ನವದೆಹಲಿ, ಡಿ. 6– ನಾಲ್ಕು ವರ್ಷಗಳ ಹಿಂದೆ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಿದ ಘಟನೆ ಇಂದು ಸಂಸತ್ತಿನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು. ತೀವ್ರ ಗದ್ದಲ, ಕೂಗಾಟದ ನಡುವೆ ಲೋಕಸಭೆಯನ್ನು ಎರಡು ಬಾರಿ ಮುಂದೂಡಿದರೆ, ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.