡಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದಿದ್ದಾರೆ.