25 ವರ್ಷಗಳ ಹಿಂದೆ | ಮಂಗಳವಾರ, 20–1–1998

ಸಮಾನ ಪ್ರಣಾಳಿಕೆಯಲ್ಲಿ ಸ್ಪರ್ಧೆಗೆ ರಂಗ ನಿರ್ಧಾರ
ಹೈದರಾಬಾದ್, ಜ. 19– ಒಂದೇ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು 13 ಘಟಕ ಪಕ್ಷಗಳ ಸಂಯುಕ್ತ ರಂಗ ಇಂದು ನಿರ್ಧರಿಸಿದೆ.
ಇಂದು ಇಲ್ಲಿ ನಡೆದ ರಂಗದ ನಿರ್ಣಾಯಕ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಚುನಾವಣಾ ಪ್ರಣಾಳಿಕೆಯನ್ನು ಜ. 30ರಂದು ದೆಹಲಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಭೆಯ ನಂತರ ರಂಗದ ವಕ್ತಾರ ಎಸ್. ಜೈಪಾಲ್ ರೆಡ್ಡಿ ಅವರು ಪತ್ರಕರ್ತರಿಗೆ ತಿಳಿಸಿದರು.
ಪ್ರಣಾಳಿಕೆಯಲ್ಲಿ ಬೊಫೋರ್ಸ್ ವಿಷಯವೂ ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಬಿಎಸ್ಪಿ ಜತೆ ಮೈತ್ರಿಗೆ ಬಂಗಾರಪ್ಪ ನಿರ್ಧಾರ
ಬೆಂಗಳೂರು, ಜ. 19– ಜನತಾದಳದೊಂದಿಗೆ ಚುನಾವಣಾ ಮೈತ್ರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ನೇತೃತ್ವದ ಕರ್ನಾಟಕ ವಿಕಾಸ ಪಕ್ಷವು ಕಾನ್ಶಿರಾಂ ನೇತೃತ್ವದ ಬಹುಜನ ಸಮಾಜ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧವಾಗಿದೆ.
ಹೊಂದಾಣಿಕೆ ಸಂಬಂಧ ರಾಜ್ಯ ಜನತಾದಳದ ಮುಖಂಡರು ಹಾಗೂ ಬಂಗಾರಪ್ಪ ಅವರ ನಡುವೆ ಎರಡು ಸುತ್ತಿನ ಮಾತುಕತೆ ನಡೆದರೂ ಸ್ಥಾನಗಳ ಹಂಚಿಕೆ ಯಲ್ಲಿ ಎರಡೂ ಪಕ್ಷಗಳ ಮುಖಂಡರ ನಡುವೆ ಒಮ್ಮತ ಏರ್ಪಡದಿದ್ದರಿಂದ ಹೊಂದಾಣಿಕೆ ಮಾತುಕತೆ ವಿಫಲವಾಯಿತು ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.